ಪ್ರತಿ ಬೂತ್ನಲ್ಲಿ ಮನೆ ಮನೆ ಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗುವುದು. ಬೆಳಿಗ್ಗೆ 8 ಗಂಟೆಗೆ ಬೂತ್ ಮಟ್ಟದ ಹಿರಿಯ ಮುಖಂಡರು, ಎಲ್ಲ ಚುನಾಯಿತ ಜನಪ್ರತಿನಿಧಿಗಳು, ಮಹಿಳಾ ಕಾರ್ಯಕರ್ತರು, ಯುವಕರು, ಅಭಿಮಾನಿಗಳು ಅಭಿಯಾನದಲ್ಲಿ ಭಾಗವಹಿಸಿ ಮನೆ ಮನೆಗೆ ತೆರಳುತ್ತಾರೆ ಹಾಗೂ ಬಿ. ಶ್ರೀರಾಮುಲು ಪರವಾಗಿ ಮತ ಯಾಚಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.