ಭಕ್ತರು ಬೆನ್ನಿಗೆ ಅಲಗು ಚುಚ್ಚಿಸಿಕೊಂಡು ಹರಕೆ ತೀರಿಸಿದರು. ಹಂಪಿಗೆ ಹೋಗುವ ಮಾರ್ಗದ ಕಾಲುವೆಯಲ್ಲಿ ದೇವಿಗೆ ಗಂಗಾಪೂಜೆ ನೆರವೇರಿಸಿದರು. ಅನಂತರ ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಮಡೆ ಸ್ನಾನ ಮಾಡಿ ಅಗ್ನಿಕುಂಡ ದಾಟಿದರು. ವಿವಿಧ ಕಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಗ್ರಾಮದ ಮುಖಂಡರಾದ ಮಾರೆಪ್ಪ, ಇಳಂಗಪ್ಪ ವೆಂಕಟೇಶ್, ಮಣಿಕಂಠ, ಗೋವಿಂದರಾಜು ಇತರರರಿದ್ದರು.