‘ಜಿಲ್ಲೆ ಗಂಭೀರವಾಗಿ ನೀರಿನ ಸಮಸ್ಯೆ ಎದುರಿಸುತ್ತಿದೆ. ಸಚಿವರು ಸಭೆಯಲ್ಲಿ ಹಾಜರಿರಲೇಬೇಕಿತ್ತು. ಬೆಂಗಳೂರಿನಲ್ಲೇ ಇದ್ದ ಸಚಿವರಿಗೆ ಇದಕ್ಕಿಂತ ಮಹತ್ವದ ಸಭೆ ಏನಿತ್ತು? ಅವರ ಅನುಪಸ್ಥಿತಿ ಹಲವು ತಪ್ಪು ಸಂದೇಶಗಳಿಗೆ ಕಾರಣವಾಗುತ್ತಿದೆ. ಪಕ್ಷದ ಅಧ್ಯಕ್ಷನಾಗಿ ನಾನು ಜನರಿಗೆ ಉತ್ತರ ನೀಡಬೇಕಿದೆ. ಜಿಲ್ಲೆಯಿಂದ ದೂರವೇ ಉಳಿದಿರುವ ಸಚಿವರು, ಬೆಂಗಳೂರಿನಲ್ಲೇ ನಡೆದ ಸಭೆಯಲ್ಲೂ ಪಾಲ್ಗೊಳ್ಳದೆ ಇರುವುದು ಅಚ್ಚರಿ ತರಿಸಿದೆ’ ಎಂದು ಸಿರಾಜ್ ಶೇಖ್ ‘ಪ್ರಜಾವಾಣಿ’ಗೆ ತಿಳಿಸಿದರು.