<p><strong>ವಿಜಯಪುರ: </strong>‘ನಮ್ದು ಒಣ ಬೇಸಾಯ ಈ ಸಲ ಜೋಳ ಹಾಕಿದ್ವಿ, ಮಳಿ ಚಲೋ ಆಗಿಲ್ರಿ, ಮತ್ತ ಹೊಟ್ಟಿಗ ಬೇಕಲ್ರಿ ಬಿಜಾಪುರ ಬಂದಿವಿ, ಕೆಲ್ಸ ಇದ್ರ ಹೇಳ್ರಿ ಮಾಡ್ತಿವಿ’ ಎಂದು ತಿಡಗುಂದಿ ಗ್ರಾಮದ ದಾನಪ್ಪ ಗೋಗರೆದರು.</p>.<p>ಬುತ್ತಿ ಚೀಲ ಕೈಯಲ್ಲಿ ಹಿಡಿದುಕೊಂಡು ಕೆಲಸ ಅರಸಿ ನಗರದ ಗೋದಾವರಿ ಹೋಟೆಲ್ ಬಳಿ ಬೆಳ್ಳಂಬೆಳಿಗ್ಗೆ ನೆರೆದಿದ್ದ ನೂರಾರು ಸಂಖ್ಯೆಯ ರೈತರು, ಕಾರ್ಮಿಕರ ನಿತ್ಯದ ಗೋಳಿದು.</p>.<p>ವಿಜಯಪುರ ನಗರದ ಸುತ್ತಲಿನ ಗ್ರಾಮಗಳಾದ ಬಬಲೇಶ್ವರ, ಭೂತನಾಳ, ಅರಕೇರಿ, ಬರಟಗಿ, ತಿಡಗುಂದಿ, ಕನ್ನೂರು, ಮಖಣಾಪೂರ, ಹೊರ್ತಿ, ಅತ್ತಾಲಟ್ಟಿ ಸೇರಿದಂತೆ ಸುತ್ತಲಿನ ಊರುಗಳಿಂದ ಕೂಲಿ ಕಾರ್ಮಿಕರು, ರೈತರು ‘ಇವತ್ತು ಕೆಲಸ ಸಿಕ್ಕರೆ ಸಾಕು’ ಎನ್ನುವ ಮನಸ್ಥಿತಿಯಲ್ಲಿ ನಗರಕ್ಕೆ ಗುಳೆ ಬರುತ್ತಿದ್ದಾರೆ.</p>.<p><strong>ಕೆಲಸಕ್ಕೆ ಕಾದು ಕುಳಿತ ಕಾರ್ಮಿಕರು:</strong></p>.<p>ಗ್ರಾಮೀಣ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಕೂಲಿ, ಕೆಲಸ ಸಿಗುತ್ತವೆ. ಳಿದ ಸಮಯದಲ್ಲಿ ಗ್ರಾಮೀಣ ಜನರು ನಗರದತ್ತ ಮುಖ ಮಾಡುತ್ತಾರೆ.</p>.<p>‘ಕೆಲಸ ಸಿಕ್ಕರೆ ಒಪ್ಪೊತ್ತಿನ ಊಟ, ಇಲ್ಲದಿದ್ದರೆ ಉಪವಾಸದ ನಿದ್ದೆ’ ಎನ್ನುತ್ತಾ ವಿಜಯಪುರ ನಗರ ಗೋದಾವರಿ ಹೋಟೆಲ್, ಬಿಎಲ್ಡಿಇ, ಬಂಜಾರಾ ಕ್ರಾಸ್, ಸೋಲಾಪುರ ನಾಕಾ, ಸಿಂದಗಿ ಬೈಪಾಸ್ ಸೇರಿದಂತೆ ಮುಖ್ಯ ವೃತ್ತಗಳಲ್ಲಿ ಬೆಳ್ಳಿಗ್ಗೆ 7 ರಿಂದ ಮಧ್ಯಾಹ್ನದ ವರೆಗೆ ಪ್ರತಿದಿನ ಸಾವಿರಾರು ಕೂಲಿ ಕಾರ್ಮಿಕರು ಕಾಯುತ್ತಿರುವ ದೃಶ್ಯ ಕಾಣಸುವುದು ಸಾಮಾನ್ಯ.</p>.<p><strong>ಕೆಲಸ ಯಾವುದೇ ಇರಲಿ ಜೈ:</strong></p>.<p>ಮನೆ ನಿರ್ಮಾಣದ ಕೆಲಸಗಳಾದ ಇಟ್ಟಿಗೆ ಹೊರುವುದು, ಗೌಂಡಿ ಕೆಲಸ, ಮನೆಗೆ ನೀರು ಹೊಡೆಯುವುದು, ರಸ್ತೆ ಕಾಮಗಾರಿ, ಮಣ್ಣು ಹೊರುವುದು, ಖಡಿ ಎತ್ತುವ ಕೆಲಸಕ್ಕೂ ಹಿಂಜರಿಯದೆ ಹೋಗುತ್ತಾರೆ.</p>.<p>ಬೆಳಿಗ್ಗೆಯಿಂದ ಸಂಜೆ ವರೆಗೆ ದುಡಿದು ₹500 ರಿಂದ ₹600 ಸಂಪಾದಿಸಿ ಮನೆ ಸೇರಿಕೊಳ್ಳುತ್ತಾರೆ.</p>.<p><strong>ವಾರಕ್ಕೆ 2 ಸಲಾ ಕೆಲಸ:</strong></p>.<p>ಪ್ರತಿದಿನ ಬುತ್ತಿ ಕಟ್ಟಿಕೊಂಡು ಬರುವ ಕಾರ್ಮಿಕರಿಗೆ ಕೆಲವು ದಿನ ಕೆಲಸ ಸಿಕ್ಕರೆ ಇನ್ನು ಕೆಲ ದಿನ ಕೆಲಸ ಸಿಗದ ಮನೆ ಬರಿಗೈಯಲ್ಲಿ ತೆರಳುತ್ತಾರೆ. ವಾರದಲ್ಲಿ ಎರಡು ದಿನ ಕೆಲಸ ಸಿಕ್ಕರೆ ಅದೇ ಪುಣ್ಯ. </p>.<p><strong>ಮಳೆಗಾಲದಲ್ಲಿ ಊರಲ್ಲೆ ಕೆಲಸ:</strong></p>.<p>ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾಯಕದಲ್ಲಿ ತೊಡಗುತ್ತಾರೆ. ತಮ್ಮ ಹೊಲಗಳಲ್ಲಿ ಬಿತ್ತನೆಗಳಲ್ಲಿ ತೊಡಗುತ್ತಾರೆ. ಕೃಷಿ ಕಾಯಕ ಮುಗಿಯುತ್ತಿದ್ದಂತೆ ಕುಟುಂಬ ನಿರ್ವಹಣೆಗೆ ಮಹಿಳೆಯರು ತಮ್ಮ ಊರಲ್ಲೇ ಕೆಲಸಕ್ಕೆ ಹೋದರೆ, ಪುರುಷರು ನಗರಗಳತ್ತ ಮುಖ ಮಾಡುತ್ತಾರೆ.</p>.<p><strong>ಕಾರ್ಮಿಕ ಕಾರ್ಡು ಇಲ್ರಿ:</strong></p>.<p>ಗ್ರಾಮೀಣ ಭಾಗದ ಜನರಿಗೆ ಸಹಕಾರಿಯಾಗಲಿ ಎಂದೆ ಸರ್ಕಾರ ಉದ್ಯೋಗ ಖಾತ್ರಿ ಅಡಿ ಜಾಬ್ಕಾರ್ಡ್, ಕಾರ್ಮಿಕ ಕಾರ್ಡ್ಗಳನ್ನು ವಿತರಿಸಲು ಮುಂದಾಗಿದ್ದರೂ ಅನೇಕ ಬಡ ಕಾರ್ಮಿಕರಿಗೆ ಕಾರ್ಡ್ಗಳು ಮುಟ್ಟದೆ ಇರುವುದು ವಿಪರ್ಯಾಸ.</p>.<p>‘ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಜಾಬ್ ಕಾರ್ಡ್ಗಳನ್ನು ಪಡೆದುಕೊಂಡಿದ್ದರೂ ಗ್ರಾಮ ಪಂಚಾಯಿತಿಗಳಲ್ಲಿ ಭಾಳ ದಿನಾ ಕೆಲಸ ಕೊಡಲ್ರಿ, ಯಾಕ್ ಸುಮ್ಮ ವಾದ ಮಾಡೋನು ಅಂತ ಸುಮ್ಮನಾಗಿ ಸಿಟಿ ಕಡೆ ಬಂದ ಬಿಡ್ತಿವ್ರಿ’ ಎನ್ನುತ್ತಾರೆ ಚೋರಗಿ ಗ್ರಾಮದ ಚನಗೊಂಡ ಬೇನೂರ.</p>.<p>***</p>.<p>ನಮ್ಮ ಊರಾಗ ಕೆಲ್ಸಾ ಸಿಗಲ್ಲರಿ, ಹೊಲದಾಗ ಏನೂ ಬೆಳಿ ಹಾಕಿಲ್ಲ. ಮತ್ತ ಹೊಟ್ಟಿಗ ತುಂಬಾಕ ರೊಕ್ಕಾ ಬೇಕಲ್ರಿ ಅದಕ್ಕ ಬಿಜಾಪುರಕ್ಕ ಕೆಲಸ ಸಿಗುತ್ತ ಅಂತ ಬರ್ತಿವಿ.</p>.<p>–ಚನಗೊಂಡ ಬೇನೂರ, ಚೋರಗಿ ಗ್ರಾಮದ ನಿವಾಸಿ</p>.<p>***</p>.<p>ಕಾರ್ಮಿಕ ಕಾರ್ಡು ಮಾಡಿಸಿದ್ರು ಏನೂ ಉಪಯೋಗ ಆಗಿಲ್ಲ. ಮನೆಯ ತೊಂದರೆಗಳಿಂದಾಗಿ ಶಾಲೆ ಅರ್ದಕ್ಕೆ ಬಿಟ್ಟು ಕೆಲಸ ಮಾಡುತ್ತಿದ್ದೆನೆ. ಊರಲ್ಲಿ ಕೆಲಸ ಸಿಗದ ಕಾರಣ ವಿಜಯಪುರಕ್ಕೆ ಬರುತ್ತೇವೆ. ವಾರಕ್ಕೆ ಎರಡು ದಿನ ಕೆಲಸ ಸಿಕ್ರೆ ಅದೆ ಪುಣ್ಯ</p>.<p>–ಸುನೀಲ ನಾಯಕ, ಅತಾಲಟ್ಟಿ ತಾಂಡಾದ ನಿವಾಸಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ: </strong>‘ನಮ್ದು ಒಣ ಬೇಸಾಯ ಈ ಸಲ ಜೋಳ ಹಾಕಿದ್ವಿ, ಮಳಿ ಚಲೋ ಆಗಿಲ್ರಿ, ಮತ್ತ ಹೊಟ್ಟಿಗ ಬೇಕಲ್ರಿ ಬಿಜಾಪುರ ಬಂದಿವಿ, ಕೆಲ್ಸ ಇದ್ರ ಹೇಳ್ರಿ ಮಾಡ್ತಿವಿ’ ಎಂದು ತಿಡಗುಂದಿ ಗ್ರಾಮದ ದಾನಪ್ಪ ಗೋಗರೆದರು.</p>.<p>ಬುತ್ತಿ ಚೀಲ ಕೈಯಲ್ಲಿ ಹಿಡಿದುಕೊಂಡು ಕೆಲಸ ಅರಸಿ ನಗರದ ಗೋದಾವರಿ ಹೋಟೆಲ್ ಬಳಿ ಬೆಳ್ಳಂಬೆಳಿಗ್ಗೆ ನೆರೆದಿದ್ದ ನೂರಾರು ಸಂಖ್ಯೆಯ ರೈತರು, ಕಾರ್ಮಿಕರ ನಿತ್ಯದ ಗೋಳಿದು.</p>.<p>ವಿಜಯಪುರ ನಗರದ ಸುತ್ತಲಿನ ಗ್ರಾಮಗಳಾದ ಬಬಲೇಶ್ವರ, ಭೂತನಾಳ, ಅರಕೇರಿ, ಬರಟಗಿ, ತಿಡಗುಂದಿ, ಕನ್ನೂರು, ಮಖಣಾಪೂರ, ಹೊರ್ತಿ, ಅತ್ತಾಲಟ್ಟಿ ಸೇರಿದಂತೆ ಸುತ್ತಲಿನ ಊರುಗಳಿಂದ ಕೂಲಿ ಕಾರ್ಮಿಕರು, ರೈತರು ‘ಇವತ್ತು ಕೆಲಸ ಸಿಕ್ಕರೆ ಸಾಕು’ ಎನ್ನುವ ಮನಸ್ಥಿತಿಯಲ್ಲಿ ನಗರಕ್ಕೆ ಗುಳೆ ಬರುತ್ತಿದ್ದಾರೆ.