ಕಾನಹೊಸಹಳ್ಳಿ (ವಿಜಯನಗರ ಜಿಲ್ಲೆ): ಸಮೀಪದ ನಿಂಬಳಗೇರೆಯ ಕಣವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಅಪಾರ ಪ್ರಮಾಣದ ಮೇವು ಭಸ್ಮವಾಗಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ಗ್ರಾಮದ ತೋಟದ ಬಸವರಾಜ ಎಂಬುವವರಿಗೆ ಸೇರಿದ ಕಣಕ್ಕೆ ಬೆಂಕಿ ತಗುಲಿದ್ದು, 2 ಲೋಡ್ ಶೇಂಗಾ ಹುಲ್ಲು, 1 ಲೋಡ್ ರಾಗಿ ಹುಲ್ಲು, 4 ಲೋಡ್ ಮೆಕ್ಕೆಜೋಳ ಸೊಪ್ಪೆಯ ಬಣವೆಗಳು ಬೆಂಕಿಗೆ ಅಹುತಿಯಾಗಿವೆ.
ಬೆಂಕಿ ಹೊತ್ತಿದ್ದ ಕೂಡಲೇ ಗ್ರಾಮಸ್ಥರು ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಆದರೆ, ನಿಯಂತ್ರಣಕ್ಕೆ ಬರಲಿಲ್ಲ. ಅನಂತರ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಗ್ರಾಮಸ್ಥರ ನೆರವಿನಿಂದ ಬೆಂಕಿ ನಂದಿಸಿದರು