ಸಂತರು, ಮಹಾಂತರು, ದಾರ್ಶನಿಕರು ಇದನ್ನು 'ನೆಚ್ಚಿ ಕೆಡಬೇಡ' ಎಂದು ಅರಿತು ಮಹಾ ಜ್ಞಾನಿಗಳಾಗಿರುವುದನ್ನು ಕಾಣುತ್ತೇವೆ. ಬುದ್ಧ, ಮಹಾವೀರ, ಯೇಸು, ಪೈಗಂಬರ, ಬಸವಾದಿ ಶಿವಶರಣರು ತಮ್ಮ ನುಡಿ ತೋರಣಗಳ ಮೂಲಕ ಇದು ಯಾವುದು ನಿನ್ನದಲ್ಲ ಎಲ್ಲದೂ ಭಗವಂತನದು, ನೀನು ಈ ಭೂಮಿಗೆ ಅತಿಥಿ ಎಂದು ಸಾರಿದ್ದಾರೆ. ಇದನ್ನರಿತು ನಾವು ನಡೆಯದಿದ್ದರೆ ಕಷ್ಟಗಳ ಸರಮಾಲೆ ನಮ್ಮ ಕೊರಳಿಗೆ ನಿಶ್ಚಿತ.