<p><strong>ಅರಸೀಕೆರೆ (ವಿಜಯನಗರ ಜಿಲ್ಲೆ):</strong> ವಿಜಯನಗರ-ದಾವಣಗೆರೆ ಜಿಲ್ಲೆಗಳ ಗಡಿ ಭಾಗಗಳ ಬಹುತೇಕ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಪ್ರಯಾಣಿಕರು ಕೈಯಲ್ಲಿ ಜೀವ ಹಿಡಿದು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.</p>.<p>ಅರೆ ಬಸಾಪುರ ಗ್ರಾಮದಿಂದ ದಾವಣಗೆರೆ - ಹರಪನಹಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಆಳವಾದ ಗುಂಡಿಗಳು ಬಿದ್ದಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನ ಕಾಣಿಸುವುದಿಲ್ಲ. ಕೇವಲ ತಲೆ ಮಾತ್ರ ಮೇಲೆ ಕಾಣಿಸುವಂತಿದ್ದು ರಸ್ತೆಯ ಅವ್ಯವಸ್ಥೆಯ ಬಿಂಬಿಸುವಂತಿದೆ.</p>.<p>ಮಳೆಗಾಲದಲ್ಲಿ ಪರಿಸ್ಥಿತಿ ಭಿನ್ನವಾಗಿದ್ದು, ಮಳೆಗಾಲದಲ್ಲಿ ತಗ್ಗು ಪ್ರದೇಶದಲ್ಲಿ ನೀರು ನಿಲ್ಲುತ್ತದೆ. ಇದರಿಂದ ಗುಂಡಿಗಳು ಕಾಣದೇ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗಳಾಗಿರುವ ಉದಾಹರಣೆ ಸಾಕಷ್ಟಿದೆ. ರಸ್ತೆ ಪಕ್ಕದಲ್ಲಿ ಕಿರು ಕಾಲುವೆಯೂ ಹಾದು ಹೋಗಿರುವುದು ಪ್ರಾಣ ಸಂಚಕಾರ ತಂದೊಡ್ಡುವ ಆತಂಕವೂ ಇದೆ.</p>.<p>ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಗ್ರಾಮ ಒಳಪಟ್ಟಿರುವುದರಿಂದ ರೈತರು ಮಾರುಕಟ್ಟೆಗೆ ಈ ದಾರಿಯನ್ನೇ ಅವಲಂಬಿಸಿದ್ದಾರೆ. ಆದರೆ, ವಾಹನ ಸರಾಗವಾಗಿ ಸಾಗದಿರುವುದರಿಂದ ಹಿರೇಮೆಗಳಗರೆಗೆ ಮೂಲಕ ಸಾಗುವ ಅನಿವಾರ್ಯತೆ ಇದೆ.</p>.<p>ಜಗಳೂರು ವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುವ ಉಚ್ಚಂಗಿದುರ್ಗ ಮಾರ್ಗ ಮೂಲಕ ದಾವಣಗೆರೆ ಮಾರ್ಗದ ರಸ್ತೆಯ ಸ್ಥಿತಿ ಹೇಳತೀರದು. ಸಾರ್ವಜನಿಕರು ಸಂಚರಿಸುವ ರಸ್ತೆ ಅಧೋಗತಿಗೆ ತಲುಪಿದೆ.</p>.<p>ಬೇವಿನಹಳ್ಳಿ - ನಾಗತಿಕಟ್ಟೆ - ದಾವಣಗೆರೆ ರಸ್ತೆ ಕುರಿಗಳ ಹಿಂಡು ಹೋಗಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದಾಗ ತಗ್ಗು ಕೆಸರು ಗದ್ದೆಯಂತಾಗಿ ಯಾರೂ ಓಡಾಡಲು ಸಾಧ್ಯವಾಗುವುದಿಲ್ಲ. ಕುರಿಗಳು ರಸ್ತೆ ಬಿಟ್ಟು ಬದಿಯಲ್ಲಿ ಸಾಗುತ್ತವೆ. ಬೈಕ್ ಸವಾರರು ಬದಿಯಲ್ಲಿ ಸಾಗಿ ಬಿದ್ದು ಅನಾಹುತಗಳು ಸಹ ನಡೆದಿವೆ.</p>.<p>ಗೌಳೀರಹಟ್ಟಿ - ಪೋತಲಕಟ್ಟೆ - ದಾವಣಗೆರೆ ಮಾರ್ಗದ ರಸ್ತೆ ಡಾಂಬರೀಕರಣಗೊಂಡು ಮೂರು ದಶಕಗಳ ಮೇಲಾಗಿದೆ. ಕನಿಷ್ಠ ದುರಸ್ತಿಗೊಂಡಿಲ್ಲ. ಬಸ್, ಲಾರಿ, ಟ್ರ್ಯಾಕ್ಟರ್ ಜಲ್ಲಿ, ಕಲ್ಲು ಸಾಗಾಣಿಕೆ ನಡೆಯುವುದರಿಂದ ರಸ್ತೆಗಳು ಗುಂಡಿ ಬಿದ್ದು ಮೃತ್ಯುಕೂಪವಾಗಿ ಮಾರ್ಪಟ್ಟಿವೆ.</p>.<p>ಗುಂಡಿಗಳಿದ್ದ ರಸ್ತೆಯಲ್ಲಿ ಬಸ್ ಸಾಗುತ್ತಿದ್ದರೆ, ಒಳಗಡೆ ಕುಳಿತ ಪ್ರಯಾಣಿಕರಿಗೆ ತೊಟ್ಟಿಲು ತೂಗುವ ಅನುಭವಾಗುತ್ತದೆ. ರಸ್ತೆಯಲ್ಲಿ ಸಂಚರಿಸುವ ಚಾಲಕರು ಹೈರಾಣರಾಗಿದ್ದಾರೆ. ದಾರಿಯಲ್ಲಿ ವಾಹನ ಕೆಟ್ಟು ನಿಂತು ಸಮಸ್ಯೆ ಅನುಭವಿಸುತ್ತಿದ್ದಾರೆ.</p>.<p>ಅರಸೀಕೆರೆ - ಉಚ್ಚಂಗಿದುರ್ಗ ಮಾರ್ಗವಾಗಿ ಹಾದು ಹೋಗಿರುವ ಗದಗ-ಮಂಡ್ಯ 47 ರಾಜ್ಯ ಹೆದ್ದಾರಿ ವಿಸ್ತರಣೆ ಮಾಡಲು ಒತ್ತಾಯ ಕೇಳಿ ಬಂದಿದೆ. ಈಗಾಗಲೇ ಅರಸೀಕೆರೆ ಗ್ರಾಮದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಅಪೂರ್ಣಗೊಂಡಿದೆ. ಉಚ್ಚಂಗಿದುರ್ಗ ಗ್ರಾಮದಲ್ಲಿ ವಿಸ್ತರಣೆ ನಿರೀಕ್ಷೆಯಲ್ಲಿ ಜನರಿದ್ದಾರೆ. ಕಾಮಗಾರಿ ಬಳಿಕ ಮನೆ, ಅಂಗಡಿ ಮುಂಗಟ್ಟುಗಳ ನಿರ್ಮಾಣದ ನಿರ್ಧಾರ ಕೈಗೊಂಡಿದ್ದಾರೆ.</p>.<div><blockquote>ರಸ್ತೆ ಸಮೀಕ್ಷೆ ನಡೆಸಿದ ಬಳಿಕ ಕ್ರಿಯಾಯೋಜನೆ ರೂಪಿಸಿ ಅಭಿವೃದ್ಧಿ ಪಡಿಸಲಾಗುವುದು</blockquote><span class="attribution"> ಕುಬೇಂದ್ರ ನಾಯ್ಕ ಎಇಇ</span></div>.<div><blockquote>ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನ ಬಳಸಿ ಕ್ಷೇತ್ರದ ಅರಸೀಕೆರೆ ಬ್ಲಾಕ್ನ ಸಮಗ್ರ ಅಭಿವೃದ್ಧಿ ಮಾಡಲಾಗುವುದು</blockquote><span class="attribution">ಬಿ.ದೇವೇಂದ್ರಪ್ಪ ಶಾಸಕ ಜಗಳೂರು ಕ್ಷೇತ್ರ</span></div>.<h2>ಕ್ಷೇತ್ರ ಬದಲಾವಣೆ; ಅಭಿವೃದ್ಧಿಗೆ ಹಿನ್ನಡೆ </h2><p>ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಬ್ಲಾಕ್ಅನ್ನು ಬೇರ್ಪಡಿಸಿ ಜಗಳೂರು ವಿಧಾನಸಭಾ ಕ್ಷೇತ್ರಕ್ಕೆ ಒಳ ಪಟ್ಟಿರುವುದು ಇಲ್ಲಿನ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ನಾಗತಿಕಟ್ಟೆ ಪೋತಲಕಟ್ಟೆ ಹರಪನಹಳ್ಳಿ ಕ್ಷೇತ್ರಕ್ಕೆ ಒಳಪಟ್ಟಿದ್ದು ರಸ್ತೆ ಅಭಿವೃದ್ಧಿ ಕಂಡಿದೆ. ಆದರೆ ಈ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಬೇವಿನಹಳ್ಳಿ ಗೌಳಿರಹಟ್ಟಿ ಜಗಳೂರು ಕ್ಷೇತ್ರಕ್ಕೆ ಒಳಪಟ್ಟಿದೆ. ಈ ಭಾಗದಲ್ಲಿ ರಸ್ತೆ ಅಭಿವೃದ್ಧಿ ಕಂಡಿಲ್ಲ. ‘ಕೆಕೆಆರ್ಡಿಬಿ ಅನುದಾನ ತಾರತಮ್ಯದಿಂದ ಕೇವಲ ₹11 ಕೋಟಿ ಬಿಡುಗಡೆ ಆಗಿದೆ. ಈ ಕುರಿತು ಮಂಡಳಿ ಗಮನಕ್ಕೆ ತಂದಿದ್ದು ಹೆಚ್ಚಿನ ಅನುದಾನದ ನಿರೀಕ್ಷೆಯಿದೆ. ಬಳಿಕ ಶಾಲಾ ಹಾಗೂ ರಸ್ತೆ ಅಭಿವೃದ್ಧಿಗೆ ಒತ್ತು ನೀಡಲಾಗುವುದು' ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದ್ದಾರೆ.</p>.<h2><strong>ಜನಾಭಿಪ್ರಾಯ</strong></h2><h2></h2><p>ಅರಸೀಕೆರೆ ಭಾಗದ ಅಪೂರ್ಣ ಕಾಮಗಾರಿ ಪೂರ್ಣಗೊಳಿಸಿ, ರಾಜ್ಯ ಹೆದ್ದಾರಿಯನ್ನು ಅಭಿವೃದ್ಧಿ ಪಡಿಸಬೇಕು <strong>–ಪ್ರಶಾಂತ್ ಪಾಟೀಲ್, ಅರಸೀಕೆರೆ</strong></p>.<p>ಅಧಿಕಾರಿಗಳು ಕಚೇರಿಯಿಂದ ಹೊರಬಂದು ಕಾರ್ಯವ್ಯಾಪ್ತಿಯ ಗ್ರಾಮಗಳನ್ನು ವೀಕ್ಷಣೆ ಮಾಡಿ ಅಭಿವೃದ್ಧಿಗೆ ಸ್ಪಂದಿಸಬೇಕು</p><p> <strong>–ಗುಡಿಹಳ್ಳಿ ಹಾಲೇಶ್, ಪ್ರಗತಿಪರ ಹೋರಾಟಗಾರ</strong></p>.<p>ರಸ್ತೆ ಸಮಸ್ಯೆಗೆ ಗ್ರಾಮಕ್ಕೆ ಅಂಬುಲೆನ್ಸ್ ಬರದಾಗಿದೆ. ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಕ್ರಮ ಕೈಗೊಳ್ಳಬೇಕು</p><p> <strong>–ಬಸವರಾಜ, ಹಿರೇಮೆಗಳಗೇರೆ</strong></p>.<p>ಉಚ್ಚಂಗಿದುರ್ಗಕ್ಕೆ ಭಕ್ತರ ದಂಡು ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಆಗುತ್ತದೆ. ಉಚ್ಚಂಗಿದುರ್ಗ ರಸ್ತೆ ವಿಸ್ತರಣೆಗೆ ಆದ್ಯತೆ ನೀಡಬೇಕಿದೆ</p><p><strong>–ಕೆಂಚಪ್ಪ ಕೆ. ಉಚ್ಚಂಗಿದುರ್ಗ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಸೀಕೆರೆ (ವಿಜಯನಗರ ಜಿಲ್ಲೆ):</strong> ವಿಜಯನಗರ-ದಾವಣಗೆರೆ ಜಿಲ್ಲೆಗಳ ಗಡಿ ಭಾಗಗಳ ಬಹುತೇಕ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಪ್ರಯಾಣಿಕರು ಕೈಯಲ್ಲಿ ಜೀವ ಹಿಡಿದು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.</p>.<p>ಅರೆ ಬಸಾಪುರ ಗ್ರಾಮದಿಂದ ದಾವಣಗೆರೆ - ಹರಪನಹಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಆಳವಾದ ಗುಂಡಿಗಳು ಬಿದ್ದಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ವಾಹನ ಕಾಣಿಸುವುದಿಲ್ಲ. ಕೇವಲ ತಲೆ ಮಾತ್ರ ಮೇಲೆ ಕಾಣಿಸುವಂತಿದ್ದು ರಸ್ತೆಯ ಅವ್ಯವಸ್ಥೆಯ ಬಿಂಬಿಸುವಂತಿದೆ.</p>.<p>ಮಳೆಗಾಲದಲ್ಲಿ ಪರಿಸ್ಥಿತಿ ಭಿನ್ನವಾಗಿದ್ದು, ಮಳೆಗಾಲದಲ್ಲಿ ತಗ್ಗು ಪ್ರದೇಶದಲ್ಲಿ ನೀರು ನಿಲ್ಲುತ್ತದೆ. ಇದರಿಂದ ಗುಂಡಿಗಳು ಕಾಣದೇ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗಳಾಗಿರುವ ಉದಾಹರಣೆ ಸಾಕಷ್ಟಿದೆ. ರಸ್ತೆ ಪಕ್ಕದಲ್ಲಿ ಕಿರು ಕಾಲುವೆಯೂ ಹಾದು ಹೋಗಿರುವುದು ಪ್ರಾಣ ಸಂಚಕಾರ ತಂದೊಡ್ಡುವ ಆತಂಕವೂ ಇದೆ.</p>.<p>ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಗ್ರಾಮ ಒಳಪಟ್ಟಿರುವುದರಿಂದ ರೈತರು ಮಾರುಕಟ್ಟೆಗೆ ಈ ದಾರಿಯನ್ನೇ ಅವಲಂಬಿಸಿದ್ದಾರೆ. ಆದರೆ, ವಾಹನ ಸರಾಗವಾಗಿ ಸಾಗದಿರುವುದರಿಂದ ಹಿರೇಮೆಗಳಗರೆಗೆ ಮೂಲಕ ಸಾಗುವ ಅನಿವಾರ್ಯತೆ ಇದೆ.</p>.<p>ಜಗಳೂರು ವಿಧಾನ ಸಭಾ ಕ್ಷೇತ್ರಕ್ಕೆ ಒಳಪಡುವ ಉಚ್ಚಂಗಿದುರ್ಗ ಮಾರ್ಗ ಮೂಲಕ ದಾವಣಗೆರೆ ಮಾರ್ಗದ ರಸ್ತೆಯ ಸ್ಥಿತಿ ಹೇಳತೀರದು. ಸಾರ್ವಜನಿಕರು ಸಂಚರಿಸುವ ರಸ್ತೆ ಅಧೋಗತಿಗೆ ತಲುಪಿದೆ.</p>.<p>ಬೇವಿನಹಳ್ಳಿ - ನಾಗತಿಕಟ್ಟೆ - ದಾವಣಗೆರೆ ರಸ್ತೆ ಕುರಿಗಳ ಹಿಂಡು ಹೋಗಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದಾಗ ತಗ್ಗು ಕೆಸರು ಗದ್ದೆಯಂತಾಗಿ ಯಾರೂ ಓಡಾಡಲು ಸಾಧ್ಯವಾಗುವುದಿಲ್ಲ. ಕುರಿಗಳು ರಸ್ತೆ ಬಿಟ್ಟು ಬದಿಯಲ್ಲಿ ಸಾಗುತ್ತವೆ. ಬೈಕ್ ಸವಾರರು ಬದಿಯಲ್ಲಿ ಸಾಗಿ ಬಿದ್ದು ಅನಾಹುತಗಳು ಸಹ ನಡೆದಿವೆ.