ಕನ್ನಡದ ಪ್ರಥಮ ರಾಜಮನೆತನದ ಹೆಸರು ಕದಂಬ. ಮಯೂರವರ್ಮನ ಮನೆಯ ಎದುರು ಕದಂಬ ವೃಕ್ಷ ಇದ್ದಕಾರಣಕ್ಕಾಗಿ ಈ ಮನೆತನಕ್ಕೆ 'ಕದಂಬ' ಹೆಸರು ಬಂತು ಎಂಬ ಪ್ರತೀತಿ ಇದೆ. ಇಂದು ಈ ಸಸ್ಯ ವಿನಾಶದ ಅಂಚಿನಲ್ಲಿರುವುದನ್ನು ಮನಗಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದಾಗ, ಎರಡು ವರ್ಷ ಶ್ರಮವಹಿಸಿ ಅವರು ಬೀಜ ಸಂಗ್ರಹಿಸಿ, ಸಸಿ ಬೆಳೆಸಿದ್ದಾರೆ ಎಂದರು.