ಗುರುವಾರ, 21 ಆಗಸ್ಟ್ 2025
×
ADVERTISEMENT
ADVERTISEMENT

ಹೊಸಪೇಟೆ | ಅಲೆಮಾರಿ ಆಯೋಗ ನಿಶ್ಚಿತ: ಪಲ್ಲವಿ

Published : 21 ಆಗಸ್ಟ್ 2025, 5:07 IST
Last Updated : 21 ಆಗಸ್ಟ್ 2025, 5:07 IST
ಫಾಲೋ ಮಾಡಿ
Comments
ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ವಿಜಯನಗರ ಜಿಲ್ಲೆಯಲ್ಲಿ ಅಲೆಮಾರಿಗಳು ಹೆಚ್ಚಿದ್ದಾರೆ ಅವರಿಗೆ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಇಲ್ಲಿ ಉತ್ತಮ ಕೆಲಸ ಆಗಿದೆ.
ಜಿ.ಪಲ್ಲವಿ ಅಧ್ಯಕ್ಷೆ ಎಸ್‌ಸಿ ಎಸ್‌ಟಿ ಅಲೆಮಾರಿ ಅಭಿವೃದ್ಧಿ ನಿಗಮ
ಅಲೆಮಾರಿ ಸಮುದಾಯಗಳಿಗೆ ಜಾತಿ ಪ್ರಮಾಣ ಪತ್ರ ವಿತರಿಸುವಲ್ಲಿ ವಿಳಂಬ ಕೂಡದು ಮೂರು ದಿನಗಳಲ್ಲಿ ಅವರು ವಾಸಿಸಿರುವ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಪ್ರಮಾಣ ಪತ್ರ ವಿತರರಿಸಬೇಕು
ಎಂ.ಎಸ್.ದಿವಾಕರ್ ಜಿಲ್ಲಾಧಿಕಾರಿ
‘ವಂಚನೆಗೆ ಈಗ ಅವಕಾಶ ಇಲ್ಲ’
ನಿಗಮ ಸ್ಥಾಪನೆಯಾದುದು ಕಳೆದ ವರ್ಷ ಅದಕ್ಕಿಂತ ಮೊದಲು ಅಭಿವೃದ್ಧಿ ಕೋಶ ಇತ್ತು. ಆಗ ಮಧ್ಯವರ್ತಿಗಳು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಅಲೆಮಾರಿಗಳ ಯೋಜನೆಗಳನ್ನು ತಮ್ಮ ಹೆಸರಲ್ಲಿ ಮಾಡಿಕೊಂಡಿದ್ದು ಇದೆ. ಈಗ ಅದಕ್ಕೆ ಅವಕಾಶ ಇಲ್ಲ. ಹೊಸಪೇಟೆಯಲ್ಲಿ ಸುಡುಗಾಡು ಸಿದ್ಧರ ಹೆಸರಲ್ಲಿ ಹಲವು ಮುಖಂಡರು ವಂಚನೆ ಮಾಡಿರುವ ಬಗ್ಗೆ ನನಗೆ ಇದೀಗ ದೂರು ಬಂದಿದ್ದು ಅದನ್ನು ಗಂಭೀರವಾಗಿ ಪರಿಗಣಿಸಿ ಇಲ್ಲಿನ ಸಮಾಜ ಕಲ್ಯಾಣ ಅಧಿಕಾರಿಗಳಿಂದ ತನಿಖೆ ಮಾಡಿಸಿ ವರದಿ ತರಿಸಿಕೊಳ್ಳುತ್ತೇನೆ. ಎರಡು ತಿಂಗಳೊಳಗೆ ಈ ಸಮಸ್ಯೆ ಪರಿಹರಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುತ್ತೇನೆ ಎಂದು ಜಿ.ಪಲ್ಲವಿ ಹೇಳಿದರು.
ಅಲೆಮಾರಿ ಮಕ್ಕಳ ಬಾಡಿಗೆ ಭಿಕ್ಷೆ
‘ಹೊಸಪೇಟೆಯಲ್ಲಿ ಹತ್ತಾರು ಭಿಕ್ಷಕರಿದ್ದು ಅವರು ಅಲೆಮಾರಿ ಕುಟುಂಬದ ಮಕ್ಕಳನ್ನು ಬಾಡಿಗೆ ಪಡೆದುಕೊಂಡು ಭಿಕ್ಷೆ ಬೇಡುತ್ತಿರುವ ವಿಚಾರ ನನಗೆ ಹೊಸದು. ಇಂತಹ ಪ್ರಕರಣ ಇದ್ದರೆ ನನ್ನ ಗಮನಕ್ಕೆ ತನ್ನಿ ಕ್ರಮ ಜರುಗಿಸುವುದು ನಿಶ್ಚಿತ’ ಎಂದು ಪಲ್ಲವಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT