ಈ ಹಿಂದೆ ಗ್ರಾಮದಲ್ಲಿ ನಡೆದಿರುವ ಘಟನೆ ಹಾಗೂ ಸನ್ನಿವೇಶಗಳನ್ನು ಆಧರಿಸಿ ಕೂಡ್ಲಿಗಿ ಪೊಲೀಸ್ ಠಾಣೆಯ ಹನಸಿ, ಮರಿಯಮ್ಮನಹಳ್ಳಿ ಠಾಣೆಯ ತಿಮ್ಮಲಾಪುರ, ಹೊಸಹಳ್ಳಿ ಠಾಣೆಯ ಐಗಳ ಮಲ್ಲಾಪುರ ಮತ್ತು ಟಿ.ಕಲ್ಲಹಳ್ಳಿ ಹಾಗೂ ನಗರ ಗ್ರಾಮೀಣ ಪೊಲೀಸ್ ಠಾಣೆಯ ಹಳೇ ಮಲಪನಗುಡಿ ಮತ್ತು ಕಾರಿಗನೂರು ಗ್ರಾಮಗಳಲ್ಲಿ ಜುಲೈ 20 ರಿಂದ 29ರ ವರೆಗೆ ಮೊಹರಂ ಹಬ್ಬದ ಆಚರಣೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.