14 ಅಡಿಗೂ ಉದ್ದ ಹಾಗೂ ಅಂದಾಜು 70 ಕೆ.ಜಿ ತೂಕವಿದ್ದ ಹಾವನ್ನು ಒಮ್ಮೆ ಹಿಡಿಯಲಾಗಿತ್ತು. ಆದರೆ, ತಪ್ಪಿಸಿಕೊಂಡ ಹೆಬ್ಬಾವು ಪುನಃ ಗಟಾರಕ್ಕೆ ಇಳಿದಿತ್ತು. ಕೊನೆಗೆ ಭಾರಿ ಶ್ರಮಪಟ್ಟು ಹಿಡಿದು ಪ್ಲಾಸ್ಟಿಕ್ ಡ್ರಂನಲ್ಲಿ ತುಂಬಿಸಲಾಯಿತು. ಬಳಿಕ ಅದನ್ನು ಅಣಶಿ ಕಾಡಿನಲ್ಲಿ ಬಿಡಲಾಯಿತು. ಕಾರ್ಯಾಚರಣೆಯಲ್ಲಿ ಎ.ಆರ್.ಎಫ್.ಒ ಹನುಮಂತ, ಅರಣ್ಯ ರಕ್ಷಕ ಗೋಪಾಲ ನಾಯ್ಕ, ವಾಚರ್ ಸಂಜೀವ ಹಾಗೂ ನೀಲೇಶ ಮತ್ತು ಸ್ಥಳೀಯರು ಭಾಗಿಯಾಗಿದ್ದರು.