<p><strong>ಹೂವಿನಹಡಗಲಿ</strong>: ತಾಲ್ಲೂಕು ವ್ಯಾಪ್ತಿಯ ತುಂಗಭದ್ರಾ ನದಿ ಪಾತ್ರದಲ್ಲಿನ ಮರಳನ್ನು ಹಾವೇರಿ ಜಿಲ್ಲೆಯ ದಂಧೆಕೋರರು ಅಕ್ರಮವಾಗಿ ದೋಚುತ್ತಿದ್ದಾರೆ. ಮರಳನ್ನು ತೆಪ್ಪಗಳಲ್ಲಿ ತುಂಬಿ ಹರಿಯುವ ನದಿಯಲ್ಲೇ ಆ ಕಡೆ ದಡಕ್ಕೆ ಸಾಗಿಸಲಾಗುತ್ತದೆ.</p>.<p>ತೆಪ್ಪಗಳಲ್ಲಿ ಮರಳು ಸಾಗಣೆ ಮಾಡುವವರ ವಿರುದ್ಧ ತಾಲ್ಲೂಕಿನ ಹಿರೇಬನ್ನಿಮಟ್ಟಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ತೆಪ್ಪಗಳನ್ನು ಭಾನುವಾರ ವಶಪಡಿಸಿಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.</p>.<p>ತುಂಗಭದ್ರಾ ನದಿಯ ಎಡ ದಂಡೆ ಹಾವೇರಿ ಭಾಗದ ದಂಧೆಕೋರರು ತಾಲ್ಲೂಕಿನ ಹಿರೇಬನ್ನಿಮಟ್ಟಿ, ಬ್ಯಾಲಹುಣ್ಸಿ, ನಂದಿಗಾವಿ, ಮೈಲಾರ ಭಾಗದ ನದಿ ತೀರಕ್ಕೆ ಲಗ್ಗೆ ಇಟ್ಟಿದ್ದಾರೆ. ಪ್ರತಿದಿನ ನೂರಾರು ತೆಪ್ಪಗಳಲ್ಲಿ ಮರಳನ್ನು ತುಂಬಿ ಈ ದಡದಿಂದ ಹಾವೇರಿ ತಾಲ್ಲೂಕಿನ ಹುರುಳಿಹಾಳ, ಗಳಗನಾಥ, ತೆರದಹಳ್ಳಿ, ಮೇವುಂಡಿ ತೀರಕ್ಕೆ ಸಾಗಿಸಲಾಗುತ್ತಿದೆ. ಅಲ್ಲಿಂದ ಲಾರಿಗಳಿಗೆ ತುಂಬಿಸಿ ನಗರ ಪ್ರದೇಶಗಳಿಗೆ ಸಾಗಣೆ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.</p>.<p>ಹೂವಿನಹಡಗಲಿ ಭಾಗದ ಮರಳು ಬ್ಲಾಕ್ಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಈ ಭಾಗದಲ್ಲಿ ಉತ್ಕೃಷ್ಟ ಮರಳು ಲಭ್ಯವಿರುವುದರಿಂದ ಎಡ ದಂಡೆಯ ದಂಧೆಕೋರರು ತಾಲ್ಲೂಕಿನ ಆಯಕಟ್ಟಿನ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಮರಳು ತುಂಬುತ್ತಿದ್ದಾರೆ. ಬೆಳಿಗ್ಗೆಯಿಂದ ಸಂಜೆವರೆಗೂ ನಿರಂತರವಾಗಿ ಮರಳು ತೆಪ್ಪಗಳು ನದಿಯಲ್ಲಿ ಓಡಾಡುತ್ತಿವೆ. ಈ ದಂಧೆ ಎಗ್ಗಿಲ್ಲದೇ ನಡೆದಿದ್ದರೂ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.</p>.<p>ಕೆಲ ದಿನಗಳ ಹಿಂದೆ ಅಧಿಕಾರಿಗಳು ಎರಡೂ ದಡಗಳಲ್ಲಿ ಜಂಟಿ ದಾಳಿ ನಡೆಸಿದಾಗ ಕೆಲ ದಿನ ಮಟ್ಟಿಗೆ ಮಾತ್ರ ತೆಪ್ಪಗಳ ಸಾಗಣೆ ನಿಯಂತ್ರಣವಾಗಿತ್ತು. ಈಗ ಮತ್ತೆ ತುಂಗಭದ್ರೆಯಲ್ಲಿ ತೆಪ್ಪಗಳ ಭರಾಟೆ ಕಂಡು ಬರುತ್ತಿದೆ ಎಂದು ಹೇಳಿದ್ದಾರೆ.</p>.<div><blockquote>ಎಡ ದಂಡೆಯವರು ಮರಳನ್ನು ತೆಪ್ಪಗಳಲ್ಲಿ ಸಾಗಿಸುವ ಮಾಹಿತಿ ಬಂದಿದೆ. ನದಿ ಪಾತ್ರದಲ್ಲಿ ನಿಗಾ ಇರಿಸಲು ಹಿರೇಹಡಗಲಿ ಪೊಲೀಸರಿಗೆ ತಿಳಿಸಲಾಗಿದ್ದು ಅಕ್ರಮ ತಡೆಗೆ ಕ್ರಮ ವಹಿಸುತ್ತೇವೆ </blockquote><span class="attribution">ಜಿ. ಸಂತೋಷಕುಮಾರ್, ತಹಶೀಲ್ದಾರ್ ಹೂವಿನಹಡಗಲಿ</span></div>.<p><strong>ಹಿರೇಬನ್ನಿಮಟ್ಟಿ ಗ್ರಾಮಸ್ಥರ ಆಕ್ರೋಶ </strong></p><p>ಕಳೆದ ವರ್ಷ ಜಾನುವಾರು ಮೈ ತೊಳೆಯಲು ನದಿಗೆ ಇಳಿದಿದ್ದ ಇಬ್ಬರು ಗುಂಡಿಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ‘ನೀವೇನು ನದಿಯಲ್ಲಿ ಗುಂಡಿ ತೋಡಿ ಮರಳು ಕೊಂಡೊಯ್ಯುತ್ತೀರಿ. ಸಾವು ನೋವು ಅನುಭವಿಸುವವರು ನಾವು’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. </p><p>ಈ ದಂಧೆ ಮಾಫಿಯಾ ಸ್ವರೂಪ ಪಡೆದಿದೆ. ಎರಡೂ ದಂಡೆಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಮರಳು ಅಕ್ರಮಕ್ಕೆ ಕಡಿವಾಣ ಹಾಕಬೇಕು ಎಂದು ಹಿರೇಬನ್ನಿಮಟ್ಟಿಯ ದುರುಗಪ್ಪ ನೀಲಪ್ಪ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂವಿನಹಡಗಲಿ</strong>: ತಾಲ್ಲೂಕು ವ್ಯಾಪ್ತಿಯ ತುಂಗಭದ್ರಾ ನದಿ ಪಾತ್ರದಲ್ಲಿನ ಮರಳನ್ನು ಹಾವೇರಿ ಜಿಲ್ಲೆಯ ದಂಧೆಕೋರರು ಅಕ್ರಮವಾಗಿ ದೋಚುತ್ತಿದ್ದಾರೆ. ಮರಳನ್ನು ತೆಪ್ಪಗಳಲ್ಲಿ ತುಂಬಿ ಹರಿಯುವ ನದಿಯಲ್ಲೇ ಆ ಕಡೆ ದಡಕ್ಕೆ ಸಾಗಿಸಲಾಗುತ್ತದೆ.</p>.<p>ತೆಪ್ಪಗಳಲ್ಲಿ ಮರಳು ಸಾಗಣೆ ಮಾಡುವವರ ವಿರುದ್ಧ ತಾಲ್ಲೂಕಿನ ಹಿರೇಬನ್ನಿಮಟ್ಟಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎರಡು ತೆಪ್ಪಗಳನ್ನು ಭಾನುವಾರ ವಶಪಡಿಸಿಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.</p>.<p>ತುಂಗಭದ್ರಾ ನದಿಯ ಎಡ ದಂಡೆ ಹಾವೇರಿ ಭಾಗದ ದಂಧೆಕೋರರು ತಾಲ್ಲೂಕಿನ ಹಿರೇಬನ್ನಿಮಟ್ಟಿ, ಬ್ಯಾಲಹುಣ್ಸಿ, ನಂದಿಗಾವಿ, ಮೈಲಾರ ಭಾಗದ ನದಿ ತೀರಕ್ಕೆ ಲಗ್ಗೆ ಇಟ್ಟಿದ್ದಾರೆ. ಪ್ರತಿದಿನ ನೂರಾರು ತೆಪ್ಪಗಳಲ್ಲಿ ಮರಳನ್ನು ತುಂಬಿ ಈ ದಡದಿಂದ ಹಾವೇರಿ ತಾಲ್ಲೂಕಿನ ಹುರುಳಿಹಾಳ, ಗಳಗನಾಥ, ತೆರದಹಳ್ಳಿ, ಮೇವುಂಡಿ ತೀರಕ್ಕೆ ಸಾಗಿಸಲಾಗುತ್ತಿದೆ. ಅಲ್ಲಿಂದ ಲಾರಿಗಳಿಗೆ ತುಂಬಿಸಿ ನಗರ ಪ್ರದೇಶಗಳಿಗೆ ಸಾಗಣೆ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.</p>.<p>ಹೂವಿನಹಡಗಲಿ ಭಾಗದ ಮರಳು ಬ್ಲಾಕ್ಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಈ ಭಾಗದಲ್ಲಿ ಉತ್ಕೃಷ್ಟ ಮರಳು ಲಭ್ಯವಿರುವುದರಿಂದ ಎಡ ದಂಡೆಯ ದಂಧೆಕೋರರು ತಾಲ್ಲೂಕಿನ ಆಯಕಟ್ಟಿನ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಮರಳು ತುಂಬುತ್ತಿದ್ದಾರೆ. ಬೆಳಿಗ್ಗೆಯಿಂದ ಸಂಜೆವರೆಗೂ ನಿರಂತರವಾಗಿ ಮರಳು ತೆಪ್ಪಗಳು ನದಿಯಲ್ಲಿ ಓಡಾಡುತ್ತಿವೆ. ಈ ದಂಧೆ ಎಗ್ಗಿಲ್ಲದೇ ನಡೆದಿದ್ದರೂ ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.</p>.<p>ಕೆಲ ದಿನಗಳ ಹಿಂದೆ ಅಧಿಕಾರಿಗಳು ಎರಡೂ ದಡಗಳಲ್ಲಿ ಜಂಟಿ ದಾಳಿ ನಡೆಸಿದಾಗ ಕೆಲ ದಿನ ಮಟ್ಟಿಗೆ ಮಾತ್ರ ತೆಪ್ಪಗಳ ಸಾಗಣೆ ನಿಯಂತ್ರಣವಾಗಿತ್ತು. ಈಗ ಮತ್ತೆ ತುಂಗಭದ್ರೆಯಲ್ಲಿ ತೆಪ್ಪಗಳ ಭರಾಟೆ ಕಂಡು ಬರುತ್ತಿದೆ ಎಂದು ಹೇಳಿದ್ದಾರೆ.</p>.<div><blockquote>ಎಡ ದಂಡೆಯವರು ಮರಳನ್ನು ತೆಪ್ಪಗಳಲ್ಲಿ ಸಾಗಿಸುವ ಮಾಹಿತಿ ಬಂದಿದೆ. ನದಿ ಪಾತ್ರದಲ್ಲಿ ನಿಗಾ ಇರಿಸಲು ಹಿರೇಹಡಗಲಿ ಪೊಲೀಸರಿಗೆ ತಿಳಿಸಲಾಗಿದ್ದು ಅಕ್ರಮ ತಡೆಗೆ ಕ್ರಮ ವಹಿಸುತ್ತೇವೆ </blockquote><span class="attribution">ಜಿ. ಸಂತೋಷಕುಮಾರ್, ತಹಶೀಲ್ದಾರ್ ಹೂವಿನಹಡಗಲಿ</span></div>.<p><strong>ಹಿರೇಬನ್ನಿಮಟ್ಟಿ ಗ್ರಾಮಸ್ಥರ ಆಕ್ರೋಶ </strong></p><p>ಕಳೆದ ವರ್ಷ ಜಾನುವಾರು ಮೈ ತೊಳೆಯಲು ನದಿಗೆ ಇಳಿದಿದ್ದ ಇಬ್ಬರು ಗುಂಡಿಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ‘ನೀವೇನು ನದಿಯಲ್ಲಿ ಗುಂಡಿ ತೋಡಿ ಮರಳು ಕೊಂಡೊಯ್ಯುತ್ತೀರಿ. ಸಾವು ನೋವು ಅನುಭವಿಸುವವರು ನಾವು’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. </p><p>ಈ ದಂಧೆ ಮಾಫಿಯಾ ಸ್ವರೂಪ ಪಡೆದಿದೆ. ಎರಡೂ ದಂಡೆಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಮರಳು ಅಕ್ರಮಕ್ಕೆ ಕಡಿವಾಣ ಹಾಕಬೇಕು ಎಂದು ಹಿರೇಬನ್ನಿಮಟ್ಟಿಯ ದುರುಗಪ್ಪ ನೀಲಪ್ಪ ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>