ಜಿಲ್ಲೆಯ ಸಿಂದಗಿ ಮತ್ತು ಇಂಡಿ ತಾಲ್ಲೂಕಿನ ರೈತರ ಹೊಲಗಳಿಗೆ ನೀರುಣಿಸುವ ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆಯ ಆರೂ ಪಂಪ್ಗಳು 2015 ರಿಂದ ದುರಸ್ತಿಯಾಗದೆ ನಿಷ್ಕ್ರಿಯಗೊಂಡು ವಿಶೇಷವಾಗಿ ಕಾಲುವೆ ಕೊನೆ ಅಂಚಿನ ಭಾಗಕ್ಕೆ ಹಾಗೂ ಕಾಲುವೆಯ ಬಹುತೇಕ ಪ್ರದೇಶಕ್ಕೆ ನೀರು ಪೂರೈಕೆ ಆಗದೆ ವ್ಯತ್ಯಯ ಉಂಟಾಗಿತ್ತು. ಈಗ ಆರು ಪಂಪ್ಗಳ ಪೈಕಿ ನಾಲ್ಕು ಪಂಪ್ಗಳು ದುರಸ್ತಿಯಾಗಿ ಕಾರ್ಯಾರಂಭ ಮಾಡಿವೆ. ಇನ್ನೂ ಒಂದು ಪಂಪ್ ಸೆಪ್ಟೆಂಬರ್ 6ರಂದು ದುರಸ್ತಿಯಾಗಿ ಯೋಜನಾ ಪ್ರದೇಶ ತಲುಪಲಿದ್ದು, ಸೆಪ್ಟೆಂಬರ್ 7ರಂದು ಪಂಪ್ ಅನ್ನು ಕೂಡಾ ಚಾಲನೆಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ.