ಹೊಸಪೇಟೆ: ಗಣೇಶನ ಮೂರ್ತಿ ವಿಸರ್ಜನೆ ವೇಳೆ ತಡರಾತ್ರಿ ನಿಯಮ ಮೀರಿ ಬಳಸಿದ ಡಿ.ಜೆ.ಯನ್ನು ಪೊಲೀಸರು ಸೀಜ್ ಮಾಡಿದ್ದನ್ನು ವಿರೋಧಿಸಿ ಕೆಲಕಾಲ ನಗರದ ಚಿತ್ರಕೇರಿ ಗಣೇಶ ಮಂಡಳಿಯವರು ಪುಣ್ಯಮೂರ್ತಿ ವೃತ್ತದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದ್ದರಿಂದ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.
ಡಿ.ಜೆ ಬಂದ್ ಮಾಡಿ ವಶಪಡಿಸಿಕೊಂಡಿದ್ದನ್ನು ವಿರೋಧಿಸಿ ಗಣಪನ ಮೂರ್ತಿ ಸಮೇತ ಪಟ್ಟಣ ಠಾಣೆಗೆ ಹೋಗಲು ಮುಂದಾದರು. ಅವರನ್ನು ಪೊಲೀಸರು ಪುಣ್ಯಮೂರ್ತಿ ವೃತ್ತದಲ್ಲಿ ತಡೆದರು.
ಅಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ, ಡಿ.ಜೆ ಬಿಡಬೇಕೆಂದು ಆಗ್ರಹಿಸಿದರು. ಬಳಿಕ ಪೊಲೀಸರ ಮನವೊಲಿಕೆ ನಂತರ ಗಣೇಶನ ಮೂರ್ತಿಯನ್ನು ವಿಸರ್ಜನೆಗೆ ಕೊಂಡೊಯ್ದರು.