ಈ ಪ್ರಕರಣದ ಕೆಲವೇ ದಿನಗಳ ಮೊದಲು ಫೆ. 1ರಂದು ಜಿಲ್ಲೆಯ ದಾವತಪುರದ ರೈತ ಬಂಡು ಭಾಂಗೆ ಎಂಬುವವರು ಈರುಳ್ಳಿ ವ್ಯಾಪಾರಿ ಎಸ್. ಎನ್. ಜಾವಳೆ ಅವರಿಗೆ 825 ಕೆ.ಜಿ ಈರುಳ್ಳಿ ಮಾರಾಟ ಮಾಡಿದ್ದಾರೆ. ವ್ಯಾಪಾರಿ ಪ್ರತಿ ಕ್ವಿಂಟಲ್ ಗೆ ₹100ರಂತೆ ಒಟ್ಟು ₹ 825 ದರ ನೀಡಿ ಕಳುಹಿಸಿದ್ದಾರೆ. ಅದರಲ್ಲಿ ಹಮಾಲಿ ಕೂಲಿ ₹ 65.18, ತೂಕದ ಖರ್ಚು ₹ 38.78, ಇತರ ಹಮಾಲಿ ₹25.50, ವಾಹನದ ಬಾಡಿಗೆ ₹697 ಸೇರಿದಂತೆ ಒಟ್ಟು ₹826 ನೀಡಿದ್ದಾರೆ. ಅಲ್ಲದೇ, ರೈತ ಕೈಯಿಂದ ವ್ಯಾಪಾರಿಗೆ ₹1 ನೀಡಿ ಬರಿಗೈಲಿ ಮನೆಗೆ ಹಿಂದಿರುಗಿದ್ದಾರೆ. ಈ ಬಿಲ್ಲಿನ ಮೊತ್ತದ ಪಾವತಿ ಫೇಸ್ಬುಕ್, ವಾಟ್ಸ್ ಆ್ಯಪ್ಗಳಲ್ಲಿ ಜೋರಾಗಿ ಹರಿದಾಡುತ್ತಿದೆ.