ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಕಾರವಾರ: ಸರ್ಕಾರಿ ಕಚೇರಿಯೊಳಗೆ ‘ಸೋರಿಕೆ’ಯ ಕೊರಗು

Published : 29 ಜುಲೈ 2024, 4:48 IST
Last Updated : 29 ಜುಲೈ 2024, 4:48 IST
ಫಾಲೋ ಮಾಡಿ
Comments
ಮಳೆಗಾಲದ ಸಂದರ್ಭದಲ್ಲಿ ಶಿರಸಿ ತಾಲ್ಲೂಕಿನ ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೋರುತ್ತಿರುವುದು 
ಮಳೆಗಾಲದ ಸಂದರ್ಭದಲ್ಲಿ ಶಿರಸಿ ತಾಲ್ಲೂಕಿನ ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೋರುತ್ತಿರುವುದು 
ಕುಮಟಾ ಮಿನಿ ವಿಧಾನಸೌಧ ಕಟ್ಟಡದೊಳಗೆ ಸೋರಿದ ಮಳೆನೀರನ್ನು ನೌಕರರೊಬ್ಬರು ಶುಚಿಗೊಳಿಸುವ ಕೆಲಸದಲ್ಲಿ ನಿರತರಾಗಿದ್ದರು 
ಕುಮಟಾ ಮಿನಿ ವಿಧಾನಸೌಧ ಕಟ್ಟಡದೊಳಗೆ ಸೋರಿದ ಮಳೆನೀರನ್ನು ನೌಕರರೊಬ್ಬರು ಶುಚಿಗೊಳಿಸುವ ಕೆಲಸದಲ್ಲಿ ನಿರತರಾಗಿದ್ದರು 
ಗ್ರಾಮ ಪಂಚಾಯಿತಿ ಕಟ್ಟಡ ಹಳೆಯದಾಗಿದ್ದು ಇದನ್ನು ಪುನರ್ ನಿರ್ಮಿಸಲು ಜಾಗದ ಕೊರತೆ ಇದೆ. ಹಳೆಯ ಇಕ್ಕಟ್ಟಾದ ಕಟ್ಟಡದಲ್ಲೇ ಸಭೆ ಸೇರಿದಂತೆ ಗ್ರಾಮ ಪಂಚಾಯಿತಿಯ ಎಲ್ಲ ಕೆಲಸ- ಕಾರ್ಯ ನಡೆಯಬೇಕಿದೆ.
ಸಾವಿತ್ರಿ ಭಟ್ಟ ಕಡತೋಕಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ
ಬಹುತೇಕ ವಿದ್ಯಾರ್ಥಿ ವಸತಿ ನಿಲಯಗಳು ವಸತಿ ಶಾಲೆಗಳಲ್ಲಿ ಮಳೆನೀರು ಸೋರಿಕೆ ಸಮಸ್ಯೆ ಇದೆ. ಅಧಿಕಾರಿಗಳು ಸಮಸ್ಯೆ ಪರಿಹರಿಸಲು ಗಮನಹರಿಸಬೇಕು.
ವಿಶ್ವನಾಥ ನಾಯ್ಕ ಕಾರವಾರ ಸಾಮಾಜಿಕ ಕಾರ್ಯಕರ್ತ
ಮಿನಿ ವಿಧಾನಸೌಧ ಕಟ್ಟಡಕ್ಕೆ ತಹಶೀಲ್ದಾರ್ ಕಚೇರಿ ಸ್ಥಳಾಂತರಗೊಳ್ಳಲಿದ್ದು ಅದಕ್ಕಾಗಿ ಹಳೆಯ ಕಟ್ಟಡ ದುರಸ್ತಿಗೆ ಮುಂದಾಗಿಲ್ಲ.
ಎನ್.ಎಫ್.ನೊರ‍್ಹೋನಾ ಕಾರವಾರ ತಹಶೀಲ್ದಾರ್
ಸೋರುವ ಆರೋಗ್ಯ ಕೇಂದ್ರ ಕಟ್ಟಡ
ಶಿರಸಿ ತಾಲ್ಲೂಕಿನ ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರವು ಮಳೆಗೆ ಸೋರುತ್ತಿದ್ದು ವೈದ್ಯರು ಸಿಬ್ಬಂದಿ ಹಾಗೂ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. 50 ವರ್ಷ ಹಳೆಯದಾದ ಆಸ್ಪತ್ರೆಯ ಕಟ್ಟಡ ಶಿಥಿಲಗೊಂಡಿದ್ದು ಮಳೆಗಾಲದಲ್ಲಿ ಎಲ್ಲ ಕಡೆಗಳಲ್ಲಿ ಸೋರುತ್ತಿದೆ. ವೈದ್ಯಾಧಿಕಾರಿಗಳ ಕೊಠಡಿ ರೋಗಿಗಳು ಕುಳಿತುಕೊಳ್ಳುವ ಆಸ್ಪತ್ರೆಯ ಆವರಣ ವಾರ್ಡ್‍ನ ಕೋಣೆಯ ಮುಂಭಾಗದಲ್ಲಿ ಮಳೆ ನೀರು ಸೋರುತ್ತಿದೆ. ‘ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಮೂಲಸೌಲಭ್ಯಗಳ ಕೊರತೆಯಿಂದ ಜನರು ತೊಂದರೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಸ್ಥಳೀಯ ನಾಗರಾಜ ನಾಯ್ಕ ದೂರಿದರು. ‘ಸಮಸ್ಯೆಯನ್ನು ಶಾಸಕರು ಹಾಗೂ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ’ ಎಂದು ವೈದ್ಯಾಧಿಕಾರಿ ಡಾ.ಜಯಶ್ರೀ ಹೆಗಡೆ ಪ್ರತಿಕ್ರಿಯಿಸಿದರು.
ನೀರು ಸಂಗ್ರಹಕ್ಕೆ ಬಕೆಟ್
ಜೊಯಿಡಾ ತಾಲ್ಲೂಕಿನಲ್ಲಿ ಬಹುತೇಕ ಸರ್ಕಾರಿ ಕಚೇರಿಗಳ ಕಟ್ಟಡ ಹಳತಾಗಿದೆ. ತಹಶೀಲ್ದಾರ್ ಕಚೇರಿ ಪೊಲೀಸ್ ಠಾಣೆ ತಾಲ್ಲೂಕು ಪಂಚಾಯಿತಿ ಕಚೇರಿ ಸೇರಿದಂತೆ ಕೆಲ ಇಲಾಖೆಗಳ ಕಟ್ಟಡಗಳು ಮಳೆಗೆ ಸೋರುತ್ತಿವೆ. ತಹಶೀಲ್ದಾರ್‌ ಕಚೇರಿಯಲ್ಲಿ ಸಿಬ್ಬಂದಿ ಕುಳಿತು ಕೆಲಸ ಮಾಡಲಾಗದ ಸ್ಥಿತಿ ಇದೆ. ಈಚೆಗೆ ನಿರ್ಮಾಣವಾದ ತಾಲ್ಲೂಕು ಆಸ್ಪತ್ರೆಯ ಕಟ್ಟಡ ಸೋರುತ್ತಿದ್ದು ರೋಗಿಗಳ ವಾರ್ಡ್‍ನ ಕಾರಿಡಾರ್‌ನಲ್ಲಿ ಸೋರುತ್ತಿರುವ ನೀರಿಗಾಗಿ ಬಕೆಟ್‍ಗಳನ್ನು ಇಡಲಾಗಿದೆ. ಪೊಲೀಸ್ ಠಾಣೆಯ ದುರಸ್ತಿ ಕಾರ್ಯ ಈಚೆಗೆ ನಡೆದಿದ್ದು ಅಲ್ಲಿಯೂ ಸೋರುತ್ತಿದೆ. ಕಳೆದ ವರ್ಷವೇ ಉದ್ಘಾಟನೆ ಆಗಿದ್ದ ಬಾಬು ಜಗಜೀವನರಾಮ್ ಭವನ ಗ್ರಾಮೀಣ ಪ್ರದೇಶದಲ್ಲಿ ಹೊಸದಾಗಿ ನಿರ್ಮಿಸಿರುವ ಶಾಲಾ ಕಟ್ಟಡಗಳು ಸೋರುತ್ತಿವೆ. ಹೊಸದಾಗಿ ನಿರ್ಮಿಸಿರುವ ಮಿನಿ ವಿಧಾನಸೌಧ ಕಟ್ಟಡಕ್ಕೆ ತಹಶೀಲ್ದಾರ್ ಕಚೇರಿ ಸ್ಥಳಾಂತರ ಮಾಡಬೇಕಿರುವುದರಿಂದ ಕಚೇರಿ ಕಟ್ಟಡ ದುರಸ್ತಿ ಮಾಡಿಲ್ಲ’ ಎನ್ನುತ್ತಾರೆ ತಹಶೀಲ್ದಾರ್‌ ಕಚೇರಿಯ ಸಿಬ್ಬಂದಿ
ಬಳಕೆಯಾದ ಒಂದೇ ವರ್ಷಕ್ಕೆ ಸೋರಿಕೆ
ಕುಮಟಾ ಪಟ್ಟಣದಲ್ಲಿ ಸುಮಾರು ₹14 ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಿರ್ಮಿಸಲಾಗಿದ್ದ ಕುಮಟಾ ಮಿನಿ ವಿಧಾನ ಸೌಧ ಕಟ್ಟಡದಲ್ಲಿ ಮಳೆ ನೀರು ಸೋರಿಕೆ ಉಂಟಾಗಿದೆ. ನಾಲ್ಕು ವರ್ಷಗಳ ಹಿಂದೆ ನಿರ್ಮಾಣಗೊಂಡ ಕಟ್ಟಡವನ್ನು ಒಂದು ವರ್ಷದ ಹಿಂದೆ ಕಂದಾಯ ಇಲಾಖೆ ವಹಿಸಿಕೊಂಡಿದೆ. ಆರು ತಿಂಗಳ ಹಿಂದೆ ನಿರ್ಮಾಣ ಸಂಸ್ಥೆಯ ಕಟ್ಟಡ ನಿರ್ವಹಣಾ ಅವಧಿ ಮುಗಿದಿದೆ. ಪಟ್ಟಣದ ಕೋರ್ಟ್ ಪಕ್ಕದಲ್ಲಿರುವ ಪುರಸಭೆ ವಚನಾಲಯ ಕಟ್ಟಡ ಸಹ ಸೋರುತ್ತಿದೆ. ‘ಲೋಕೋಪಯೋಗಿ ಇಲಾಖೆ ಇಲಾಖೆ ಅಧಿಕಾರಿಗಳು ಸೂಚಿಸಿದರೂ ನಿರ್ಮಾಣ ಸಂಸ್ಥೆಯ ಅಧಿಕಾರಿಗಳು ಇದುವರೆಗೂ ಭೇಟಿ ನೀಡಿ ಪರಿಶೀಲನೆ ಮಾಡದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರಿಗೆ ಈ ಬಗ್ಗೆ ಪತ್ರ ಬರೆಯಲಾಗಿದೆ’ ಎಂದು ಪ್ರಭಾರ ತಹಶೀಲ್ದಾರ್ ಸತೀಶ ಗೌಡ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT