ಮಠಗಳಿಗೆ ಸ್ವಾಮಿಗಳಾಗುವವರು ವಿವಾಹಿತರು ಆಗುವುದು ಒಳಿತು. ಮುಂದಿನ ದಿನಗಳಲ್ಲಿ ಕುಟುಂಬ ನಿಯಂತ್ರಣದಲ್ಲಿ ಒಳಪಟ್ಟವರನ್ನೆ ಮಠಗಳಿಗೆ ಪೀಠಾಧಿಪತಿ ಮಾಡಿದರೆ ಸೂಕ್ತ ಅನಿಸುತ್ತದೆ. ಸಾಹಿತಿ, ಪತ್ರಕರ್ತ ಪಿ.ಸಾಯಿನಾಥ ಅವರು ಮಠದಿಂದ ಸ್ವೀಕರಿಸಿದ ಬಸವ ಶ್ರೀ ಪ್ರಶಸ್ತಿಯನ್ನು ವಾಪಸ್ ನೀಡಲು ಮುಂದಾಗಿದ್ದಾರೆ. ಪ್ರಶಸ್ತಿಯನ್ನು ಸ್ವಾಮಿಗಳು ನೀಡಿಲ್ಲ. ಮಠ ನೀಡಿದೆ. ಅದನ್ನು ವಾಪಸ್ ನೀಡುವುದಾದರೆ, ಸಂತ್ರಸ್ತ ಮಕ್ಕಳಿಗೆ ಹಣ ನೀಡಲಿ, ಅವರ ಶಿಕ್ಷಣಕ್ಕೆ ನೆರವಾಗುತ್ತದೆ ಎಂದು ಸಲಹೆ ನೀಡಿದರು.