</p>.<p>ಗೌಳೀರಹಟ್ಟಿ - ಪೋತಲಕಟ್ಟೆ - ದಾವಣಗೆರೆ ಮಾರ್ಗದ ರಸ್ತೆ ಡಾಂಬರೀಕರಣಗೊಂಡು ಮೂರು ದಶಕಗಳ ಮೇಲಾಗಿದೆ. ಕನಿಷ್ಠ ದುರಸ್ತಿಗೊಂಡಿಲ್ಲ. ಬಸ್, ಲಾರಿ, ಟ್ರ್ಯಾಕ್ಟರ್ ಜಲ್ಲಿ, ಕಲ್ಲು ಸಾಗಾಣಿಕೆ ನಡೆಯುವುದರಿಂದ ರಸ್ತೆಗಳು ಗುಂಡಿ ಬಿದ್ದು ಮೃತ್ಯುಕೂಪವಾಗಿ ಮಾರ್ಪಟ್ಟಿವೆ.</p>.<p>ಗುಂಡಿಗಳಿದ್ದ ರಸ್ತೆಯಲ್ಲಿ ಬಸ್ ಸಾಗುತ್ತಿದ್ದರೆ, ಒಳಗಡೆ ಕುಳಿತ ಪ್ರಯಾಣಿಕರಿಗೆ ತೊಟ್ಟಿಲು ತೂಗುವ ಅನುಭವಾಗುತ್ತದೆ. ರಸ್ತೆಯಲ್ಲಿ ಸಂಚರಿಸುವ ಚಾಲಕರು ಹೈರಾಣರಾಗಿದ್ದಾರೆ. ದಾರಿಯಲ್ಲಿ ವಾಹನ ಕೆಟ್ಟು ನಿಂತು ಸಮಸ್ಯೆ ಅನುಭವಿಸುತ್ತಿದ್ದಾರೆ.</p>.<p>ಅರಸೀಕೆರೆ - ಉಚ್ಚಂಗಿದುರ್ಗ ಮಾರ್ಗವಾಗಿ ಹಾದು ಹೋಗಿರುವ ಗದಗ-ಮಂಡ್ಯ 47 ರಾಜ್ಯ ಹೆದ್ದಾರಿ ವಿಸ್ತರಣೆ ಮಾಡಲು ಒತ್ತಾಯ ಕೇಳಿ ಬಂದಿದೆ. ಈಗಾಗಲೇ ಅರಸೀಕೆರೆ ಗ್ರಾಮದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಅಪೂರ್ಣಗೊಂಡಿದೆ. ಉಚ್ಚಂಗಿದುರ್ಗ ಗ್ರಾಮದಲ್ಲಿ ವಿಸ್ತರಣೆ ನಿರೀಕ್ಷೆಯಲ್ಲಿ ಜನರಿದ್ದಾರೆ. ಕಾಮಗಾರಿ ಬಳಿಕ ಮನೆ, ಅಂಗಡಿ ಮುಂಗಟ್ಟುಗಳ ನಿರ್ಮಾಣದ ನಿರ್ಧಾರ ಕೈಗೊಂಡಿದ್ದಾರೆ.</p>.<div><blockquote>ರಸ್ತೆ ಸಮೀಕ್ಷೆ ನಡೆಸಿದ ಬಳಿಕ ಕ್ರಿಯಾಯೋಜನೆ ರೂಪಿಸಿ ಅಭಿವೃದ್ಧಿ ಪಡಿಸಲಾಗುವುದು</blockquote><span class="attribution"> ಕುಬೇಂದ್ರ ನಾಯ್ಕ ಎಇಇ</span></div>.<div><blockquote>ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನ ಬಳಸಿ ಕ್ಷೇತ್ರದ ಅರಸೀಕೆರೆ ಬ್ಲಾಕ್ನ ಸಮಗ್ರ ಅಭಿವೃದ್ಧಿ ಮಾಡಲಾಗುವುದು</blockquote><span class="attribution">ಬಿ.ದೇವೇಂದ್ರಪ್ಪ ಶಾಸಕ ಜಗಳೂರು ಕ್ಷೇತ್ರ</span></div>.<h2>ಕ್ಷೇತ್ರ ಬದಲಾವಣೆ; ಅಭಿವೃದ್ಧಿಗೆ ಹಿನ್ನಡೆ </h2><p>ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆ ಬ್ಲಾಕ್ಅನ್ನು ಬೇರ್ಪಡಿಸಿ ಜಗಳೂರು ವಿಧಾನಸಭಾ ಕ್ಷೇತ್ರಕ್ಕೆ ಒಳ ಪಟ್ಟಿರುವುದು ಇಲ್ಲಿನ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ. ನಾಗತಿಕಟ್ಟೆ ಪೋತಲಕಟ್ಟೆ ಹರಪನಹಳ್ಳಿ ಕ್ಷೇತ್ರಕ್ಕೆ ಒಳಪಟ್ಟಿದ್ದು ರಸ್ತೆ ಅಭಿವೃದ್ಧಿ ಕಂಡಿದೆ. ಆದರೆ ಈ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಬೇವಿನಹಳ್ಳಿ ಗೌಳಿರಹಟ್ಟಿ ಜಗಳೂರು ಕ್ಷೇತ್ರಕ್ಕೆ ಒಳಪಟ್ಟಿದೆ. ಈ ಭಾಗದಲ್ಲಿ ರಸ್ತೆ ಅಭಿವೃದ್ಧಿ ಕಂಡಿಲ್ಲ. ‘ಕೆಕೆಆರ್ಡಿಬಿ ಅನುದಾನ ತಾರತಮ್ಯದಿಂದ ಕೇವಲ ₹11 ಕೋಟಿ ಬಿಡುಗಡೆ ಆಗಿದೆ. ಈ ಕುರಿತು ಮಂಡಳಿ ಗಮನಕ್ಕೆ ತಂದಿದ್ದು ಹೆಚ್ಚಿನ ಅನುದಾನದ ನಿರೀಕ್ಷೆಯಿದೆ. ಬಳಿಕ ಶಾಲಾ ಹಾಗೂ ರಸ್ತೆ ಅಭಿವೃದ್ಧಿಗೆ ಒತ್ತು ನೀಡಲಾಗುವುದು' ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದ್ದಾರೆ.</p>.<h2><strong>ಜನಾಭಿಪ್ರಾಯ</strong></h2><h2></h2><p>ಅರಸೀಕೆರೆ ಭಾಗದ ಅಪೂರ್ಣ ಕಾಮಗಾರಿ ಪೂರ್ಣಗೊಳಿಸಿ, ರಾಜ್ಯ ಹೆದ್ದಾರಿಯನ್ನು ಅಭಿವೃದ್ಧಿ ಪಡಿಸಬೇಕು <strong>–ಪ್ರಶಾಂತ್ ಪಾಟೀಲ್, ಅರಸೀಕೆರೆ</strong></p>.<p>ಅಧಿಕಾರಿಗಳು ಕಚೇರಿಯಿಂದ ಹೊರಬಂದು ಕಾರ್ಯವ್ಯಾಪ್ತಿಯ ಗ್ರಾಮಗಳನ್ನು ವೀಕ್ಷಣೆ ಮಾಡಿ ಅಭಿವೃದ್ಧಿಗೆ ಸ್ಪಂದಿಸಬೇಕು</p><p> <strong>–ಗುಡಿಹಳ್ಳಿ ಹಾಲೇಶ್, ಪ್ರಗತಿಪರ ಹೋರಾಟಗಾರ</strong></p>.<p>ರಸ್ತೆ ಸಮಸ್ಯೆಗೆ ಗ್ರಾಮಕ್ಕೆ ಅಂಬುಲೆನ್ಸ್ ಬರದಾಗಿದೆ. ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಕ್ರಮ ಕೈಗೊಳ್ಳಬೇಕು</p><p> <strong>–ಬಸವರಾಜ, ಹಿರೇಮೆಗಳಗೇರೆ</strong></p>.<p>ಉಚ್ಚಂಗಿದುರ್ಗಕ್ಕೆ ಭಕ್ತರ ದಂಡು ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಆಗುತ್ತದೆ. ಉಚ್ಚಂಗಿದುರ್ಗ ರಸ್ತೆ ವಿಸ್ತರಣೆಗೆ ಆದ್ಯತೆ ನೀಡಬೇಕಿದೆ</p><p><strong>–ಕೆಂಚಪ್ಪ ಕೆ. ಉಚ್ಚಂಗಿದುರ್ಗ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>