‘ಸಾಕ್ಷರ ಭಾರತ್ ಯೋಜನೆಯ ಮೊದಲ ಹಂತಕ್ಕೆ ಜಿಲ್ಲೆಯಲ್ಲಿ 2011ರಲ್ಲಿ ಚಾಲನೆ ಸಿಕ್ಕಿತು. ನಿಗದಿ ಪಡಿಸಿದ ಗುರಿಯಂತೆ 1.23 ಲಕ್ಷ ನಿರಕ್ಷರಿಗಳಿಗೆ 12,300 ಸ್ವಯಂಸೇವಕರು ತಮ್ಮೂರುಗಳಲ್ಲಿ ಸ್ವ ಇಚ್ಚೆಯಿಂದ ತಮ್ಮ ಮನೆ, ದೇಗುಲ, ಸಮುದಾಯ ಭವನಗಳಲ್ಲಿ ಸಂಜೆ, ರಾತ್ರಿಯ ವೇಳೆ ವಯಸ್ಕರ ಶಿಕ್ಷಣ ಪದ್ಧತಿಯಡಿ ವರ್ಣಮಾಲೆಯ ಬದಲು ಪದಗಳನ್ನು ಬಳಸಿ ಶಿಕ್ಷಣ ಕಲಿಸಿದರು.