<p><strong>ಹೊಸಪೇಟೆ</strong> (ವಿಜಯನಗರ): ‘ಸೈದ್ಧಾಂತಿಕ ಭಿನ್ನಾಭಿಪ್ರಾಯದ ಸಹಜ ಪ್ರವೃತ್ತಿಯು ಇಷ್ಟವಾಗದಿದ್ದರೆ ಅದನ್ನು ಖಂಡಿಸಬಹುದು. ಆದರೆ, ದೇಶದಲ್ಲಿ ಇಂದು ವೈಚಾರಿಕ ವಿಭಜಕ ಪ್ರವೃತ್ತಿಯು ವೃತ್ತಿಯಾಗಿ ಕಾಣಿಸಿಕೊಳ್ಳುತ್ತಿದೆ. ಇದು ಬಹಳ ಅಪಾಯಕಾರಿ’ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.</p>.<p>ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗವು ಹೊರತಂದ 42 ಪುಸ್ತಕಗಳನ್ನು ಮಂಗಳವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.</p>.<p>‘ಭಿನ್ನಾಭಿಪ್ರಾಯ ಪ್ರಜಾಪ್ರಭುತ್ವದ ಲಕ್ಷಣ. ಅದನ್ನು ಮೀರಿ ರಸ್ತೆ ವಿಭಜಕಗಳಂತೆ ಪರಸ್ಪರ ಚರ್ಚಿಸುವುದನ್ನೇ ಹತ್ತಿಕ್ಕುವ ವಾತಾವರಣ ಸೃಷ್ಟಿ ಆಗುತ್ತಿದೆ. ಈ ಬಗ್ಗೆ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ’ ಎಂದರು.</p>.<p>ಅನುದಾನ ಕೊಡಿ: ‘ಕನ್ನಡ ವಿಶ್ವವಿದ್ಯಾಲಯ ಸಂಶೋಧನೆಗೆಂದೆ ಸ್ಥಾಪನೆಗೊಂಡ ಜ್ಞಾನ ಕೇಂದ್ರ. ಇದಕ್ಕೆ ಸರ್ಕಾರ ಸೂಕ್ತ ಅನುದಾನ ಕೊಡಲೇಬೇಕು. ವಿವಿಧ ಅಧ್ಯಯನ ಪೀಠಗಳಿಗೆ ಶಕ್ತಿ ತುಂಬಬೇಕು. ಕೆಲ ಪೀಠಗಳಿಗೆ ವರ್ಷಕ್ಕೆ ₹2 ಕೋಟಿ ಅನುದಾನ ನೀಡಲಾಗುತ್ತಿದೆ, ಕನ್ನಡ ವಿಶ್ವವಿದ್ಯಾಲಯಕ್ಕೆ ನೀಡುವ ವಾರ್ಷಿಕ ಅನುದಾನ ₹2 ಕೋಟಿಗಿಂತ ಕಡಿಮೆ ಇದೆ. ಇಂತಹ ತಾರತಮ್ಯ ಧೋರಣೆ ಬಿಡಬೇಕು’ ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ</strong> (ವಿಜಯನಗರ): ‘ಸೈದ್ಧಾಂತಿಕ ಭಿನ್ನಾಭಿಪ್ರಾಯದ ಸಹಜ ಪ್ರವೃತ್ತಿಯು ಇಷ್ಟವಾಗದಿದ್ದರೆ ಅದನ್ನು ಖಂಡಿಸಬಹುದು. ಆದರೆ, ದೇಶದಲ್ಲಿ ಇಂದು ವೈಚಾರಿಕ ವಿಭಜಕ ಪ್ರವೃತ್ತಿಯು ವೃತ್ತಿಯಾಗಿ ಕಾಣಿಸಿಕೊಳ್ಳುತ್ತಿದೆ. ಇದು ಬಹಳ ಅಪಾಯಕಾರಿ’ ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದರು.</p>.<p>ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗವು ಹೊರತಂದ 42 ಪುಸ್ತಕಗಳನ್ನು ಮಂಗಳವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.</p>.<p>‘ಭಿನ್ನಾಭಿಪ್ರಾಯ ಪ್ರಜಾಪ್ರಭುತ್ವದ ಲಕ್ಷಣ. ಅದನ್ನು ಮೀರಿ ರಸ್ತೆ ವಿಭಜಕಗಳಂತೆ ಪರಸ್ಪರ ಚರ್ಚಿಸುವುದನ್ನೇ ಹತ್ತಿಕ್ಕುವ ವಾತಾವರಣ ಸೃಷ್ಟಿ ಆಗುತ್ತಿದೆ. ಈ ಬಗ್ಗೆ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ’ ಎಂದರು.</p>.<p>ಅನುದಾನ ಕೊಡಿ: ‘ಕನ್ನಡ ವಿಶ್ವವಿದ್ಯಾಲಯ ಸಂಶೋಧನೆಗೆಂದೆ ಸ್ಥಾಪನೆಗೊಂಡ ಜ್ಞಾನ ಕೇಂದ್ರ. ಇದಕ್ಕೆ ಸರ್ಕಾರ ಸೂಕ್ತ ಅನುದಾನ ಕೊಡಲೇಬೇಕು. ವಿವಿಧ ಅಧ್ಯಯನ ಪೀಠಗಳಿಗೆ ಶಕ್ತಿ ತುಂಬಬೇಕು. ಕೆಲ ಪೀಠಗಳಿಗೆ ವರ್ಷಕ್ಕೆ ₹2 ಕೋಟಿ ಅನುದಾನ ನೀಡಲಾಗುತ್ತಿದೆ, ಕನ್ನಡ ವಿಶ್ವವಿದ್ಯಾಲಯಕ್ಕೆ ನೀಡುವ ವಾರ್ಷಿಕ ಅನುದಾನ ₹2 ಕೋಟಿಗಿಂತ ಕಡಿಮೆ ಇದೆ. ಇಂತಹ ತಾರತಮ್ಯ ಧೋರಣೆ ಬಿಡಬೇಕು’ ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>