ಪುನರ್ವಸತಿ ಕೇಂದ್ರಕ್ಕೆ ಆಗ್ರಹ: ಪ್ರತಿ ವರ್ಷ ದಾಂಡೇಲಿಯಿಂದ 60-70ರಷ್ಟು ಕಾಡಾನೆಗಳು ಆಹಾರ ಅರಸಿ ಹಳಿಯಾಳ-ಖಾನಾಪುರ, ಸಾಂಬ್ರಾಣಿ-ಭಗವತಿ, ಯಲ್ಲಾಪುರ-ಮುಂಡಗೋಡ ಮಾರ್ಗದಲ್ಲಿ ಸಂಚರಿಸುತ್ತವೆ. ಗಾಯಗೊಂಡ ಸಮಯದಲ್ಲಿ ಚಿಕಿತ್ಸೆ ಕೊಡಿಸಲು, ಶಿವಮೊಗ್ಗದ ಸಕ್ರೇಬೈಲ್ ಆನೆ ಬಿಡಾರದ ವೈದ್ಯರೇ ಬರಬೇಕು. ದಾಂಡೇಲಿ ಹುಲಿ ಸಂರಕ್ಷಿತ ವ್ಯಾಪ್ತಿಯಲ್ಲಿಯೇ ಆನೆಗಳ ಪುನರ್ವಸತಿ ಕೇಂದ್ರ ಮಾಡಿದರೆ, ಕಾಡಾನೆಗಳ ಜೀವ ಉಳಿಸಲು ಸಾಧ್ಯವಾಗುತ್ತದೆ ಎಂದು ವನ್ಯಜೀವಿ ಹೋರಾಟಗಾರರು ಒತ್ತಾಯಿಸಿದ್ದಾರೆ.