ತಾಲ್ಲೂಕು ಆಡಳಿತವು ಸೋಮವಾರ ಶಿಕ್ಷಕರ ದಿನಾಚರಣೆ ಏರ್ಪಡಿಸಿತ್ತು. ಕಾರ್ಯಕ್ರಮದಲ್ಲೇ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಿಬ್ಬಂದಿ, ನಿವೃತ್ತ ಶಿಕ್ಷಕರಿಗೆ ಶಾಸಕರು ಏಳು ಗ್ರಾಂ ತೂಕದ ನಾಣ್ಯ ವಿತರಿಸಿದ್ದಾರೆ. ನಾಣ್ಯದ ಒಂದು ಬದಿಯಲ್ಲಿ ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಚಿತ್ರವಿದೆ. ಇನ್ನೊಂದು ಬದಿಯಲ್ಲಿ ಶಾಸಕರ ಹೆಸರಿದೆ.