ಸದಾಶಿವಗಡ–ಔರಾದ್ ರಾಜ್ಯ ಹೆದ್ದಾರಿಯಲ್ಲಿ ಜೊಯಿಡಾ ತಾಲ್ಲೂಕಿನ ಅಣಶಿ ಘಟ್ಟದ ಬಳಿ ಭೂಕುಸಿತ ಉಂಟಾಗಿದ್ದರಿಂದ ಗುಡ್ಡಕ್ಕೆ ಮೆಶ್ ಅಳವಡಿಸಲಾಗಿರುವುದು
ಅಪ್ಸರಕೊಂಡ ಹಾಗೂ ಕೆಳಗಿನೂರು ಪ್ರದೇಶಗಳಲ್ಲಿ ಸುಮಾರು 200 ಕುಟುಂಬಗಳು ಗುಡ್ಡಕುಸಿತದ ಅಪಾಯದ ಆತಂಕ ಎದುರಿಸುತ್ತಿದ್ದು ಶಾಶ್ವತ ಪರಿಹಾರದ ನಿರೀಕ್ಷೆಯಲ್ಲಿದ್ದೇವೆ
-ಮಂಜುನಾಥ ಗೌಡ ಕೆಳಗಿನೂರು ನಿವಾಸಿ
ಮಳೆಗಾಲ ಆರಂಭವಾದರೆ ಭಯದ ವಾತಾವರಣ ಸೃಷ್ಟಿಯಾಗುತ್ತದೆ. ಮನೆಗೆ ಯಾವಾಗ ನೀರು ನುಗ್ಗಬಹುದು ಎನ್ನುವ ಆತಂಕದಿಂದ ದಿನ ಕಳೆಯುತ್ತೇವೆ.
ರಮೇಶ ಹರಿಕಂತ್ರ ಬಿಳಿಹೊಂಯ್ಗಿ ಗ್ರಾಮಸ್ಥ
ಭೂಕುಸಿತ ನಡೆಯಬಹುದಾದ ಸ್ಥಳಗಳಲ್ಲಿ ಶಾಶ್ವತ ಪರಿಹಾರಕ್ಕೆ ದೊಡ್ಡ ಅನುದಾನದ ಅಗತ್ಯವಿದೆ. ಸ್ಥಳ ಪರಿಶೀಲಿಸಿ ತಹಶೀಲ್ದಾರ್ಗಳು ವರದಿ ಸಲ್ಲಿಸಿದ್ದಾರೆ. ಮಳೆಗಾಲದಲ್ಲಿ ತಾತ್ಕಾಲಿಕ ಮುನ್ನೆಚ್ಚರಿಕೆಗೆ ಕ್ರಮವಾಗಲಿದೆ.
ಗಂಗೂಬಾಯಿ ಮಾನಕರ ಜಿಲ್ಲಾಧಿಕಾರಿ
ತಡೆಗೋಡೆ ನಿರ್ಮಾಣದ ಬೇಡಿಕೆ
ಯಲ್ಲಾಪುರ ತಾಲ್ಲೂಕಿನ ತಳಕೆಬೈಲ್ ಕಳಚೆ ಬೀಗಾರ ಗ್ರಾಮದಲ್ಲಿ ಭೂಕುಸಿತ ಸಂಭವಿಸುತ್ತಿದೆ. ತಳಕೆಬೈಲಿನಿಂದ ಬಾರೆಗೆ ಸಂಪರ್ಕ ಕಲ್ಪಿಸುವ ರಸ್ತೆ ಹಲವೆಡೆ ಕುಸಿತವಾಗಿದೆ. ಈ ಪ್ರದೇಶದಲ್ಲಿ ಭೂಕುಸಿತ ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ದೂರುಗಳಿವೆ. ತಳಕೆಬೈಲಿನಲ್ಲಿ ಭೂಕುಸಿತ ಸಂಭವಿಸಿದ ಜಾಗದಲ್ಲಿ ಅರಣ್ಯ ಇಲಾಖೆ ಅರಣ್ಯ ಬೆಳೆಸುವ ನಿಟ್ಟಿನಲ್ಲಿ ಬೀಜ ಬಿತ್ತಿದೆ. ತಾಲ್ಲೂಕು ಆಡಳಿತ ಇಲ್ಲಿ ತಡೆಗೋಡೆ ನಿರ್ಮಿಸಬೇಕೆಂಬ ಬೇಡಿಕೆ ಇದೆ. ‘ಬೀಗಾರ–ಬಾಗಿನಕಟ್ಟಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಕೆಳಭಾಗದಲ್ಲಿ ಭೂಕುಸಿತ ಸಂಭವಿಸಿ ರಸ್ತೆಯನ್ನು ಬದಲಿಸಲಾಗಿದೆ. ಮತ್ತೆ ಭೂಕುಸಿತ ಸಂಭವಿಸದಂತೆ ತಡೆಗೋಡೆ ನಿರ್ಮಿಸಬೇಕು’ ಎಂದು ರಾಘವೇಂದ್ರ ಭಟ್ ಬೀಗಾರ ಒತ್ತಾಯಿಸುತ್ತಾರೆ.