ಕುಟುಂಬ ನಿರ್ವಹಣೆಗೆ ಈ ದುಡಿಮೆಯ ಮೇಲೆ ಅವಲಂಬಿತರಾದವರು ಹೆಚ್ಚು. ಈ ವಿಷಯವನ್ನು ಸರ್ಕಾರದ ಗಮನಕ್ಕೆ ಈ ಹಿಂದೆಯೂ ತರಲಾಗಿದೆ. ನಮ್ಮ ಯೂನಿಯನ್ ವತಿಯಿಂದ ಕಳೆದ ಬಾರಿ ದಿಢೀರನೆ ಲಾಕ್ಡೌನ್ ವಿಧಿಸಿದಾಗಲೂ ಪರಿಹಾರ ಪ್ಯಾಕೇಜ್ ಘೋಷಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದೆವು. ಆದರೆ ನಮ್ಮ ಬೇಡಿಕೆಯನ್ನು ಸರ್ಕಾರ ನಿರ್ಲಕ್ಷಿಸಿದೆ ಎಂದು ಯೂನಿಯನ್ ಉಪಾಧ್ಯಕ್ಷ ಯರಿಸ್ವಾಮಿ ಮುಂಡರಗಿ ಆರೋಪಿಸಿದ್ದಾರೆ.