ಶಿರಸಿ: ‘ಗಿಡ, ಕಳೆಗಳಿಂದ ಮುಚ್ಚಿ ಹೋಗಿರುವ ಎಕ್ಕಂಬಿ ಗ್ರಾಮದ ಕೆರೆಯನ್ನು ಸಂರಕ್ಷಿಸಿ. ಈ ಕೆರೆಯನ್ನು ಹೂಳೆತ್ತಿ ನೀರು ತುಂಬಲು ಅವಕಾಶ ಕೊಡಿ’ ಎಂಬ ಭಿತ್ತಿಪತ್ರವನ್ನು ಕೆರೆಯ ಸುತ್ತ ಅಂಟಿಸಿ ಜಾಗೃತಿ ಮೂಡಿಸಿದವರು ಪರಿಸರವಾದಿಗಳಲ್ಲ, ಬಿಸಲಕೊಪ್ಪದ ಸೂರ್ಯ ನಾರಾಯಣ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳು.