ಉದ್ಯಮಿ ಪಂತರ್ ಜಯಂತ್ ಮಾತನಾಡಿ, ‘ಶಂಕರಾಚಾರ್ಯರ ಅದ್ವೈತ ಸಿದ್ಧಾಂತ ತತ್ವದಡಿ ಅವರ ಸಂಪ್ರದಾಯಗಳನ್ನು ಸರ್ವರೂ ಬೆಳೆಸಿಕೊಳ್ಳುವ ಸಲುವಾಗಿ ಶಂಕರ ಜ್ಞಾನ ಮಂದಿರವನ್ನು 2004ರಲ್ಲಿ ನಿರ್ಮಿಸಲಾಯಿತು. ಪ್ರತಿವರ್ಷ ಶಂಕರಾಚಾರ್ಯರ ಜಯಂತಿಯನ್ನು ಅಚರಿಸಿಕೊಂಡು ಬರಲಾಗುತ್ತಿದ್ದು, ಕೋವಿಡ್ನಿಂದ ಈ ಬಾರಿ ಸರಳವಾಗಿ ಆಚರಿಸಿ, ಬಡ 108 ಮಹಿಳೆಯರಿಗೆ ಉಚಿತವಾಗಿ ಸೀರೆ ವಿತರಿಸಲಾಗಿದೆ’ ಎಂದು ತಿಳಿಸಿದರು.