<p><strong>ಶಿರಸಿ (ಉತ್ತರ ಕನ್ನಡ ಜಿಲ್ಲೆ): </strong>ಯಲ್ಲಾಪುರ ತಾಲ್ಲೂಕಿನ ತಾರಗಾರಿನ ಅಜ್ಜಿಗುಂಡಿ ಜಲಪಾತದಲ್ಲಿ ಪ್ರದರ್ಶನ ಕಂಡಿದ್ದ ‘ಅಜ್ಜಿಗುಂಡಿ ಡಾಟ್ ಕಾಮ್’ ನಾಟಕವು ಪ್ರತಿಷ್ಠಿತ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ಗೆ ಸೇರ್ಪಡೆಯಾಗಿದೆ.<br /> <br /> ಇಲ್ಲಿನ ಮಿಯಾರ್ಡ್ಸ್ ಮೇದಿನಿ ರಂಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ವಜ್ರಳ್ಳಿ ಗ್ರಾಮ ಪಂಚಾಯ್ತಿಯ ತಾರಗಾರ ಗ್ರಾಮದ ಕಲಾವಿದರು ಕಳೆದ ಜೂನ್ನಲ್ಲಿ ಜಲಪಾತದಲ್ಲಿ ಪ್ರದರ್ಶಿಸಿದ್ದ ನಾಟಕವನ್ನು ರಂಗಕರ್ಮಿ ಕೆ.ಆರ್. ಪ್ರಕಾಶ ನಿರ್ದೇಶಿಸಿದ್ದರು. ಜಲಪಾತದಲ್ಲಿ ಪ್ರದರ್ಶನ ಕಂಡಿದ್ದಕ್ಕೆ ಇದು ದಾಖಲೆಗೆ ಸೇರ್ಪಡೆಯಾಗಿದೆ.<br /> <br /> ಅಡಿಕೆಮನೆಯ ಅಣ್ಣಯ್ಯ ಭಟ್ ನಾಟಕ ಪ್ರದರ್ಶನದ ದಾಖಲೀಕರಣ ಕಾರ್ಯ ನಡೆಸಿದ್ದರು, ಶಿರಸಿಯ ಮಾರಿಗುಡಿ ಕಾಲೇಜಿನ ಪ್ರಾಚಾರ್ಯ ಕೆ.ಎನ್. ಹೊಸ್ಮನಿ ಹಾಗೂ ಯಲ್ಲಾಪುರ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯೆ ಡಾ. ದಾಕ್ಷಾಯಿಣಿ ಹೆಗಡೆ ಇದನ್ನು ಸಾಕ್ಷೀಕರಿಸಿದ್ದರು. ಈ ನಾಟಕ ಕೃತಿರೂಪದಲ್ಲಿ ಪ್ರಕಟಗೊಂಡಿದೆ ಎಂದು ಕೇಂದ್ರದ ಅಧ್ಯಕ್ಷ ನಾರಾಯಣ ಹೆಗಡೆ ಗಡಿಕೈ ಹಾಗೂ ಕಾರ್ಯದರ್ಶಿ ಎಲ್.ಎಂ. ಹೆಗಡೆ ಗೋಳಿಕೊಪ್ಪ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ (ಉತ್ತರ ಕನ್ನಡ ಜಿಲ್ಲೆ): </strong>ಯಲ್ಲಾಪುರ ತಾಲ್ಲೂಕಿನ ತಾರಗಾರಿನ ಅಜ್ಜಿಗುಂಡಿ ಜಲಪಾತದಲ್ಲಿ ಪ್ರದರ್ಶನ ಕಂಡಿದ್ದ ‘ಅಜ್ಜಿಗುಂಡಿ ಡಾಟ್ ಕಾಮ್’ ನಾಟಕವು ಪ್ರತಿಷ್ಠಿತ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ಗೆ ಸೇರ್ಪಡೆಯಾಗಿದೆ.<br /> <br /> ಇಲ್ಲಿನ ಮಿಯಾರ್ಡ್ಸ್ ಮೇದಿನಿ ರಂಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ವಜ್ರಳ್ಳಿ ಗ್ರಾಮ ಪಂಚಾಯ್ತಿಯ ತಾರಗಾರ ಗ್ರಾಮದ ಕಲಾವಿದರು ಕಳೆದ ಜೂನ್ನಲ್ಲಿ ಜಲಪಾತದಲ್ಲಿ ಪ್ರದರ್ಶಿಸಿದ್ದ ನಾಟಕವನ್ನು ರಂಗಕರ್ಮಿ ಕೆ.ಆರ್. ಪ್ರಕಾಶ ನಿರ್ದೇಶಿಸಿದ್ದರು. ಜಲಪಾತದಲ್ಲಿ ಪ್ರದರ್ಶನ ಕಂಡಿದ್ದಕ್ಕೆ ಇದು ದಾಖಲೆಗೆ ಸೇರ್ಪಡೆಯಾಗಿದೆ.<br /> <br /> ಅಡಿಕೆಮನೆಯ ಅಣ್ಣಯ್ಯ ಭಟ್ ನಾಟಕ ಪ್ರದರ್ಶನದ ದಾಖಲೀಕರಣ ಕಾರ್ಯ ನಡೆಸಿದ್ದರು, ಶಿರಸಿಯ ಮಾರಿಗುಡಿ ಕಾಲೇಜಿನ ಪ್ರಾಚಾರ್ಯ ಕೆ.ಎನ್. ಹೊಸ್ಮನಿ ಹಾಗೂ ಯಲ್ಲಾಪುರ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯೆ ಡಾ. ದಾಕ್ಷಾಯಿಣಿ ಹೆಗಡೆ ಇದನ್ನು ಸಾಕ್ಷೀಕರಿಸಿದ್ದರು. ಈ ನಾಟಕ ಕೃತಿರೂಪದಲ್ಲಿ ಪ್ರಕಟಗೊಂಡಿದೆ ಎಂದು ಕೇಂದ್ರದ ಅಧ್ಯಕ್ಷ ನಾರಾಯಣ ಹೆಗಡೆ ಗಡಿಕೈ ಹಾಗೂ ಕಾರ್ಯದರ್ಶಿ ಎಲ್.ಎಂ. ಹೆಗಡೆ ಗೋಳಿಕೊಪ್ಪ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>