‘ಹಲವು ವರ್ಷಗಳಿಂದ ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳಿಂದ ಬಾಗಲಕೋಟೆ, ವಿಜಯಪುರ, ಸೊಲ್ಲಾಪುರ ಹಾಗೂ ಮುಂಬೈ ನಗರಗಳಿಗೆ ನೇರ ರೈಲಿನ ಸಂಪರ್ಕ ಇಲ್ಲ. ಪ್ರಸ್ತುತ ಸಂಚರಿಸುವ ಮುಂಬೈ-ಗದಗ ಹಾಗೂ ಸೊಲ್ಲಾಪುರ-ಗದಗ ರೈಲುಗಳನ್ನು ಹೊಸಪೇಟೆ, ಬಳ್ಳಾರಿವರೆಗೆ ವಿಸ್ತರಿಸಿದರೆ ಮುಂಬೈ ನಗರಕ್ಕೆ ನೇರ ಸಂಪರ್ಕ ಲಭಿಸಿದಂತಾಗುತ್ತದೆ. ಇದರಿಂದ ಸಾಕಷ್ಟು ಪ್ರಯಾಣಿಕರಿಗೆ ಅನುಕೂಲವಾಗುತ್ತದೆ’ ಎಂದು ತಿಳಿಸಿದರು.