<p><strong>ಹೂವಿನಹಡಗಲಿ:</strong> ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರ ಮೈಲಾರದಲ್ಲಿ ಫೆ. 4ರಂದು ಮೈಲಾರಲಿಂಗೇಶ್ವರ ಸ್ವಾಮಿ ಕಾರಣಿಕ ಮಹೋತ್ಸವ ಜರುಗಲಿದೆ. ನಾಡಿನ ನಾನಾ ಭಾಗಗಳಿಂದ ಭಕ್ತರ ದಂಡು ಸುಕ್ಷೇತ್ರಕ್ಕೆ ಹರಿದು ಬರುತ್ತಿದೆ.</p><p>ಸ್ವಾಮಿಯ ಕಾರಣಿಕ ನುಡಿ ನೆರವೇರುವ ಮೂರು ದಿನಗಳ ಮುಂಚೆ, ಭಾರತ ಹುಣ್ಣಿಮೆ ದಿನದಿಂದಲೇ ಭಕ್ತರು ಸುಕ್ಷೇತ್ರದತ್ತ ಪ್ರಯಾಣ ಬೆಳೆಸಿದ್ದಾರೆ. ಹೂಮಾಲೆ, ಬಣ್ಣದ ರಿಬ್ಬನ್, ಗೆಜ್ಜೆ ಸರ, ಕೋಡಂಸ, ಜೂಲದಿಂದ ಅಲಂಕರಿಸಿದ ಎತ್ತುಗಳ ಗೆಜ್ಜೆ ಸದ್ದಿನೊಂದಿಗೆ ಮೈಲಾರ- ತೋರಣಗಲ್ಲು ರಾಜ್ಯ ಹೆದ್ದಾರಿಯಲ್ಲಿ ಸಾಗುವ ಸಾಲು ಸಾಲು ಸವಾರಿ ಬಂಡಿಗಳ ಓಟ ಕಣ್ಮನ ಸೆಳೆಯುತ್ತಿದೆ.</p><p>ಮೈಲಾರಕ್ಕೆ ಸಾಗುವ ಎಲ್ಲ ಮಾರ್ಗಗಳಲ್ಲಿ ಎತ್ತಿನ ಬಂಡಿ, ಟ್ರ್ಯಾಕ್ಟರ್, ಟಂಟಂ ವಾಹನಗಳು ಓಡುತ್ತಿವೆ. ಮೈಲಾರಲಿಂಗ ಸ್ವಾಮಿಯನ್ನು ಸ್ಮರಿಸುವ ‘ಏಳು ಕೋಟಿ, ಏಳು ಕೋಟಿ ಚಾಂಗಮಲೋ’ ಘೋಷಣೆಗಳು ರಸ್ತೆಯ ಮಾರ್ಗದಲ್ಲಿ ಮಾರ್ದನಿಸುತ್ತಿವೆ.</p><p>ನಾಡಿನ ನಾನಾ ಭಾಗಗಳಿಂದ ಮೈಲಾರ ಸುಕ್ಷೇತ್ರಕ್ಕೆ ಬಂದಿರುವ ಭಕ್ತರು ಜಾತ್ರಾ ಮೈದಾನ, ಹೊಲ ಗದ್ದೆಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ರೈತರು ತಮ್ಮ ಪರಿವಾರದೊಂದಿಗೆ ಎತ್ತಿನ ಬಂಡಿ, ಟ್ರ್ಯಾಕ್ಟರ್ನಲ್ಲಿ ಬಂದು ವಾಸ್ತವ್ಯ ಹೂಡಿರುವುದರಿಂದ ಮೈಲಾರದಲ್ಲಿ ಗ್ರಾಮೀಣ ಸೊಗಡು ಮೇಳೈಸಿದೆ.</p><p>ಮೈಲಾರಲಿಂಗನ ಸನ್ನಿಧಿಗೆ ಭಕ್ತಿಯ ನಡಿಗೆ: ಮೈಲಾರಲಿಂಗೇಶ್ವರ ಸ್ವಾಮಿಸನ್ನಿಧಿಗೆ ಅಪಾರ ಭಕ್ತರು ಪಾದಯಾತ್ರೆಯಲ್ಲಿ ತೆರಳಿದ್ದಾರೆ. ಕೊಪ್ಪಳ, ಗದಗ, ವಿಜಯನಗರ, ದಾವಣಗೆರೆ ಜಿಲ್ಲೆಯ ಪಾದಯಾತ್ರಿಗಳು ಬಿಸಿಲು, ದಣಿವು, ಆಯಾಸ ಲೆಕ್ಕಿಸದೇ ಮೈಲಾರಲಿಂಗನನ್ನು ಮನದಲ್ಲೇ ನೆನೆಯುತ್ತಾ ಸುಕ್ಷೇತ್ರದತ್ತ ಹೆಜ್ಜೆ ಹಾಕಿದ್ದಾರೆ.</p>.<div><blockquote>ನಮ್ಮ ಮನೆಗೆ, ಮಕ್ಕಳಿಗೆ ಒಳ್ಳೆಯದಾಗಿದೆ. ಹಾಗಾಗಿ ಎರಡನೇ ವರ್ಷವೂ ಕಾಲ್ನಡಿಗೆಯಲ್ಲಿ ಬಂದಿರುವೆ </blockquote><span class="attribution">ಯಲ್ಲಮ್ಮ, ಏಣಿಗಿ ಬಸಾಪುರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೂವಿನಹಡಗಲಿ:</strong> ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರ ಮೈಲಾರದಲ್ಲಿ ಫೆ. 