<p><strong>ಭಟ್ಕಳ (ಉತ್ತರ ಕನ್ನಡ):</strong> ಪಶ್ಚಿಮ ಏಷ್ಯಾ ಬಿಕ್ಕಟ್ಟು ಮತ್ತು ಯುದ್ಧ ಭೀತಿಯಿಂದ ಭಟ್ಕಳದ ಅನಿವಾಸಿ ಭಾರತಿಯರ ಕುಟುಂಬದವರಿಗೆ ಮತ್ತು ಭಟ್ಕಳದಿಂದ ಹಜ್ ಉಮ್ರಾಗೆ ಯಾತ್ರಿಗಳು ಆತಂಕದಲ್ಲಿದ್ದಾರೆ.</p>.<p>ಪಟ್ಟಣದ ಸಾವಿರಾರು ಮಂದಿ ದುಬೈ, ಕತಾರ್, ಒಮನ್, ಸೌದಿ ಅರೇಬಿಯಾ ಸೇರಿ ಅರಬ್ ರಾಷ್ಟ್ರಗಳಲ್ಲಿ ಉದ್ಯೋಗ ಮಾಡುತ್ತಾರೆ. ಭಟ್ಕಳದ ಅನಿವಾಸಿ ಭಾರತೀಯರ ಸ್ವಂತ ಉದ್ಯಮ ಕೂಡ ಈ ರಾಷ್ಟ್ರಗಳಲ್ಲಿದೆ. ಭಟ್ಕಳದಿಂದ ನಿತ್ಯ ನೂರಾರು ಜನರು ಮಂಗಳೂರು, ಗೋವಾ, ಮುಂಬೈನಿಂದ ಅರಬ್ ದೇಶಕ್ಕೆ ಹೋಗುತ್ತಾರೆ.</p>.<p>‘ನನ್ನ ಮಗ ಮೊಹಮ್ಮದ್ ಅಷ್ಫಾಕ್ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದು, ಹಬ್ಬಕ್ಕೆ 15 ದಿನ ಮೊದಲು ಇಲ್ಲಿಗೆ ಬರಲು ಸಿದ್ಧತೆ ಮಾಡಿಕೊಂಡಿದ್ದ. ಸೋಮವಾರ ಕರೆ ಮಾಡಿ ಪರಿಸ್ಥಿತಿ ತಿಳಿಯಾದರೆ ಮಾತ್ರ ಊರಿಗೆ ಬರುವೆ’ ಎಂದಿದ್ದಾನೆ ಎಂದು ಅಬ್ದುಲ್ ರಹೀಂ ತಿಳಿಸಿದರು.</p>.<p>‘ರಂಜಾನ್ ಮಾಸದ ಕೊನೆಯ 10 ದಿನದ ಉಪವಾಸ, ಪ್ರಾರ್ಥನೆಯನ್ನು ಮೆಕ್ಕಾದ ಮಸೀದಿಯಲ್ಲಿ ಉಳಿದು ಆಚರಿಸಲು ಸಿದ್ಧರಾಗಿದ್ದ ಪಟ್ಟಣದ 50ಕ್ಕೂ ಹೆಚ್ಚು ಜನರ ಟಿಕೆಟ್ ರದ್ದುಗೊಂಡಿದೆ. ಪವಿತ್ರ ಆಚರಣೆ ಕೈತಪ್ಪಿದ್ದಕ್ಕೆ ನಿರಾಸೆಯಾಗಿದೆ’ ಎಂದು ಹಿರಿಯರೊಬ್ಬರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಟ್ಕಳ (ಉತ್ತರ ಕನ್ನಡ):</strong> ಪಶ್ಚಿಮ ಏಷ್ಯಾ ಬಿಕ್ಕಟ್ಟು ಮತ್ತು ಯುದ್ಧ ಭೀತಿಯಿಂದ ಭಟ್ಕಳದ ಅನಿವಾಸಿ ಭಾರತಿಯರ ಕುಟುಂಬದವರಿಗೆ ಮತ್ತು ಭಟ್ಕಳದಿಂದ ಹಜ್ ಉಮ್ರಾಗೆ ಯಾತ್ರಿಗಳು ಆತಂಕದಲ್ಲಿದ್ದಾರೆ.</p>.<p>ಪಟ್ಟಣದ ಸಾವಿರಾರು ಮಂದಿ ದುಬೈ, ಕತಾರ್, ಒಮನ್, ಸೌದಿ ಅರೇಬಿಯಾ ಸೇರಿ ಅರಬ್ ರಾಷ್ಟ್ರಗಳಲ್ಲಿ ಉದ್ಯೋಗ ಮಾಡುತ್ತಾರೆ. ಭಟ್ಕಳದ ಅನಿವಾಸಿ ಭಾರತೀಯರ ಸ್ವಂತ ಉದ್ಯಮ ಕೂಡ ಈ ರಾಷ್ಟ್ರಗಳಲ್ಲಿದೆ. ಭಟ್ಕಳದಿಂದ ನಿತ್ಯ ನೂರಾರು ಜನರು ಮಂಗಳೂರು, ಗೋವಾ, ಮುಂಬೈನಿಂದ ಅರಬ್ ದೇಶಕ್ಕೆ ಹೋಗುತ್ತಾರೆ.</p>.<p>‘ನನ್ನ ಮಗ ಮೊಹಮ್ಮದ್ ಅಷ್ಫಾಕ್ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದು, ಹಬ್ಬಕ್ಕೆ 15 ದಿನ ಮೊದಲು ಇಲ್ಲಿಗೆ ಬರಲು ಸಿದ್ಧತೆ ಮಾಡಿಕೊಂಡಿದ್ದ. ಸೋಮವಾರ ಕರೆ ಮಾಡಿ ಪರಿಸ್ಥಿತಿ ತಿಳಿಯಾದರೆ ಮಾತ್ರ ಊರಿಗೆ ಬರುವೆ’ ಎಂದಿದ್ದಾನೆ ಎಂದು ಅಬ್ದುಲ್ ರಹೀಂ ತಿಳಿಸಿದರು.</p>.<p>‘ರಂಜಾನ್ ಮಾಸದ ಕೊನೆಯ 10 ದಿನದ ಉಪವಾಸ, ಪ್ರಾರ್ಥನೆಯನ್ನು ಮೆಕ್ಕಾದ ಮಸೀದಿಯಲ್ಲಿ ಉಳಿದು ಆಚರಿಸಲು ಸಿದ್ಧರಾಗಿದ್ದ ಪಟ್ಟಣದ 50ಕ್ಕೂ ಹೆಚ್ಚು ಜನರ ಟಿಕೆಟ್ ರದ್ದುಗೊಂಡಿದೆ. ಪವಿತ್ರ ಆಚರಣೆ ಕೈತಪ್ಪಿದ್ದಕ್ಕೆ ನಿರಾಸೆಯಾಗಿದೆ’ ಎಂದು ಹಿರಿಯರೊಬ್ಬರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>