ಅರಸೀಕೆರೆ: ಹೋಬಳಿಯ ಕಮ್ಮತ್ತಹಳ್ಳಿ ಗ್ರಾಮಕ್ಕೆ ಶನಿವಾರ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಮುಖಂಡರನ್ನು ಭೇಟಿ ಮಾಡಿದರು.
ನಂತರ, ಮಾತನಾಡಿದ ಅವರು ‘ಪಕ್ಷದ ಗೆಲುವಿಗೆ ಕಾರ್ಯಕರ್ತರ ಬೆಂಬಲ ಅತ್ಯಗತ್ಯ. ಪ್ರತಿ ವಾರ್ಡ್ನ ಮನೆಗಳಿಗೆ ತೆರಳಿ ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನಕ್ಕೆ ಮುಟ್ಟಿಸಬೇಕು. ಅರಸೀಕೆರೆ ಬ್ಲಾಕ್ ನ ಮೂಲ ಕಾಂಗ್ರೆಸ್ ಕಾರ್ಯಕರ್ತರು ಮರಳಿ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ಆತ್ಮವಿಶ್ವಾಸ ವೃದ್ಧಿಸಿದೆ. ಕಾರ್ಯಕರ್ತರಲ್ಲಿ ಗೊಂದಲಗಳಿದ್ದರೆ, ಮುಖಂಡರು ಸರಿಪಡಿಸಿಕೊಂಡು ಪಕ್ಷದ ಸಂಘಟನೆಯಲ್ಲಿ ತೊಡಗಬೇಕು’ ಎಂದರು.
ಅರಸೀಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮಂಜುನಾಥ್ ಮುಖಂಡ ವೀರ ಬಸಪ್ಪ, ಪರಮೇಶ್ವರಪ್ಪ, ಮಹದೇವಪ್ಪ, ಕಲ್ಲಹಳ್ಳಿ ಹನುಮಂತಪ್ಪ, ಸಿ.ಹನುಮಂತಪ್ಪ, ಪತಿ ನಾಯ್ಕ, ಬಸಣ್ಣ, ಅಶೋಕ, ಸಿದ್ದೇಶ್, ಅಂಜಿನಪ್ಪ ಇದ್ದರು.