ಬೆಳಿಗ್ಗೆ ಕಾರ್ಮೋಡ ಕವಿದಿತ್ತು. ತಂಗಾಳಿ ಬೀಸುತ್ತಿತ್ತು. ಮಧ್ಯಾಹ್ನ ಏಕಾಏಕಿ ಮಳೆ ಆರಂಭಗೊಂಡಿತು. ದಿನವಿಡೀ ಬಿಟ್ಟು ಬಿಟ್ಟು ತುಂತುರು ಮಳೆಯಾಯಿತು. ಮಳೆಗೆ ವಾತಾವರಣ ಮತ್ತಷ್ಟು ತಂಪಾಯಿತು.
ತುಂತುರು ಮಳೆ ಜತೆ ಸಂಜೆ ವೇಳೆ ದಟ್ಟ ಮಂಜು ಆವರಿಸಿಕೊಂಡಿತ್ತು. ಕಳೆದ ಹಲವು ದಿನಗಳಿಂದ ಕಾರ್ಮೋಡ ಇರುತ್ತಿದ್ದು, ಸೂರ್ಯನ ದರ್ಶನ ಅಪರೂಪ ಎಂಬಂತಾಗಿದೆ. ಬಿಸಿಲ ನಗರಿ, ಗಣಿ ನಗರಿ ಈಗ ಮಂಜಿನ ನಗರಿಯಾಗಿದೆ.