ಈ ವಿಷಯವಾಗಿ ಖುದ್ದು ಮೂಲಸೌಕರ್ಯ ಅಭಿವೃದ್ಧಿ, ಹಜ್ ಮತ್ತು ವಕ್ಫ್ ಖಾತೆ ಸಚಿವ ಆನಂದ್ ಸಿಂಗ್ ಹಲವು ಸಲ ಹೇಳಿಕೆ ನೀಡಿದ್ದರು. ‘ಹೊಸ ಜಿಲ್ಲೆ ರಚನೆಯಿಂದ ಈ ಹಿಂದಿನ ಯಾವ ಸೌಲಭ್ಯಗಳು ಹೋಗುವುದಿಲ್ಲ. ಕಲಬುರ್ಗಿ ಜಿಲ್ಲೆಯಿಂದ ಯಾದಗಿರಿ ವಿಭಜನೆಗೊಂಡರೂ ಅದಕ್ಕೆ ಈ ಹಿಂದಿನಂತೆಯೇ ಎಲ್ಲ ಸವಲತ್ತುಗಳು ಸಿಗುತ್ತಿವೆ. ಅದರಂತೆಯೇ ವಿಜಯನಗರಕ್ಕೂ ಸಿಗಲಿವೆ’ ಎಂದಿದ್ದರು. ಈಗ ಅವರ ಮಾತು ನಿಜವಾಗಿದೆ.