<p><strong>ಹೊಸಪೇಟೆ(ವಿಜಯನಗರ):</strong> ದೇವದಾಸಿ ಪದ್ಧತಿ ನಿರ್ಮೂಲನೆ ಮತ್ತು ಸಾಮಾಜಿಕ ನ್ಯಾಯ ಕಲ್ಪಿಸುವ ಕಾಯ್ದೆ ಜಾರಿಗೆ ಒತ್ತಾಯಿಸಿ ಕುಷ್ಟಗಿಯ ವಿಮುಕ್ತ ದೇವದಾಸಿ ಮಹಿಳಾ ವೇದಿಕೆ ನಡೆಸುತ್ತಿರುವ ರಾಜ್ಯಮಟ್ಟದ ಜನಜಾಗೃತಿ ಕಲಾ ಜಾಥಾ ಮಂಗಳವಾರ ನಗರ ತಲುಪಿತು.</p>.<p>ನಗರದಲ್ಲಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಬಳಿಕ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ವರೆಗೆ ಜಾಥಾ ನಡೆಸಿ, ನಂತರ ಅಲ್ಲಿ ‘ಪ್ರತಿಧ್ವನಿ’ ಕಲಾತಂಡದವರು ‘ದೇವರಿಗೆ ಸವಾಲು’ ಬೀದಿನಾಟಕ ಪ್ರದರ್ಶಿಸಿದರು.</p>.<p>‘ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಪರಿಣತರಿಂದ ತಯಾರಿಸಿದ 2018ರ ದೇವದಾಸಿ ಪದ್ಧತಿ ನಿಷೇಧ ವರದಿಯನ್ನು ಜಾರಿಗೊಳಿಸಬೇಕು. ಪೋಷಕರು ಹಾಗೂ ದೇವದಾಸಿ ಪದ್ಧತಿ ಶೋಷಣೆಗೆ ಒಳಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಕಾಯ್ದೆಗೆ ತಿದ್ದುಪಡಿ ಮಾಡಬೇಕು’ ಎಂದು ಆಗ್ರಹಿಸಿದರು.</p>.<p>‘ಸಮಾನತೆ’ ಟ್ರಸ್ಟ್ ಸಂಚಾಲಕ ರಾಮಚಂದ್ರ, ಕಾರ್ಯದರ್ಶಿ ಎನ್.ಹುಲಿಗೆಮ್ಮ, ಖೈರುನ್ನಿಸಾಮ ದಲಿತ ಸಂಘರ್ಷ ಸಮಿತಿಯ ಎ.ಬಸವರಾಜ್, ವಿಜಯಕುಮಾರ್, ಮಾರೇಶ್, ಉದಯ್ ಕುಮಾರ್, ಬೀದಿ ನಾಟಕದ ನಿರ್ದೇಶಕ ಎಂ.ಆರ್.ಬೇರಿ, ಚಂದಾಲಿಂಗ ಕಲಾಲಬಂಡಿ, ಚೌಡಕೆ ಪದಗಳ ಗಾಯಕಿ ರಾಮವ್ವ ಜೋಗತಿ, ಭಾಗ್ಯವ್ವ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ(ವಿಜಯನಗರ):</strong> ದೇವದಾಸಿ ಪದ್ಧತಿ ನಿರ್ಮೂಲನೆ ಮತ್ತು ಸಾಮಾಜಿಕ ನ್ಯಾಯ ಕಲ್ಪಿಸುವ ಕಾಯ್ದೆ ಜಾರಿಗೆ ಒತ್ತಾಯಿಸಿ ಕುಷ್ಟಗಿಯ ವಿಮುಕ್ತ ದೇವದಾಸಿ ಮಹಿಳಾ ವೇದಿಕೆ ನಡೆಸುತ್ತಿರುವ ರಾಜ್ಯಮಟ್ಟದ ಜನಜಾಗೃತಿ ಕಲಾ ಜಾಥಾ ಮಂಗಳವಾರ ನಗರ ತಲುಪಿತು.</p>.<p>ನಗರದಲ್ಲಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಬಳಿಕ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ವರೆಗೆ ಜಾಥಾ ನಡೆಸಿ, ನಂತರ ಅಲ್ಲಿ ‘ಪ್ರತಿಧ್ವನಿ’ ಕಲಾತಂಡದವರು ‘ದೇವರಿಗೆ ಸವಾಲು’ ಬೀದಿನಾಟಕ ಪ್ರದರ್ಶಿಸಿದರು.</p>.<p>‘ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಪರಿಣತರಿಂದ ತಯಾರಿಸಿದ 2018ರ ದೇವದಾಸಿ ಪದ್ಧತಿ ನಿಷೇಧ ವರದಿಯನ್ನು ಜಾರಿಗೊಳಿಸಬೇಕು. ಪೋಷಕರು ಹಾಗೂ ದೇವದಾಸಿ ಪದ್ಧತಿ ಶೋಷಣೆಗೆ ಒಳಪಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಕಾಯ್ದೆಗೆ ತಿದ್ದುಪಡಿ ಮಾಡಬೇಕು’ ಎಂದು ಆಗ್ರಹಿಸಿದರು.</p>.<p>‘ಸಮಾನತೆ’ ಟ್ರಸ್ಟ್ ಸಂಚಾಲಕ ರಾಮಚಂದ್ರ, ಕಾರ್ಯದರ್ಶಿ ಎನ್.ಹುಲಿಗೆಮ್ಮ, ಖೈರುನ್ನಿಸಾಮ ದಲಿತ ಸಂಘರ್ಷ ಸಮಿತಿಯ ಎ.ಬಸವರಾಜ್, ವಿಜಯಕುಮಾರ್, ಮಾರೇಶ್, ಉದಯ್ ಕುಮಾರ್, ಬೀದಿ ನಾಟಕದ ನಿರ್ದೇಶಕ ಎಂ.ಆರ್.ಬೇರಿ, ಚಂದಾಲಿಂಗ ಕಲಾಲಬಂಡಿ, ಚೌಡಕೆ ಪದಗಳ ಗಾಯಕಿ ರಾಮವ್ವ ಜೋಗತಿ, ಭಾಗ್ಯವ್ವ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>