ಗರಿಷ್ಠ 2 ಹೆಕ್ಟೇರ್ಗಷ್ಟೇ ಪರಿಹಾರ!
ಬರಗಾಲ ಘೋಷಣೆಯಾದ ಬಳಿಕ ನಷ್ಟ ಪರಿಹಾರಕ್ಕೂ ಕೆಲವೊಂದು ನಿಯಮ ರೂಪಿಸಲಾಗುತ್ತದೆ. ಸದ್ಯ ಇರುವ ನಿಯಮದಂತೆ ಗರಿಷ್ಠ 2 ಹೆಕ್ಟೇರ್ಗಷ್ಟೇ ಪರಿಹಾರ ನೀಡಲು ಅವಕಾಶ ಇದೆ. ಒಬ್ಬ ರೈತನಿಗೆ 10 ಹೆಕ್ಟೇರ್ನಲ್ಲಿ ಬೆಳೆ ನಷ್ಟವಾಗಿದ್ದರೂ ಆತನಿಗೆ ಸಿಗುವುದು ಗರಿಷ್ಠ 2 ಹೆಕ್ಟೇರ್ನ ಬೆಳೆ ಪರಿಹಾರ. ಅದು ಸಹ ಸರ್ಕಾರ ನಿಗದಿಪಡಿಸಿದ ದರದಲ್ಲಿ. ಹೀಗಾಗಿ ಪರಿಹಾರದಿಂದ ರೈತರಿಗೆ ಆಗಿರುವ ನಷ್ಟ ಪೂರ್ತಿ ಭರ್ತಿಯಾಗದಿದ್ದರೂ ಒಂದಿಷ್ಟು ಸಾಂತ್ವನ ರೀತಿಯಲ್ಲಿ ಪರಿಹಾರ ಮೊತ್ತ ಬ್ಯಾಂಕ್ ಖಾತೆ ಸೇರಲಿದೆ.