<p>ಯಲ್ಲಾಪುರ: ಪಟ್ಟಣದ ಪದವಿ ಪೂರ್ವ ಕಾಲೇಜಿಗೆ ಅರಣ್ಯ ಇಲಾಖೆಯಿಂದ ಮಂಜೂರಾದ ಎರಡೂವರೆ ಎಕರೆ ಸ್ಥಳವನ್ನು ಶಾಸಕ ವಿ.ಎಸ್.ಪಾಟೀಲ ಮಂಗಳವಾರ ಸಾಯಂಕಾಲ ಪರಿಶೀಲನೆ ನಡೆಸಿದರು.<br /> <br /> ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕ ಪಾಟೀಲ, ಸ್ಥಳವನ್ನು ಸುಪರ್ಧಿಗೆ ಪಡೆಯಲು 11.5 ಲಕ್ಷ ರೂ. ಭರಿಸ ಮಾಡಬೇಕಾಗಿದ್ದು ಶಿಕ್ಷಣ ಇಲಾಖೆಯಿಂದ ಭರಿಸಲಾಗುವುದು ಎಂದರು.<br /> <br /> ಈಗಾಗಲೇ ಪ.ಪೂ. ಕಾಲೇಜಿಗೆ ಕಾಳಮ್ಮನಗರದಲ್ಲಿ 22 ಗುಂಟೆ ಸ್ಥಳ ಮಂಜೂರಿಯಾಗಿ ಕಟ್ಟಡ ಕಾಮಗಾರಿ ಪ್ರಾರಂಭವಾಗಿದೆಯಲ್ಲ ಅದನ್ನೇನು ಮಾಡುವಿರಿ? ಎಂಬ ಪ್ರಶ್ನೆಗೆ ಉತ್ತರಿಸಿ ಈಗಾಗಲೇ ಮಂಜೂರಾದ ಹಣ ವಾಪಸ್ ಹೋಗಬಾರದೆಂಬ ಕಾರಣದಿಂದ ಕಾಮಗಾರಿ ಪ್ರಾರಂಭಿಸಲಾಗಿತ್ತು. ಬೇಡಿಕೆಯಿಟ್ಟ ಈ ಸ್ಥಳ ಇಷ್ಟು ಬೇಗ ಮಂಜೂರಿರಾಗಬಹುದು ಎಂಬ ನಿರೀಕ್ಷೆಯಿರಲಿಲ್ಲ ಎಂದ ಶಾಸಕರು ಪದವಿ ಕಾಲೇಜಿಗೆ ಈ ಕಟ್ಟಡವನ್ನು ಬಿಟ್ಟುಕೊಟ್ಟು ಪದವಿ ಕಾಲೇಜಿಗೆ ಮಂಜೂರಾದ ಹಣದಲ್ಲಿ ಈ ಸ್ಥಳದಲ್ಲಿ ಕಟ್ಟಡ ಕಟ್ಟುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.<br /> <br /> ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ರಾಘವೇಂದ್ರ ಭಟ್ಟ, ತಾ.ಪಂ. ಉಪಾಧ್ಯಕ್ಷ ನಟರಾಜ ಗೌಡರ್, ಪ.ಪಂ. ಸದಸ್ಯ ರಾಮು ನಾಯ್ಕ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಆರ್.ಜಿ.ಭಟ್ಟ, ನಾರಾಯಣ ನಾಯಕ, ಪ.ಪೂ. ಕಾಲೇಜಿನ ಪ್ರಾಚಾರ್ಯ ಕೆ.ಟಿ.ಭಟ್ಟ, ಉಪನ್ಯಾಸಕರಾದ ಸುಭಾಸ ನಾಯಕ, ಜಿ.ಎಚ್.ನಾಯಕ ಮುಂತಾದವರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಲ್ಲಾಪುರ: ಪಟ್ಟಣದ ಪದವಿ ಪೂರ್ವ ಕಾಲೇಜಿಗೆ ಅರಣ್ಯ ಇಲಾಖೆಯಿಂದ ಮಂಜೂರಾದ ಎರಡೂವರೆ ಎಕರೆ ಸ್ಥಳವನ್ನು ಶಾಸಕ ವಿ.ಎಸ್.ಪಾಟೀಲ ಮಂಗಳವಾರ ಸಾಯಂಕಾಲ ಪರಿಶೀಲನೆ ನಡೆಸಿದರು.<br /> <br /> ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕ ಪಾಟೀಲ, ಸ್ಥಳವನ್ನು ಸುಪರ್ಧಿಗೆ ಪಡೆಯಲು 11.5 ಲಕ್ಷ ರೂ. ಭರಿಸ ಮಾಡಬೇಕಾಗಿದ್ದು ಶಿಕ್ಷಣ ಇಲಾಖೆಯಿಂದ ಭರಿಸಲಾಗುವುದು ಎಂದರು.<br /> <br /> ಈಗಾಗಲೇ ಪ.ಪೂ. ಕಾಲೇಜಿಗೆ ಕಾಳಮ್ಮನಗರದಲ್ಲಿ 22 ಗುಂಟೆ ಸ್ಥಳ ಮಂಜೂರಿಯಾಗಿ ಕಟ್ಟಡ ಕಾಮಗಾರಿ ಪ್ರಾರಂಭವಾಗಿದೆಯಲ್ಲ ಅದನ್ನೇನು ಮಾಡುವಿರಿ? ಎಂಬ ಪ್ರಶ್ನೆಗೆ ಉತ್ತರಿಸಿ ಈಗಾಗಲೇ ಮಂಜೂರಾದ ಹಣ ವಾಪಸ್ ಹೋಗಬಾರದೆಂಬ ಕಾರಣದಿಂದ ಕಾಮಗಾರಿ ಪ್ರಾರಂಭಿಸಲಾಗಿತ್ತು. ಬೇಡಿಕೆಯಿಟ್ಟ ಈ ಸ್ಥಳ ಇಷ್ಟು ಬೇಗ ಮಂಜೂರಿರಾಗಬಹುದು ಎಂಬ ನಿರೀಕ್ಷೆಯಿರಲಿಲ್ಲ ಎಂದ ಶಾಸಕರು ಪದವಿ ಕಾಲೇಜಿಗೆ ಈ ಕಟ್ಟಡವನ್ನು ಬಿಟ್ಟುಕೊಟ್ಟು ಪದವಿ ಕಾಲೇಜಿಗೆ ಮಂಜೂರಾದ ಹಣದಲ್ಲಿ ಈ ಸ್ಥಳದಲ್ಲಿ ಕಟ್ಟಡ ಕಟ್ಟುವ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು.<br /> <br /> ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ರಾಘವೇಂದ್ರ ಭಟ್ಟ, ತಾ.ಪಂ. ಉಪಾಧ್ಯಕ್ಷ ನಟರಾಜ ಗೌಡರ್, ಪ.ಪಂ. ಸದಸ್ಯ ರಾಮು ನಾಯ್ಕ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಆರ್.ಜಿ.ಭಟ್ಟ, ನಾರಾಯಣ ನಾಯಕ, ಪ.ಪೂ. ಕಾಲೇಜಿನ ಪ್ರಾಚಾರ್ಯ ಕೆ.ಟಿ.ಭಟ್ಟ, ಉಪನ್ಯಾಸಕರಾದ ಸುಭಾಸ ನಾಯಕ, ಜಿ.ಎಚ್.ನಾಯಕ ಮುಂತಾದವರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>