</p>.<p><strong>ಕೆಲಸಕ್ಕೆ ಕಾದು ಕುಳಿತ ಕಾರ್ಮಿಕರು:</strong></p>.<p>ಗ್ರಾಮೀಣ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಕೂಲಿ, ಕೆಲಸ ಸಿಗುತ್ತವೆ. ಳಿದ ಸಮಯದಲ್ಲಿ ಗ್ರಾಮೀಣ ಜನರು ನಗರದತ್ತ ಮುಖ ಮಾಡುತ್ತಾರೆ.</p>.<p>‘ಕೆಲಸ ಸಿಕ್ಕರೆ ಒಪ್ಪೊತ್ತಿನ ಊಟ, ಇಲ್ಲದಿದ್ದರೆ ಉಪವಾಸದ ನಿದ್ದೆ’ ಎನ್ನುತ್ತಾ ವಿಜಯಪುರ ನಗರ ಗೋದಾವರಿ ಹೋಟೆಲ್, ಬಿಎಲ್ಡಿಇ, ಬಂಜಾರಾ ಕ್ರಾಸ್, ಸೋಲಾಪುರ ನಾಕಾ, ಸಿಂದಗಿ ಬೈಪಾಸ್ ಸೇರಿದಂತೆ ಮುಖ್ಯ ವೃತ್ತಗಳಲ್ಲಿ ಬೆಳ್ಳಿಗ್ಗೆ 7 ರಿಂದ ಮಧ್ಯಾಹ್ನದ ವರೆಗೆ ಪ್ರತಿದಿನ ಸಾವಿರಾರು ಕೂಲಿ ಕಾರ್ಮಿಕರು ಕಾಯುತ್ತಿರುವ ದೃಶ್ಯ ಕಾಣಸುವುದು ಸಾಮಾನ್ಯ.</p>.<p><strong>ಕೆಲಸ ಯಾವುದೇ ಇರಲಿ ಜೈ:</strong></p>.<p>ಮನೆ ನಿರ್ಮಾಣದ ಕೆಲಸಗಳಾದ ಇಟ್ಟಿಗೆ ಹೊರುವುದು, ಗೌಂಡಿ ಕೆಲಸ, ಮನೆಗೆ ನೀರು ಹೊಡೆಯುವುದು, ರಸ್ತೆ ಕಾಮಗಾರಿ, ಮಣ್ಣು ಹೊರುವುದು, ಖಡಿ ಎತ್ತುವ ಕೆಲಸಕ್ಕೂ ಹಿಂಜರಿಯದೆ ಹೋಗುತ್ತಾರೆ.</p>.<p>ಬೆಳಿಗ್ಗೆಯಿಂದ ಸಂಜೆ ವರೆಗೆ ದುಡಿದು ₹500 ರಿಂದ ₹600 ಸಂಪಾದಿಸಿ ಮನೆ ಸೇರಿಕೊಳ್ಳುತ್ತಾರೆ.</p>.<p><strong>ವಾರಕ್ಕೆ 2 ಸಲಾ ಕೆಲಸ:</strong></p>.<p>ಪ್ರತಿದಿನ ಬುತ್ತಿ ಕಟ್ಟಿಕೊಂಡು ಬರುವ ಕಾರ್ಮಿಕರಿಗೆ ಕೆಲವು ದಿನ ಕೆಲಸ ಸಿಕ್ಕರೆ ಇನ್ನು ಕೆಲ ದಿನ ಕೆಲಸ ಸಿಗದ ಮನೆ ಬರಿಗೈಯಲ್ಲಿ ತೆರಳುತ್ತಾರೆ. ವಾರದಲ್ಲಿ ಎರಡು ದಿನ ಕೆಲಸ ಸಿಕ್ಕರೆ ಅದೇ ಪುಣ್ಯ. </p>.<p><strong>ಮಳೆಗಾಲದಲ್ಲಿ ಊರಲ್ಲೆ ಕೆಲಸ:</strong></p>.