ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಾಯಕ ಶೆಟ್ಟರ್, ಮುಖಂಡರಾದ ವೆಂಕಟರಾವ್ ಘೋರ್ಪಡೆ, ರಾಜಶೇಖರ್ ಹಿಟ್ನಾಳ್, ಕುರಿ ಶಿವಮೂರ್ತಿ, ಎಲ್.ಸಿದ್ದನಗೌಡ, ಸೈಯ್ಯದ್ ಮಹಮ್ಮದ್, ಕೆ.ಎಲ್.ಎಸ್.ಸ್ವಾಮಿ, ಮಹಮ್ಮದ್ ಇಮಾಮ್ ನಿಯಾಜಿ ಕೊನೆಯ ದಿನ ಅರ್ಜಿ ಸಲ್ಲಿಸಿದವರಲ್ಲಿ ಪ್ರಮುಖರು. ಮಾಜಿಶಾಸಕ ಎಚ್.ಆರ್. ಗವಿಯಪ್ಪ, ಸಿರಾಜ್ ಶೇಕ್ ಕೂಡ ಅರ್ಜಿ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ. ಮುಖಂಡ ದೀಪಕ್ ಕುಮಾರ್ ಸಿಂಗ್ ಮಂಗಳವಾರ (ನ.15) ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಅವರನ್ನು ಸಂಪರ್ಕಿಸಿದಾಗ ಮಾಹಿತಿಗೆ ಲಭ್ಯರಾಗಲಿಲ್ಲ.