4ರಂದು ಮೈಲಾರಲಿಂಗೇಶ್ವರ ಸ್ವಾಮಿ ಕಾರಣಿಕ ಮಹೋತ್ಸವ ಜರುಗಲಿದೆ. ನಾಡಿನ ನಾನಾ ಭಾಗಗಳಿಂದ ಭಕ್ತರ ದಂಡು ಸುಕ್ಷೇತ್ರಕ್ಕೆ ಹರಿದು ಬರುತ್ತಿದೆ.</p><p>ಸ್ವಾಮಿಯ ಕಾರಣಿಕ ನುಡಿ ನೆರವೇರುವ ಮೂರು ದಿನಗಳ ಮುಂಚೆ, ಭಾರತ ಹುಣ್ಣಿಮೆ ದಿನದಿಂದಲೇ ಭಕ್ತರು ಸುಕ್ಷೇತ್ರದತ್ತ ಪ್ರಯಾಣ ಬೆಳೆಸಿದ್ದಾರೆ. ಹೂಮಾಲೆ, ಬಣ್ಣದ ರಿಬ್ಬನ್, ಗೆಜ್ಜೆ ಸರ, ಕೋಡಂಸ, ಜೂಲದಿಂದ ಅಲಂಕರಿಸಿದ ಎತ್ತುಗಳ ಗೆಜ್ಜೆ ಸದ್ದಿನೊಂದಿಗೆ ಮೈಲಾರ- ತೋರಣಗಲ್ಲು ರಾಜ್ಯ ಹೆದ್ದಾರಿಯಲ್ಲಿ ಸಾಗುವ ಸಾಲು ಸಾಲು ಸವಾರಿ ಬಂಡಿಗಳ ಓಟ ಕಣ್ಮನ ಸೆಳೆಯುತ್ತಿದೆ.</p><p>ಮೈಲಾರಕ್ಕೆ ಸಾಗುವ ಎಲ್ಲ ಮಾರ್ಗಗಳಲ್ಲಿ ಎತ್ತಿನ ಬಂಡಿ, ಟ್ರ್ಯಾಕ್ಟರ್, ಟಂಟಂ ವಾಹನಗಳು ಓಡುತ್ತಿವೆ. ಮೈಲಾರಲಿಂಗ ಸ್ವಾಮಿಯನ್ನು ಸ್ಮರಿಸುವ ‘ಏಳು ಕೋಟಿ, ಏಳು ಕೋಟಿ ಚಾಂಗಮಲೋ’ ಘೋಷಣೆಗಳು ರಸ್ತೆಯ ಮಾರ್ಗದಲ್ಲಿ ಮಾರ್ದನಿಸುತ್ತಿವೆ.</p><p>ನಾಡಿನ ನಾನಾ ಭಾಗಗಳಿಂದ ಮೈಲಾರ ಸುಕ್ಷೇತ್ರಕ್ಕೆ ಬಂದಿರುವ ಭಕ್ತರು ಜಾತ್ರಾ ಮೈದಾನ, ಹೊಲ ಗದ್ದೆಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ರೈತರು ತಮ್ಮ ಪರಿವಾರದೊಂದಿಗೆ ಎತ್ತಿನ ಬಂಡಿ, ಟ್ರ್ಯಾಕ್ಟರ್ನಲ್ಲಿ ಬಂದು ವಾಸ್ತವ್ಯ ಹೂಡಿರುವುದರಿಂದ ಮೈಲಾರದಲ್ಲಿ ಗ್ರಾಮೀಣ ಸೊಗಡು ಮೇಳೈಸಿದೆ.</p><p>ಮೈಲಾರಲಿಂಗನ ಸನ್ನಿಧಿಗೆ ಭಕ್ತಿಯ ನಡಿಗೆ: ಮೈಲಾರಲಿಂಗೇಶ್ವರ ಸ್ವಾಮಿಸನ್ನಿಧಿಗೆ ಅಪಾರ ಭಕ್ತರು ಪಾದಯಾತ್ರೆಯಲ್ಲಿ ತೆರಳಿದ್ದಾರೆ. ಕೊಪ್ಪಳ, ಗದಗ, ವಿಜಯನಗರ, ದಾವಣಗೆರೆ ಜಿಲ್ಲೆಯ ಪಾದಯಾತ್ರಿಗಳು ಬಿಸಿಲು, ದಣಿವು, ಆಯಾಸ ಲೆಕ್ಕಿಸದೇ ಮೈಲಾರಲಿಂಗನನ್ನು ಮನದಲ್ಲೇ ನೆನೆಯುತ್ತಾ ಸುಕ್ಷೇತ್ರದತ್ತ ಹೆಜ್ಜೆ ಹಾಕಿದ್ದಾರೆ.</p>.<div><blockquote>ನಮ್ಮ ಮನೆಗೆ, ಮಕ್ಕಳಿಗೆ ಒಳ್ಳೆಯದಾಗಿದೆ. ಹಾಗಾಗಿ ಎರಡನೇ ವರ್ಷವೂ ಕಾಲ್ನಡಿಗೆಯಲ್ಲಿ ಬಂದಿರುವೆ </blockquote><span class="attribution">ಯಲ್ಲಮ್ಮ, ಏಣಿಗಿ ಬಸಾಪುರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>