<p>ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾಯಕದಲ್ಲಿ ತೊಡಗುತ್ತಾರೆ. ತಮ್ಮ ಹೊಲಗಳಲ್ಲಿ ಬಿತ್ತನೆಗಳಲ್ಲಿ ತೊಡಗುತ್ತಾರೆ. ಕೃಷಿ ಕಾಯಕ ಮುಗಿಯುತ್ತಿದ್ದಂತೆ ಕುಟುಂಬ ನಿರ್ವಹಣೆಗೆ ಮಹಿಳೆಯರು ತಮ್ಮ ಊರಲ್ಲೇ ಕೆಲಸಕ್ಕೆ ಹೋದರೆ, ಪುರುಷರು ನಗರಗಳತ್ತ ಮುಖ ಮಾಡುತ್ತಾರೆ.</p>.<p><strong>ಕಾರ್ಮಿಕ ಕಾರ್ಡು ಇಲ್ರಿ:</strong></p>.<p>ಗ್ರಾಮೀಣ ಭಾಗದ ಜನರಿಗೆ ಸಹಕಾರಿಯಾಗಲಿ ಎಂದೆ ಸರ್ಕಾರ ಉದ್ಯೋಗ ಖಾತ್ರಿ ಅಡಿ ಜಾಬ್ಕಾರ್ಡ್, ಕಾರ್ಮಿಕ ಕಾರ್ಡ್ಗಳನ್ನು ವಿತರಿಸಲು ಮುಂದಾಗಿದ್ದರೂ ಅನೇಕ ಬಡ ಕಾರ್ಮಿಕರಿಗೆ ಕಾರ್ಡ್ಗಳು ಮುಟ್ಟದೆ ಇರುವುದು ವಿಪರ್ಯಾಸ.</p>.<p>‘ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಜಾಬ್ ಕಾರ್ಡ್ಗಳನ್ನು ಪಡೆದುಕೊಂಡಿದ್ದರೂ ಗ್ರಾಮ ಪಂಚಾಯಿತಿಗಳಲ್ಲಿ ಭಾಳ ದಿನಾ ಕೆಲಸ ಕೊಡಲ್ರಿ, ಯಾಕ್ ಸುಮ್ಮ ವಾದ ಮಾಡೋನು ಅಂತ ಸುಮ್ಮನಾಗಿ ಸಿಟಿ ಕಡೆ ಬಂದ ಬಿಡ್ತಿವ್ರಿ’ ಎನ್ನುತ್ತಾರೆ ಚೋರಗಿ ಗ್ರಾಮದ ಚನಗೊಂಡ ಬೇನೂರ.</p>.<p>***</p>.<p>ನಮ್ಮ ಊರಾಗ ಕೆಲ್ಸಾ ಸಿಗಲ್ಲರಿ, ಹೊಲದಾಗ ಏನೂ ಬೆಳಿ ಹಾಕಿಲ್ಲ. ಮತ್ತ ಹೊಟ್ಟಿಗ ತುಂಬಾಕ ರೊಕ್ಕಾ ಬೇಕಲ್ರಿ ಅದಕ್ಕ ಬಿಜಾಪುರಕ್ಕ ಕೆಲಸ ಸಿಗುತ್ತ ಅಂತ ಬರ್ತಿವಿ.</p>.<p>–ಚನಗೊಂಡ ಬೇನೂರ, ಚೋರಗಿ ಗ್ರಾಮದ ನಿವಾಸಿ</p>.<p>***</p>.<p>ಕಾರ್ಮಿಕ ಕಾರ್ಡು ಮಾಡಿಸಿದ್ರು ಏನೂ ಉಪಯೋಗ ಆಗಿಲ್ಲ. ಮನೆಯ ತೊಂದರೆಗಳಿಂದಾಗಿ ಶಾಲೆ ಅರ್ದಕ್ಕೆ ಬಿಟ್ಟು ಕೆಲಸ ಮಾಡುತ್ತಿದ್ದೆನೆ. ಊರಲ್ಲಿ ಕೆಲಸ ಸಿಗದ ಕಾರಣ ವಿಜಯಪುರಕ್ಕೆ ಬರುತ್ತೇವೆ. ವಾರಕ್ಕೆ ಎರಡು ದಿನ ಕೆಲಸ ಸಿಕ್ರೆ ಅದೆ ಪುಣ್ಯ</p>.<p>–ಸುನೀಲ ನಾಯಕ, ಅತಾಲಟ್ಟಿ ತಾಂಡಾದ ನಿವಾಸಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>