ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕದಂಬ ವೃಕ್ಷಗಳ ನೆಲೆವೀಡಾಗಲಿ ಬನವಾಸಿ: ಅನಂತಕುಮಾರ ಹೆಗಡೆ

Last Updated 1 ಜುಲೈ 2018, 7:35 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಬನವಾಸಿಯಲ್ಲಿ ಉದ್ದೇಶಿತ ಕದಂಬ ವನದಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಕದಂಬ ಸಸಿ ನಾಟಿ ಮಾಡಿದರು.

ಕನ್ನಡದ ಪ್ರಥಮ ರಾಜಮನೆತನದ ಹೆಸರು ಕದಂಬ. ಮಯೂರವರ್ಮನ ಮನೆಯ ಎದುರು ಕದಂಬ ವೃಕ್ಷ ಇದ್ದಕಾರಣಕ್ಕಾಗಿ ಈ ಮನೆತನಕ್ಕೆ 'ಕದಂಬ' ಹೆಸರು ಬಂತು ಎಂಬ ಪ್ರತೀತಿ ಇದೆ. ಇಂದು ಈ ಸಸ್ಯ ವಿನಾಶದ ಅಂಚಿನಲ್ಲಿರುವುದನ್ನು ಮನಗಂಡು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದಾಗ, ಎರಡು ವರ್ಷ ಶ್ರಮವಹಿಸಿ ಅವರು ಬೀಜ ಸಂಗ್ರಹಿಸಿ, ಸಸಿ ಬೆಳೆಸಿದ್ದಾರೆ ಎಂದರು.

ಬನವಾಸಿ ಮತ್ತೆ ಕದಂಬ ವೃಕ್ಷಗಳ ನೆಲೆವೀಡು ಆಗಬೇಕು. ಪ್ರವಾಸೋದ್ಯಮ ತಾಣವಾಗಿ ರೂಪಿಗೊಳ್ಳಬೇಕು ಎಂದು ಹೇಳಿದರು.

ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ಮಾಡಿರುವ ಟೀಕೆ ಕುರಿತು ಪ್ರಶ್ನಿಸಿದಾಗ, 'ನಾನು ಹೇಳಿದ್ದಷ್ಟು ಬರೆದುಕೊಳ್ಳುವುದಾದರೆ ಮಾತ್ರ ಮಾತನಾಡುತ್ತೇನೆ' ಎಂದರು. ಕದಂಬ ವನದ ಕುರಿತು ಮಾತ್ರ ಮಾತನಾಡಿ, ಅಲ್ಲಿಂದ ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT