ಗುಡ್ಡದ ಮೇಲೆ ಟ್ಯಾಂಕ್ ನಿರ್ಮಿಸಿದರೆ ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗಕ್ಕೆ ಬಂದು ಹೋಗುವ ಲಕ್ಷಾಂತರ ಭಕ್ತರು ಸಮೀಪದ ಹಲವು ಹಳ್ಳಿಗಳಿಗೆ ಅನುಕೂಲ ಆಗುತ್ತದೆ ಹಾಗಾಗಿ ಪುರಾತತ್ವ ಮತ್ತು ಅರಣ್ಯ ಇಲಾಖೆ ವಿಳಂಬ ಮಾಡದೇ ಅನುಮತಿ ನೀಡಬೇಕು.
ಹಂಚಿನಮನೆ ಕೆಂಚಪ್ಪ, ಪುಣಬಗಟ್ಟಿ
ಚಿಗಟೇರಿ ಹೋಬಳಿಯ ಹಲವು ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊರತೆ ಇದೆ ಬೇಸಿಗೆ ಸಮಯದಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ ಇದೆ ಬಹು ಗ್ರಾಮ ಯೋಜನೆ ಕಾಮಗಾರಿ ಪೂರ್ಣಗೊಳಿಸಬೇಕು
ಸಣ್ಣಲಿಂಗನಗೌಡ, ವಕೀಲರು, ಹರಪನಹಳ್ಳಿ
ಹಗರಿ ಹಳ್ಳದ ವ್ಯಾಪ್ತಿಯಲ್ಲಿ ಬರುವ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಜಲ ಜೀವನ್ ಮಿಷನ್ ನಡಿ 107 ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆ ಶೀಘ್ರ ಪೂರ್ಣಗೊಳಿಸಲು ಅರಣ್ಯ ಮತ್ತು ಪುರಾತತ್ವ ಇಲಾಖೆ ಅನುಮತಿ ನೀಡಬೇಕು
ಪಿ. ಚೆನ್ನಮ್ಮ, ಮತ್ತಿಹಳ್ಳಿ
6 ಕಡೆಗೆ ನೀರು ಸಂಗ್ರಹಾಗಾರ ಟ್ಯಾಂಕ್ ನಿರ್ಮಿಸಲು ಅರಣ್ಯ ಇಲಾಖೆ ಜೊತೆ ಪತ್ರ ವ್ಯವಹಾರ ನಡೆಸಿದ್ದು ಅನುಮತಿ ದೊರೆಯುವ ನಿರೀಕ್ಷೆಯಿದೆ. ಉಚ್ವಂಗಿದುರ್ಗದ್ದು ಇನ್ನೂ ಅಂತಿಮವಾಗಿಲ್ಲ
ದೀಪಾ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಇಇ