‘ಇಲಾಖೆಯಲ್ಲಿ ಸಿಬ್ಬಂದಿ ಬಹಳ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿಬ್ಬಂದಿ ಕೊರತೆಯಿಂದ ವಾರದ ರಜೆ ಕೊಡುವುದು ಅಸಾಧ್ಯವಾಗಿದೆ. ಆದರೆ, ಎಸ್ಪಿ ಡಾ.ಅರುಣ್ ಅವರು ಸಿಬ್ಬಂದಿಗೆ ವಾರದ ರಜೆ ಘೋಷಿಸಿರುವುದು ಶ್ಲಾಘನೀಯ. ನಿವೃತ್ತ ಅಧಿಕಾರಿಗಳಿಗೆ ಸೂಕ್ತ ಕಟ್ಟಡವಿಲ್ಲ. ನಿವೃತ್ತ ನೌಕರರಿಗೆ ಕಟ್ಟಡದ ಜೊತೆಗೆ ಜಿಲ್ಲಾ ಮಟ್ಟದಲ್ಲಿ ಪೊಲೀಸ್ ಕ್ಯಾಂಟೀನ್, ಕಲ್ಯಾಣ ಕೇಂದ್ರ ನಿರ್ಮಿಸಿಕೊಡಬೇಕು’ ಎಂದರು.