<p><strong>ಆಲಮಟ್ಟಿ:</strong> ಇಲ್ಲಿಯ ಆಲಮಟ್ಟಿ ಜಲಾಶಯದ ಬಳಿ ಅಂಗಡಿ ಇಟ್ಟುಕೊಂಡು ಚಹಾ, ಇನ್ನಿತರ ಸಣ್ಣಪುಟ್ಟ ವಸ್ತುಗಳ ಮಾರಾಟ ಮಾಡುವ ಚಹಾದಂಗಡಿ ಮಾಲೀಕನ ಮಗ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 94 ರಷ್ಟು ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ.</p>.<p>ಆಲಮಟ್ಟಿಯ ಕೃಷ್ಣಕುಮಾರ ಮುತ್ತಪ್ಪ ರಾಠೋಡ ಕನ್ನಡ 125, ಇಂಗ್ಲಿಷ್ 94, ಹಿಂದಿ 96, ಗಣಿತ 90, ಸಮಾಜ 93, ವಿಜ್ಞಾನದಲ್ಲಿ 89 ಅಂಕ ಪಡೆದು, ಶೇ 94 ಅಂಕ ಪಡೆದಿದ್ದಾರೆ.</p>.<p><strong>ಕೃಷ್ಣಕುಮಾರ ಮುತ್ತಪ್ಪ ರಾಠೋಡ ಅವರ </strong>ತಂದೆ ಮುತ್ತಪ್ಪ ಆಲಮಟ್ಟಿ ಜಲಾಶಯದ ಬಳಿ ಚಹಾ ಅಂಗಡಿ ಇಟ್ಟುಕೊಂಡು ಬದುಕು ಸಾಗಿಸುತ್ತಾರೆ. ‘ನಾನಂತೂ ನನ್ನ ಮಗನ ವಿದ್ಯಾಭ್ಯಾಸದ ಕಡೆ ಲಕ್ಷ್ಯ ವಹಿಸುವುದಿಲ್ಲ. ಯಾವುದೇ ಟ್ಯೂಷನ್ಗೂ ಆತ ಹೋಗಲ್ಲ. ಶಾಲೆಯಲ್ಲಿ ಶಿಕ್ಷಕರು ಹೇಳಿದನ್ನೇ ಕೇಳಿ, ಈ ಸಾಧನೆ ಮಾಡಿದ್ದಾನೆ. ನಾನು ಬೆಳಿಗ್ಗೆ ಕೆಲಸಕ್ಕೆ ಬಂದರೆ ಮರಳಿ ಮನೆಗೆ ರಾತ್ರಿಯೇ ಹೋಗುವುದು. ಇಂತಹ ಸ್ಥಿತಿಯಲ್ಲಿಯೂ ಆತ ಸಾಧನೆ ಮಾಡಿದ್ದು ಹೆಮ್ಮೆ ತಂದಿದೆ ಎಂದು ಮಗನ ಸಾಧನೆಗೆ ತಂದೆ ಮುತ್ತಪ್ಪ ರಾಠೋಡ ಪ್ರತಿಕ್ರಿಯಿಸಿದ್ದಾರೆ.</p>.<p>ಕೃಷ್ಣಕುಮಾರ ಗ್ರಾಮೀಣ ಭಾಗದಲ್ಲಿನ ಎಂ.ಎಚ್.ಎಂ ಪ್ರೌಢಶಾಲೆ ವಿದ್ಯಾರ್ಥಿ. ಈತನ ಸಾಧನೆಗೆ ಶಿಕ್ಷಕ ಬಳಗ ಕೂಡಾ ಹೆಮ್ಮೆ ವ್ಯಕ್ತಪಡಿಸಿದೆ.</p>.<p>ನಿತ್ಯ ಐದು ಗಂಟೆ ಓದುತ್ತಿದ್ದೆ, ಮೊಬೈಲ್ನಿಂದ ದೂರವಿದ್ದೆ, ಲಾಕ್ಡೌನ್ ಕಾರಣ ಪರೀಕ್ಷೆ ಮುಂದೂಡಲಾಗಿತ್ತು. ಮುಂಚೆಯೇ ನಿಗದಿಯಾಗಿದ್ದ ವೇಳಾಪಟ್ಟಿಯಂತೆ ಪರೀಕ್ಷೆ ನಡೆದಿದ್ದರೆ ಇನ್ನಷ್ಟು ಅಂಕ ಪಡೆಯುತ್ತಿದ್ದೆ ಎಂದು ಕೃಷ್ಣಕುಮಾರ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲಮಟ್ಟಿ:</strong> ಇಲ್ಲಿಯ ಆಲಮಟ್ಟಿ ಜಲಾಶಯದ ಬಳಿ ಅಂಗಡಿ ಇಟ್ಟುಕೊಂಡು ಚಹಾ, ಇನ್ನಿತರ ಸಣ್ಣಪುಟ್ಟ ವಸ್ತುಗಳ ಮಾರಾಟ ಮಾಡುವ ಚಹಾದಂಗಡಿ ಮಾಲೀಕನ ಮಗ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 94 ರಷ್ಟು ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ.</p>.<p>ಆಲಮಟ್ಟಿಯ ಕೃಷ್ಣಕುಮಾರ ಮುತ್ತಪ್ಪ ರಾಠೋಡ ಕನ್ನಡ 125, ಇಂಗ್ಲಿಷ್ 94, ಹಿಂದಿ 96, ಗಣಿತ 90, ಸಮಾಜ 93, ವಿಜ್ಞಾನದಲ್ಲಿ 89 ಅಂಕ ಪಡೆದು, ಶೇ 94 ಅಂಕ ಪಡೆದಿದ್ದಾರೆ.</p>.<p><strong>ಕೃಷ್ಣಕುಮಾರ ಮುತ್ತಪ್ಪ ರಾಠೋಡ ಅವರ </strong>ತಂದೆ ಮುತ್ತಪ್ಪ ಆಲಮಟ್ಟಿ ಜಲಾಶಯದ ಬಳಿ ಚಹಾ ಅಂಗಡಿ ಇಟ್ಟುಕೊಂಡು ಬದುಕು ಸಾಗಿಸುತ್ತಾರೆ. ‘ನಾನಂತೂ ನನ್ನ ಮಗನ ವಿದ್ಯಾಭ್ಯಾಸದ ಕಡೆ ಲಕ್ಷ್ಯ ವಹಿಸುವುದಿಲ್ಲ. ಯಾವುದೇ ಟ್ಯೂಷನ್ಗೂ ಆತ ಹೋಗಲ್ಲ. ಶಾಲೆಯಲ್ಲಿ ಶಿಕ್ಷಕರು ಹೇಳಿದನ್ನೇ ಕೇಳಿ, ಈ ಸಾಧನೆ ಮಾಡಿದ್ದಾನೆ. ನಾನು ಬೆಳಿಗ್ಗೆ ಕೆಲಸಕ್ಕೆ ಬಂದರೆ ಮರಳಿ ಮನೆಗೆ ರಾತ್ರಿಯೇ ಹೋಗುವುದು. ಇಂತಹ ಸ್ಥಿತಿಯಲ್ಲಿಯೂ ಆತ ಸಾಧನೆ ಮಾಡಿದ್ದು ಹೆಮ್ಮೆ ತಂದಿದೆ ಎಂದು ಮಗನ ಸಾಧನೆಗೆ ತಂದೆ ಮುತ್ತಪ್ಪ ರಾಠೋಡ ಪ್ರತಿಕ್ರಿಯಿಸಿದ್ದಾರೆ.</p>.<p>ಕೃಷ್ಣಕುಮಾರ ಗ್ರಾಮೀಣ ಭಾಗದಲ್ಲಿನ ಎಂ.ಎಚ್.ಎಂ ಪ್ರೌಢಶಾಲೆ ವಿದ್ಯಾರ್ಥಿ. ಈತನ ಸಾಧನೆಗೆ ಶಿಕ್ಷಕ ಬಳಗ ಕೂಡಾ ಹೆಮ್ಮೆ ವ್ಯಕ್ತಪಡಿಸಿದೆ.</p>.<p>ನಿತ್ಯ ಐದು ಗಂಟೆ ಓದುತ್ತಿದ್ದೆ, ಮೊಬೈಲ್ನಿಂದ ದೂರವಿದ್ದೆ, ಲಾಕ್ಡೌನ್ ಕಾರಣ ಪರೀಕ್ಷೆ ಮುಂದೂಡಲಾಗಿತ್ತು. ಮುಂಚೆಯೇ ನಿಗದಿಯಾಗಿದ್ದ ವೇಳಾಪಟ್ಟಿಯಂತೆ ಪರೀಕ್ಷೆ ನಡೆದಿದ್ದರೆ ಇನ್ನಷ್ಟು ಅಂಕ ಪಡೆಯುತ್ತಿದ್ದೆ ಎಂದು ಕೃಷ್ಣಕುಮಾರ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>