‘ರೇಖಾ ಅಲಿಯಾಸ್ ಮೈತ್ರಿ ಎಂಬ ಯುವತಿ ತಾನು ಸಂಸದರ ಹತ್ತಿರದ ಸಂಬಂಧಿ ಎಂದು ನಂಬಿಸಿ ₹4.50 ಲಕ್ಷ ಹಣ ವಂಚಿಸಿದ್ದಾಳೆ ಎಂದು ಮೈಸೂರಿನ ಮಂಜುಳಾ ಎಂಬುವವರು ಗಮನಕ್ಕೆ ತಂದಿದ್ದಾರೆ. ಸಂಸದರ ಘನತೆಗೆ ಧಕ್ಕೆ ತರುವ ಪ್ರಯತ್ನ ಮಾಡಿದ ಆರೋಪಿ ರೇಖಾ ಅವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಆಪ್ತಕಾರ್ಯದರ್ಶಿ ಸುರೇಶ್ ದೂರು ಸಲ್ಲಿಸಿದ್ದಾರೆ.