ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಹೊಸಪೇಟೆ | 2.29 ಲಕ್ಷ ಹೆಕ್ಟೇರ್‌ನಲ್ಲಿ ನಷ್ಟ: ಪರಿಹಾರ ಎಷ್ಟು?

Published : 15 ಸೆಪ್ಟೆಂಬರ್ 2023, 4:58 IST
Last Updated : 15 ಸೆಪ್ಟೆಂಬರ್ 2023, 4:58 IST
ಫಾಲೋ ಮಾಡಿ
Comments
ರೈತರಿಗೆ ಬಹಳ ನಷ್ಟ ಉಂಟಾಗಿದೆ. ಒಂದು ತಿಂಗಳ ಮೊದಲೇ ಈ ಘೋಷಣೆ ಮಾಡಬೇಕಿತ್ತು. ಪರಿಹಾರವನ್ನು ಬೇಗ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು
- ಸಣ್ಣಕ್ಕಿ ರುದ್ದಪ್ಪ, ಅಧ್ಯಕ್ಷರು ರಾಜ್ಯ ರೈತ ಸಂಘದ ಹೊಸಪೇಟೆ ತಾಲ್ಲೂಕು ಅಧ್ಯಕ್ಷ
ಬರ ಘೋಷಣೆಯಾದ ಕಾರಣ ನರೇಗಾ ಅಡಿಯಲ್ಲಿ 100 ದಿನದ ಬದಲಿಗೆ 150 ದಿನ ಉದ್ಯೋಗಕ್ಕೆ ಅವಕಾಶ ಸಿಗಲಿದೆ. ನಿಯಮ ಶೀಘ್ರ ಜಾರಿಯಾಗುವ ನಿರೀಕ್ಷೆ ಇದೆ
- ಸದಾಶಿವ ಪ್ರಭು, ಬಿ. ಸಿಇಒ ಜಿಲ್ಲಾ ಪಂಚಾಯಿತಿ
ಗರಿಷ್ಠ 2 ಹೆಕ್ಟೇರ್‌ಗಷ್ಟೇ ಪರಿಹಾರ!
ಬರಗಾಲ ಘೋಷಣೆಯಾದ ಬಳಿಕ ನಷ್ಟ ಪರಿಹಾರಕ್ಕೂ ಕೆಲವೊಂದು ನಿಯಮ ರೂಪಿಸಲಾಗುತ್ತದೆ. ಸದ್ಯ ಇರುವ ನಿಯಮದಂತೆ ಗರಿಷ್ಠ 2 ಹೆಕ್ಟೇರ್‌ಗಷ್ಟೇ ಪರಿಹಾರ ನೀಡಲು ಅವಕಾಶ ಇದೆ. ಒಬ್ಬ ರೈತನಿಗೆ 10 ಹೆಕ್ಟೇರ್‌ನಲ್ಲಿ ಬೆಳೆ ನಷ್ಟವಾಗಿದ್ದರೂ ಆತನಿಗೆ ಸಿಗುವುದು ಗರಿಷ್ಠ 2 ಹೆಕ್ಟೇರ್‌ನ ಬೆಳೆ ಪರಿಹಾರ. ಅದು ಸಹ ಸರ್ಕಾರ ನಿಗದಿಪಡಿಸಿದ ದರದಲ್ಲಿ. ಹೀಗಾಗಿ ಪರಿಹಾರದಿಂದ ರೈತರಿಗೆ ಆಗಿರುವ ನಷ್ಟ ಪೂರ್ತಿ ಭರ್ತಿಯಾಗದಿದ್ದರೂ ಒಂದಿಷ್ಟು ಸಾಂತ್ವನ ರೀತಿಯಲ್ಲಿ ಪರಿಹಾರ ಮೊತ್ತ ಬ್ಯಾಂಕ್‌ ಖಾತೆ ಸೇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT