ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ 40 ತಿಂಗಳಿಂದ ಫೆಲೋಶಿಪ್ ಕೊಟ್ಟಿಲ್ಲ. ಸಾಲ ಮಾಡಿ ಓದುತ್ತಿದ್ದಾರೆ. ಹಲವರು ಸಂಶೋಧನೆ ಮೊಟಕುಗೊಳಿಸುವ ಹಂತಕ್ಕೆ ಬಂದಿದ್ದಾರೆ. ಇದನ್ನೆಲ್ಲ ನೋಡಿಯೇ ದೊಡ್ಡಬಸಪ್ಪ ನೇತೃತ್ವದಲ್ಲಿ ವಿದ್ಯಾರ್ಥಿಗಳು ಅವರ ಸಮಸ್ಯೆಯನ್ನು ರಾಜ್ಯಪಾಲರು, ಮುಖ್ಯಮಂತ್ರಿಯವರಿಗೆ ತಿಳಿಸಿದ್ದಾರೆ. ಇದನ್ನೇ ದೊಡ್ಡ ವಿಷಯ ಮಾಡಿ, ದುರ್ವರ್ತನೆ ಎಂದು ಆರೋಪಿಸಿ ಅವರ ಪಿಎಚ್.ಡಿ. ನೋಂದಣಿ ರದ್ದುಪಡಿಸಬಾರದೇಕೆ ಎಂದು ನೋಟಿಸ್ ಕೊಟ್ಟಿರುವುದು ಖಂಡನೀಯ ಎಂದಿದ್ದಾರೆ.