‘2018–19ನೇ ಸಾಲಿನ ₹2.44 ಕೋಟಿ ವಸೂಲಾತಿಗೆ ಲೆಕ್ಕಪತ್ರ ಇಲಾಖೆಯು ಸೂಚಿಸಿದೆ ಎಂದು ರಮೇಶ ಆರೋಪಿಸಿದ್ದಾರೆ. ದೂರಶಿಕ್ಷಣ, ಅಧ್ಯಯನಾಂಗ, ವಿದ್ಯಾರ್ಥಗಳ ಶುಲ್ಕ ಮರುಪಾವತಿ, ಶಿಷ್ಯವೇತನ ಮರುಪಾವತಿಗೆ ಬಳಸಲಾಗಿದೆ. ಇದರಲ್ಲಿ ಅಕ್ರಮ ನಡೆಯಲು ಹೇಗೆ ಸಾಧ್ಯ? ಜವಾಬ್ದಾರಿ ಸ್ಥಾನದಲ್ಲಿರುವವರು ವಿವೇಚನಾರಹಿತವಾಗಿ ಆರೋಪ ಮಾಡಬಾರದು. ಇದು ಅವರಿಗೆ ಶೋಭೆ ತರುವುದಿಲ್ಲ’ ಎಂದು ಕಿಡಿಕಾರಿದ್ದಾರೆ.