<p><strong>ಹೊಸಪೇಟೆ</strong> (ವಿಜಯನಗರ): ‘ನಾನು ಏನು ಹೇಳಬೇಕೆಂದುಕೊಂಡಿದ್ದೆನೊ ಅದನ್ನು ಈಗಾಗಲೇ ಕಲಬುರ್ಗಿಯಲ್ಲಿ ಹೇಳಿದ್ದೇನೆ. ಪೇಪರ್ನಲ್ಲಿ ಏನು ಪ್ರಕಟವಾಗಿದೆಯೋ ಅದನ್ನೇ ನಾನು ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರಿಗೆ ತಿಳಿಸುವೆ’ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಶಾಸಕ ಬಿ.ಆರ್.ಪಾಟೀಲ್ ಹೇಳಿದರು.</p>.<p>ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಪಾಲ್ಗೊಳ್ಳಲು ಮಂಗಳವಾರ ಕ್ಯಾಂಪಸ್ಗೆ ಬಂದಿದ್ದ ಅವರು ಮಾಧ್ಯಮದವರಿಗೆ ಹೀಗೆ ಪ್ರತಿಕ್ರಿಯಿಸಿದರು. </p>.<p>ಹಲವು ಶಾಸಕರಲ್ಲಿ ಹಾಗೂ ದೇಶಪಾಂಡೆ, ರಾಯರೆಡ್ಡಿ ಅವರಂತಹ ಹಿರಿಯ ಮುಖಂಡರಲ್ಲಿ ಸರ್ಕಾರದ ವಿರುದ್ಧ ಅಸಮಾಧಾನ ಹೊಗೆಯಾಡುತ್ತಿರುವ ಕುರಿತ ಪ್ರಶ್ನೆಗೆ ‘ಸಂಸಾರ ಎಂದ ಮೇಲೆ ಗಂಡ ಹೆಂಡತಿ ಜಗಳ ಇದ್ದೇ ಇರುತ್ತದೆ, ಅದೇ ರೀತಿಯಲ್ಲಿ ಪಕ್ಷದಲ್ಲೂ ಇದೆ ಅಷ್ಟೇ’ ಎಂದರು.</p>.<p class="Subhead">ಪಾಟೀಲರಿಗೆ ಪದೇ ಪದೇ ಫೋನ್:</p>.<p>ರಾಜ್ಯದ ಹಲವೆಡೆಗಳಿಂದ ವಸತಿ ಯೋಜನೆಗೆ ಲಂಚ ಕೇಳಿದ ಕುರಿತಂತೆ ಪಾಟೀಲರಿಗೆ ಫೋನ್ ಕರೆಗಳು ಬರುತ್ತಿದ್ದು, ಮಂಗಳವಾರವೂ ಮಾಧ್ಯಮಗಳ ಜತೆಗೆ ಮಾತನಾಡುತ್ತಿದ್ದಾಗಲೇ ಕರೆಗಳು ಬಂದವು. ‘ದೇವರಹಿಪ್ಪರಗಿ ಕ್ಷೇತ್ರದ ತುರಗಾನೂರು ಗ್ರಾಮದಿಂದ ಬಸನಗೌಡ ಪಾಟೀಲ್ ಎಂಬುವವರು ಕರೆ ಮಾಡಿದ್ದರು. ಅಂಬೇಡ್ಕರ್ ವಸತಿ ನಿಗಮದ ಮನೆಗೆ ₹20 ಸಾವಿರ ಕೇಳುತ್ತಿದ್ದಾರೆ, ಬಸವ ವಸತಿ ಯೋಜನೆಯ ಮನೆಗೆ ₹15 ಸಾವಿರ ಕೇಳುತ್ತಿದ್ದಾರೆ ಎಂದು ನನ್ನಲ್ಲಿ ದೂರಿಕೊಂಡಿದ್ದಾರೆ’ ಎಂದು ಅವರು ಮಾಧ್ಯಮದವರಿಗೆ ತಿಳಿಸಿದರು.</p>.<p>‘ಮನೆ ಪಡೆಯಲು ಲಂಚ ಕೇಳ್ತಾರೆ ಎಂದು ದೂರಿ ಬಹಳಷ್ಟು ಜನ ಫೋನ್ ಮಾಡ್ತಾರೆ, ಇಂತಹ ಫೋನ್ ಕರೆ ಸ್ವೀಕರಿಸಿ ನನಗೆ ಸಾಕಾಗಿದೆ’ ಎಂದು ಹೇಳಿದರು. </p>.<p>11 ತಿಂಗಳಿಂದ ವೇತನ ಇಲ್ಲ: ವಿಶ್ವವಿದ್ಯಾಲಯದ 47 ಮಂದಿ ಗುತ್ತಿಗೆ ಕಾರ್ಮಿಕರ ಪೈಕಿ ಕೆಲವರು ಪಾಟೀಲ್ ಅವರನ್ನು ಭೇಟಿ ಮಾಡಿ, ತಮಗೆ 11 ತಿಂಗಳಿಂದ ಸಂಬಳ ನೀಡಿಲ್ಲ ಎಂದು ದೂರಿದರು. ವಿಶ್ವವಿದ್ಯಾಲಯದ ಆರ್ಥಿಕ ಸಂಕಷ್ಟದ ಕುರಿತಂತೆ ಮುಖ್ಯಮಂತ್ರಿ ಅವರ ಗಮನಕ್ಕೆ ತರುವುದಾಗಿ ಅವರು ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ</strong> (ವಿಜಯನಗರ): ‘ನಾನು ಏನು ಹೇಳಬೇಕೆಂದುಕೊಂಡಿದ್ದೆನೊ ಅದನ್ನು ಈಗಾಗಲೇ ಕಲಬುರ್ಗಿಯಲ್ಲಿ ಹೇಳಿದ್ದೇನೆ. ಪೇಪರ್ನಲ್ಲಿ ಏನು ಪ್ರಕಟವಾಗಿದೆಯೋ ಅದನ್ನೇ ನಾನು ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಅವರಿಗೆ ತಿಳಿಸುವೆ’ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಶಾಸಕ ಬಿ.ಆರ್.ಪಾಟೀಲ್ ಹೇಳಿದರು.</p>.<p>ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯಲ್ಲಿ ಪಾಲ್ಗೊಳ್ಳಲು ಮಂಗಳವಾರ ಕ್ಯಾಂಪಸ್ಗೆ ಬಂದಿದ್ದ ಅವರು ಮಾಧ್ಯಮದವರಿಗೆ ಹೀಗೆ ಪ್ರತಿಕ್ರಿಯಿಸಿದರು. </p>.<p>ಹಲವು ಶಾಸಕರಲ್ಲಿ ಹಾಗೂ ದೇಶಪಾಂಡೆ, ರಾಯರೆಡ್ಡಿ ಅವರಂತಹ ಹಿರಿಯ ಮುಖಂಡರಲ್ಲಿ ಸರ್ಕಾರದ ವಿರುದ್ಧ ಅಸಮಾಧಾನ ಹೊಗೆಯಾಡುತ್ತಿರುವ ಕುರಿತ ಪ್ರಶ್ನೆಗೆ ‘ಸಂಸಾರ ಎಂದ ಮೇಲೆ ಗಂಡ ಹೆಂಡತಿ ಜಗಳ ಇದ್ದೇ ಇರುತ್ತದೆ, ಅದೇ ರೀತಿಯಲ್ಲಿ ಪಕ್ಷದಲ್ಲೂ ಇದೆ ಅಷ್ಟೇ’ ಎಂದರು.</p>.<p class="Subhead">ಪಾಟೀಲರಿಗೆ ಪದೇ ಪದೇ ಫೋನ್:</p>.<p>ರಾಜ್ಯದ ಹಲವೆಡೆಗಳಿಂದ ವಸತಿ ಯೋಜನೆಗೆ ಲಂಚ ಕೇಳಿದ ಕುರಿತಂತೆ ಪಾಟೀಲರಿಗೆ ಫೋನ್ ಕರೆಗಳು ಬರುತ್ತಿದ್ದು, ಮಂಗಳವಾರವೂ ಮಾಧ್ಯಮಗಳ ಜತೆಗೆ ಮಾತನಾಡುತ್ತಿದ್ದಾಗಲೇ ಕರೆಗಳು ಬಂದವು. ‘ದೇವರಹಿಪ್ಪರಗಿ ಕ್ಷೇತ್ರದ ತುರಗಾನೂರು ಗ್ರಾಮದಿಂದ ಬಸನಗೌಡ ಪಾಟೀಲ್ ಎಂಬುವವರು ಕರೆ ಮಾಡಿದ್ದರು. ಅಂಬೇಡ್ಕರ್ ವಸತಿ ನಿಗಮದ ಮನೆಗೆ ₹20 ಸಾವಿರ ಕೇಳುತ್ತಿದ್ದಾರೆ, ಬಸವ ವಸತಿ ಯೋಜನೆಯ ಮನೆಗೆ ₹15 ಸಾವಿರ ಕೇಳುತ್ತಿದ್ದಾರೆ ಎಂದು ನನ್ನಲ್ಲಿ ದೂರಿಕೊಂಡಿದ್ದಾರೆ’ ಎಂದು ಅವರು ಮಾಧ್ಯಮದವರಿಗೆ ತಿಳಿಸಿದರು.</p>.<p>‘ಮನೆ ಪಡೆಯಲು ಲಂಚ ಕೇಳ್ತಾರೆ ಎಂದು ದೂರಿ ಬಹಳಷ್ಟು ಜನ ಫೋನ್ ಮಾಡ್ತಾರೆ, ಇಂತಹ ಫೋನ್ ಕರೆ ಸ್ವೀಕರಿಸಿ ನನಗೆ ಸಾಕಾಗಿದೆ’ ಎಂದು ಹೇಳಿದರು. </p>.<p>11 ತಿಂಗಳಿಂದ ವೇತನ ಇಲ್ಲ: ವಿಶ್ವವಿದ್ಯಾಲಯದ 47 ಮಂದಿ ಗುತ್ತಿಗೆ ಕಾರ್ಮಿಕರ ಪೈಕಿ ಕೆಲವರು ಪಾಟೀಲ್ ಅವರನ್ನು ಭೇಟಿ ಮಾಡಿ, ತಮಗೆ 11 ತಿಂಗಳಿಂದ ಸಂಬಳ ನೀಡಿಲ್ಲ ಎಂದು ದೂರಿದರು. ವಿಶ್ವವಿದ್ಯಾಲಯದ ಆರ್ಥಿಕ ಸಂಕಷ್ಟದ ಕುರಿತಂತೆ ಮುಖ್ಯಮಂತ್ರಿ ಅವರ ಗಮನಕ್ಕೆ ತರುವುದಾಗಿ ಅವರು ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>