ಹರಪನಹಳ್ಳಿ (ವಿಜಯನಗರ ಜಿಲ್ಲೆ): ಡೀಸೆಲ್ ತುಂಬಿದ್ದ ಟ್ಯಾಂಕರ್ ಪಲ್ಟಿಯಾಗಿ, ಬೆಂಕಿ ಹೊತ್ತಿಕೊಂಡಿದ್ದರಿಂದ ಒಬ್ಬ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಪಟ್ಟಣಕ್ಕೆ ಸಮೀಪದ ಪ್ರವಾಸಿ ಬೆಂಡಿಗೇರಿ ರಸ್ತೆ ಕಣವಿ ಬಳಿ ಭಾನುವಾರ ನಡೆದಿದೆ.
ಮೋರಿಗೇರಿ ನಾಗರಾಜ್ (33) ಮೃತ ವ್ಯಕ್ತಿ. ಚಂದ್ರು (35) ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆ.ಎ 71 ಸಿ 3250 ಸಂಖ್ಯೆಯ ಲಾರಿ ಹರಪನಹಳ್ಳಿಯತ್ತ ಬರುವಾಗ ಗುಡ್ಡದ ಇಳಿಜಾರಿನ ತಿರುವಿನಲ್ಲಿ ಪಲ್ಟಿಯಾಗಿದೆ. ಡೀಸೆಲ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಅದರ ಹಿಂದೆ ಬೈಕಿನಲ್ಲಿ ಬರುತ್ತಿದ್ದ ನಾಗರಾಜ್ ಅವರಿಗೆ ಬೆಂಕಿ ತಗುಲಿಕೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ ಹಿಂಬದಿ ಸವಾರ ಚಂದ್ರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರಪನಹಳ್ಳಿ ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ತಡಹೊತ್ತಿನ ನಂತರ ಬೆಂಕಿ ನಂದಿಸಿದರು.