<p><strong>ವಿಜಯಪುರ</strong>: ಮಹಾರಾಷ್ಟ್ರ ರಾಜ್ಯದ ಅಕ್ಕಲಕೋಟೆ ತಾಲ್ಲೂಕಿನ ಹಂದ್ರಾಳ ಗ್ರಾಮದ ಮಲ್ಲಿಕಾರ್ಜುನ ಕಾಟಗಾಂವ ಮತ್ತು ಅವರ ಕಾರು ಚಾಲಕ ಸಿದ್ದಣ್ಣ ಪೂಜಾರಿ ಎಂಬುವವರನ್ನು ಅಪಹರಿಸಿ, ₹ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ದರೋಡೆಕೋರರನ್ನು ಸಿಂದಗಿ ಠಾಣೆ ಪೊಲೀಸರು ಪ್ರಕರಣ ನಡೆದು ಕೇವಲ ಒಂದೇ ದಿನದೊಳಗೆ ಬಂಧಿಸಿದ್ದಾರೆ.</p>.<p>ದರೋಡೆಕೋರರಾದ ದೇವಣಗಾಂವದ ರಮೇಶ ಸೊಡ್ಡಿ, ಆಲಮೇಲದ ಮಹ್ಮದಲಿ ಕಲ್ಮನಿ(26), ಅಫಝಲಪುರದ ಸತೀಶ ಆರೇಕರ(32), ದೇವಣಗಾಂವದ ರಾಜು ನಧಾಪ(22), ಅಫಝಲಪುರದ ಇಸ್ಮಾಯಿಲ್ ಕೊತಂಬರಿ ಮತ್ತು ದೇವಣದಾಗವರ ಜಮೀರ ಆಲಮೇಲ(25) ಎಂಬುವವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ತಿಳಿಸಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬಂಧಿತರಿಂದ ಒಂದು ನಾಡ ಪಿಸ್ತೂಲ್, 5 ಜೀವಂತ ಗುಂಡು ಹಾಗೂ ಪ್ರಕರಣಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.</p>.<p>ಮಲ್ಲಿಕಾರ್ಜುನ ಕಾಟಗಾಂವ ಮತ್ತು ಅವರ ಕಾರು ಚಾಲಕಗುರುವಾರ ಜೇವರ್ಗಿ ತಾಲ್ಲೂಕಿನ ಹುಲ್ಲೂರ ಗ್ರಾಮದಿಂದ ಅಫಝಲಪುರಕ್ಕೆ ಹೋಗುವಾಗ ಬಗಲೂರ ಗ್ರಾಮದ ಬಳಿ ಅಡ್ಡಗಟ್ಟಿ ಅಪಹರಣ ಮಾಡಿದ್ದರು. ಬಳಿಕ ದರೋಡೆಕೋರರು ನಾಡ ಪಿಸ್ತೂಲ್ ತೋರಿಸಿ ಬೆದರಿಸಿ, ಅವರ ಮಗನಿಗೆ ₹ 5 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.</p>.<p>ಕಾರ್ಯಾಚರಣೆ ನಡೆಸಿದ ಸಿಂದಗಿ ಸಿಪಿಐ ಎಚ್.ಎಂ.ಪಾಟೀಲ್, ಪಿಎಸ್ಐಅವಿನಾಶ ಯರಗೊಪ್ಪ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ</strong>: ಮಹಾರಾಷ್ಟ್ರ ರಾಜ್ಯದ ಅಕ್ಕಲಕೋಟೆ ತಾಲ್ಲೂಕಿನ ಹಂದ್ರಾಳ ಗ್ರಾಮದ ಮಲ್ಲಿಕಾರ್ಜುನ ಕಾಟಗಾಂವ ಮತ್ತು ಅವರ ಕಾರು ಚಾಲಕ ಸಿದ್ದಣ್ಣ ಪೂಜಾರಿ ಎಂಬುವವರನ್ನು ಅಪಹರಿಸಿ, ₹ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ದರೋಡೆಕೋರರನ್ನು ಸಿಂದಗಿ ಠಾಣೆ ಪೊಲೀಸರು ಪ್ರಕರಣ ನಡೆದು ಕೇವಲ ಒಂದೇ ದಿನದೊಳಗೆ ಬಂಧಿಸಿದ್ದಾರೆ.</p>.<p>ದರೋಡೆಕೋರರಾದ ದೇವಣಗಾಂವದ ರಮೇಶ ಸೊಡ್ಡಿ, ಆಲಮೇಲದ ಮಹ್ಮದಲಿ ಕಲ್ಮನಿ(26), ಅಫಝಲಪುರದ ಸತೀಶ ಆರೇಕರ(32), ದೇವಣಗಾಂವದ ರಾಜು ನಧಾಪ(22), ಅಫಝಲಪುರದ ಇಸ್ಮಾಯಿಲ್ ಕೊತಂಬರಿ ಮತ್ತು ದೇವಣದಾಗವರ ಜಮೀರ ಆಲಮೇಲ(25) ಎಂಬುವವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ತಿಳಿಸಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬಂಧಿತರಿಂದ ಒಂದು ನಾಡ ಪಿಸ್ತೂಲ್, 5 ಜೀವಂತ ಗುಂಡು ಹಾಗೂ ಪ್ರಕರಣಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.</p>.<p>ಮಲ್ಲಿಕಾರ್ಜುನ ಕಾಟಗಾಂವ ಮತ್ತು ಅವರ ಕಾರು ಚಾಲಕಗುರುವಾರ ಜೇವರ್ಗಿ ತಾಲ್ಲೂಕಿನ ಹುಲ್ಲೂರ ಗ್ರಾಮದಿಂದ ಅಫಝಲಪುರಕ್ಕೆ ಹೋಗುವಾಗ ಬಗಲೂರ ಗ್ರಾಮದ ಬಳಿ ಅಡ್ಡಗಟ್ಟಿ ಅಪಹರಣ ಮಾಡಿದ್ದರು. ಬಳಿಕ ದರೋಡೆಕೋರರು ನಾಡ ಪಿಸ್ತೂಲ್ ತೋರಿಸಿ ಬೆದರಿಸಿ, ಅವರ ಮಗನಿಗೆ ₹ 5 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.</p>.<p>ಕಾರ್ಯಾಚರಣೆ ನಡೆಸಿದ ಸಿಂದಗಿ ಸಿಪಿಐ ಎಚ್.ಎಂ.ಪಾಟೀಲ್, ಪಿಎಸ್ಐಅವಿನಾಶ ಯರಗೊಪ್ಪ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>