<p><strong>ವಿಜಯನಗರ(ಹೊಸಪೇಟೆ):</strong> ‘ಭಾಷಾಂತರ ಎಂಬುದು ಒಂದು ಕೌಶಲ, ಕಲೆ. ಅನುಭವವಾದಂತೆ ಆ ಕೌಶಲ ಹೆಚ್ಚಾಗುತ್ತದೆ’ ಎಂದು ಸಾಹಿತಿ ಗುರುಮೂರ್ತಿ ಪೆಂಡಕೂರ್ ತಿಳಿಸಿದರು.</p>.<p>ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಕೇಂದ್ರ, ಆಂತರಿಕ ಗುಣಮಟ್ಟ ಭರವಸೆ ಕೋಶದಿಂದ ಶುಕ್ರವಾರ ಏರ್ಪಡಿಸಿದ್ದ ಭಾಷಾಂತರ ತರಬೇತಿ ಕಮ್ಮಟ ಉದ್ಘಾಟಿಸಿ ಮಾತನಾಡಿದರು.</p>.<p>‘ಕನ್ನಡ ಕಾವ್ಯಗಳು ಸಂಸ್ಕೃತ ಕಾವ್ಯಗಳ ಭಾಷಾಂತರದ ಮೂಲಕವೇ ರಚನೆಯಾಗಿರುವುದನ್ನು ಕಾಣಬಹುದು. ಭಾಷಾಂತರ ಚಟುವಟಿಕೆ ಎನ್ನುವುದು ಎಲ್ಲ ಕಾಲಕ್ಕೂ ಅನ್ವಯವಾಗುವ ಪ್ರಕ್ರಿಯೆಯಾಗಿದೆ’ ಎಂದರು.</p>.<p>‘ಪ್ರತಿ 20 ಕಿ.ಮೀ ಅಂತರದಲ್ಲಿ ಭಾಷೆ ಬಳಕೆಯಲ್ಲಿ ಬದಲಾವಣೆಗಳು ಕಾಣಿಸುತ್ತದೆ. ಈ ವೈವಿಧ್ಯದ ಕಾರಣಕ್ಕಾಗಿ ಭಾಷಾಂತರವನ್ನು ಸಮಾನಾಂತರ ಪದಗಳ ಮೂಲಕ ಮಾಡಬಹುದಾಗಿದೆ. ಸಮಾನಾಂತರ ಪರಿಭಾಷೆಗಳು ಆಯಾ ಪ್ರದೇಶಗಳ ಹಿನ್ನೆಲೆಯಲ್ಲಿ ವಿಭಿನ್ನಾರ್ಥಗಳನ್ನು ಧ್ವನಿಸುತ್ತವೆ ಎಂಬ ಅರಿವು ಭಾಷಾಂತರಕಾರರಿಗೆ ಇರಬೇಕು’ ಎಂದು ಹೇಳಿದರು.</p>.<p>ಕುಲಸಚಿವ ಸುಬ್ಬಣ ರೈ, ‘ಪ್ರಸ್ತುತ ಕಮ್ಮಟದಿಂದ ವಿದ್ಯಾರ್ಥಿಗಳು ಭಾಷಾಂತರದ ಬಗೆಗಿನ ಪ್ರಾಥಮಿಕ ಜ್ಞಾನ ಪಡೆದು ಮುಂದೆ ಅದನ್ನು ವಿಸ್ತರಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<p>ಎ. ಮಲ್ಲಿಕಾರ್ಜುನಪ್ಪ, ಡೀನ್ರಾದ ವೀರೇಶ್ ಬಡಿಗೇರ, ಕೆ. ರವೀಂದ್ರನಾಥ, ನಿರ್ದೇಶಕ ಮೋಹನ ಕುಂಟಾರ್, ಐಕ್ಯುಎಸಿ ಸಹಾಯಕ ನಿರ್ದೇಶಕ ಡಿ. ಪ್ರಭಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯನಗರ(ಹೊಸಪೇಟೆ):</strong> ‘ಭಾಷಾಂತರ ಎಂಬುದು ಒಂದು ಕೌಶಲ, ಕಲೆ. ಅನುಭವವಾದಂತೆ ಆ ಕೌಶಲ ಹೆಚ್ಚಾಗುತ್ತದೆ’ ಎಂದು ಸಾಹಿತಿ ಗುರುಮೂರ್ತಿ ಪೆಂಡಕೂರ್ ತಿಳಿಸಿದರು.</p>.<p>ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಕೇಂದ್ರ, ಆಂತರಿಕ ಗುಣಮಟ್ಟ ಭರವಸೆ ಕೋಶದಿಂದ ಶುಕ್ರವಾರ ಏರ್ಪಡಿಸಿದ್ದ ಭಾಷಾಂತರ ತರಬೇತಿ ಕಮ್ಮಟ ಉದ್ಘಾಟಿಸಿ ಮಾತನಾಡಿದರು.</p>.<p>‘ಕನ್ನಡ ಕಾವ್ಯಗಳು ಸಂಸ್ಕೃತ ಕಾವ್ಯಗಳ ಭಾಷಾಂತರದ ಮೂಲಕವೇ ರಚನೆಯಾಗಿರುವುದನ್ನು ಕಾಣಬಹುದು. ಭಾಷಾಂತರ ಚಟುವಟಿಕೆ ಎನ್ನುವುದು ಎಲ್ಲ ಕಾಲಕ್ಕೂ ಅನ್ವಯವಾಗುವ ಪ್ರಕ್ರಿಯೆಯಾಗಿದೆ’ ಎಂದರು.</p>.<p>‘ಪ್ರತಿ 20 ಕಿ.ಮೀ ಅಂತರದಲ್ಲಿ ಭಾಷೆ ಬಳಕೆಯಲ್ಲಿ ಬದಲಾವಣೆಗಳು ಕಾಣಿಸುತ್ತದೆ. ಈ ವೈವಿಧ್ಯದ ಕಾರಣಕ್ಕಾಗಿ ಭಾಷಾಂತರವನ್ನು ಸಮಾನಾಂತರ ಪದಗಳ ಮೂಲಕ ಮಾಡಬಹುದಾಗಿದೆ. ಸಮಾನಾಂತರ ಪರಿಭಾಷೆಗಳು ಆಯಾ ಪ್ರದೇಶಗಳ ಹಿನ್ನೆಲೆಯಲ್ಲಿ ವಿಭಿನ್ನಾರ್ಥಗಳನ್ನು ಧ್ವನಿಸುತ್ತವೆ ಎಂಬ ಅರಿವು ಭಾಷಾಂತರಕಾರರಿಗೆ ಇರಬೇಕು’ ಎಂದು ಹೇಳಿದರು.</p>.<p>ಕುಲಸಚಿವ ಸುಬ್ಬಣ ರೈ, ‘ಪ್ರಸ್ತುತ ಕಮ್ಮಟದಿಂದ ವಿದ್ಯಾರ್ಥಿಗಳು ಭಾಷಾಂತರದ ಬಗೆಗಿನ ಪ್ರಾಥಮಿಕ ಜ್ಞಾನ ಪಡೆದು ಮುಂದೆ ಅದನ್ನು ವಿಸ್ತರಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<p>ಎ. ಮಲ್ಲಿಕಾರ್ಜುನಪ್ಪ, ಡೀನ್ರಾದ ವೀರೇಶ್ ಬಡಿಗೇರ, ಕೆ. ರವೀಂದ್ರನಾಥ, ನಿರ್ದೇಶಕ ಮೋಹನ ಕುಂಟಾರ್, ಐಕ್ಯುಎಸಿ ಸಹಾಯಕ ನಿರ್ದೇಶಕ ಡಿ. ಪ್ರಭಾ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>