ಪ್ರಸ್ತುತ ಕೆ.ಜಿ. ಭತ್ತಕ್ಕೆ ₨14–15 ಧಾರಣೆಯಿದ್ದು, ಇಷ್ಟು ಕಡಿಮೆ ಧಾರಣೆ ಸಿಕ್ಕರೆ ಯಾರು ಭತ್ತ ಬೆಳೆಯಲು ಮುಂದಾಗುತ್ತಾರೆ. ಇದರಿಂದ ರೈತರು ಭತ್ತದ ಬೆಳೆ ಬೆಳೆಯುವುದನ್ನು ನಿಲ್ಲಿಸುವ ಸ್ಥಿತಿ ಬಂದೊದಗಿದೆ. ಪಡಿತರ ವ್ಯವಸ್ಥೆಯ ಅಕ್ಕಿಗೆ ಪರದಾಡುವ ಸ್ಥಿತಿ ಉಂಟಾಗುತ್ತಿದ್ದು, ಸರ್ಕಾರ ₨ 29–30ಕ್ಕೆ ಅಕ್ಕಿ ಖರೀದಿ ಮಾಡುತ್ತಿದೆ. ಆದರೆ ಇಲ್ಲಿನ ಭತ್ತ ಬೆಳೆಯುವ ರೈತರಿಗೆ ಉತ್ತಮ ಧಾರಣೆ ಸಿಗುತ್ತಿಲ್ಲ. ಆದ್ದರಿಂದ ಭತ್ತಕ್ಕೆ ಕೆಜಿಗೆ ₨ 20–25ರ ದರದಲ್ಲಿ ಬೆಂಬಲ ಬೆಲೆಯನ್ನು ಸರ್ಕಾರ ಘೋಷಣೆ ಮಾಡಬೇಕು’ ಎಂದರು.
‘ತಾಲ್ಲೂಕಿನ ಮನಮನೆ, ಕಾಂವಚೂರು, ಶಿರಳಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮತ್ತು ಶಿರಸಿ ತಾಲ್ಲೂಕಿನ ಬನವಾಸಿ ಪ್ರದೇಶದಲ್ಲಿ ವರ್ಷಕ್ಕೆ ಒಂದೇ ಬೆಳೆ ಭತ್ತ ಬೆಳೆದು, ಜೀವನ ನಡೆಸುವವರು ಇದ್ದಾರೆ. ಈಗಿನ ಭತ್ತದ ಧಾರಣೆಯಲ್ಲಿ ಅವರು ಬದುಕುವುದು ಸಾಧ್ಯವೇ’ ಎಂದು ಪ್ರಶ್ನಿಸಿದ ಅವರು, ‘ಭತ್ತಕ್ಕೆ ಬೆಂಬಲ ಬೆಲೆ ನೀಡುವುದು ಅನಿವಾರ್ಯ ವಾಗಿದೆ. ಇದೂ ಅಲ್ಲದೇ ಭತ್ತದ ಕೃಷಿಗೆ ಯಾಂತ್ರೀಕರಣದ ಲಾಭ ದೊರೆಯು ವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.