<p><strong>ವಿಜಯಪುರ:</strong> ಪ್ರಸಕ್ತ ಸಾಲಿನಲ್ಲಿ ಆಲಮಟ್ಟಿ ಜಲಾಶಯ ಇದೇ ಮೊದಲ ಬಾರಿಗೆ ಗರಿಷ್ಠ ಮಟ್ಟ 519.60 ಮೀಟರ್ ವರೆಗೆ ಶನಿವಾರ ನೀರು ಸಂಗ್ರಹಿಸಲಾಗಿದೆ. ಸದ್ಯ ಜಲಾಶಯದಲ್ಲಿ 123.081 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.</p><p>ಜೂನ್ 7ರಂದು ಜಲಾಶಯದ ಒಳಹರಿವು ಆರಂಭಗೊಂಡಿದ್ದು, ಜುಲೈ ಕೊನೆಯ ವಾರದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದರೂ, ಪ್ರವಾಹ ಮುಂಜಾಗ್ರತೆಯ ಕ್ರಮವಾಗಿ ಜಲಾಶಯವನ್ನು ಭರ್ತಿ ಮಾಡಿರಲಿಲ್ಲ. ಆಗಸ್ಟ್ ಎರಡನೇ ವಾರದಲ್ಲಿ ಒಳಹರಿವು ಕಡಿಮೆಯಾದ ನಂತರ ಹಂತ ಹಂತವಾಗಿ ಜಲಾಶಯದಲ್ಲಿ ನೀರನ್ನು ಸಂಗ್ರಹಿಸಿ, ಶನಿವಾರ ಭರ್ತಿ ಮಾಡಲಾಗಿದೆ.</p><p><strong>ಅಚ್ಚುಕಟ್ಟು ಮೇಲ್ವಿಚಾರಣೆ:</strong> ಈ ಬಾರಿ ಎಲ್ಲಿಯೂ ಹೆಚ್ಚು ಪ್ರವಾಹ ಸೃಷ್ಠಿಯಾಗದಂತೆ ವ್ಯವಸ್ಥಿತವಾಗಿ ಜಲಾಶಯದ ನೀರಿನ ನಿರ್ವಹಣೆಯನ್ನು ಮಾಡಲಾಗಿದೆ.</p><p><strong>ಬಾಗಿನದ ಸಿದ್ಧತೆ ಆರಂಭ: </strong>ಆ.21ಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಭರ್ತಿಯಾಗಿರುವ ಆಲಮಟ್ಟಿ ಜಲಾಶಯದಲ್ಲಿ ಕೃಷ್ಣೆಗೆ ಬಾಗಿನ ಅರ್ಪಿಸಲಿದ್ದಾರೆ. ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ಪ್ರಸಕ್ತ ಸಾಲಿನಲ್ಲಿ ಆಲಮಟ್ಟಿ ಜಲಾಶಯ ಇದೇ ಮೊದಲ ಬಾರಿಗೆ ಗರಿಷ್ಠ ಮಟ್ಟ 519.60 ಮೀಟರ್ ವರೆಗೆ ಶನಿವಾರ ನೀರು ಸಂಗ್ರಹಿಸಲಾಗಿದೆ. ಸದ್ಯ ಜಲಾಶಯದಲ್ಲಿ 123.081 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.</p><p>ಜೂನ್ 7ರಂದು ಜಲಾಶಯದ ಒಳಹರಿವು ಆರಂಭಗೊಂಡಿದ್ದು, ಜುಲೈ ಕೊನೆಯ ವಾರದಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದರೂ, ಪ್ರವಾಹ ಮುಂಜಾಗ್ರತೆಯ ಕ್ರಮವಾಗಿ ಜಲಾಶಯವನ್ನು ಭರ್ತಿ ಮಾಡಿರಲಿಲ್ಲ. ಆಗಸ್ಟ್ ಎರಡನೇ ವಾರದಲ್ಲಿ ಒಳಹರಿವು ಕಡಿಮೆಯಾದ ನಂತರ ಹಂತ ಹಂತವಾಗಿ ಜಲಾಶಯದಲ್ಲಿ ನೀರನ್ನು ಸಂಗ್ರಹಿಸಿ, ಶನಿವಾರ ಭರ್ತಿ ಮಾಡಲಾಗಿದೆ.</p><p><strong>ಅಚ್ಚುಕಟ್ಟು ಮೇಲ್ವಿಚಾರಣೆ:</strong> ಈ ಬಾರಿ ಎಲ್ಲಿಯೂ ಹೆಚ್ಚು ಪ್ರವಾಹ ಸೃಷ್ಠಿಯಾಗದಂತೆ ವ್ಯವಸ್ಥಿತವಾಗಿ ಜಲಾಶಯದ ನೀರಿನ ನಿರ್ವಹಣೆಯನ್ನು ಮಾಡಲಾಗಿದೆ.</p><p><strong>ಬಾಗಿನದ ಸಿದ್ಧತೆ ಆರಂಭ: </strong>ಆ.21ಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಭರ್ತಿಯಾಗಿರುವ ಆಲಮಟ್ಟಿ ಜಲಾಶಯದಲ್ಲಿ ಕೃಷ್ಣೆಗೆ ಬಾಗಿನ ಅರ್ಪಿಸಲಿದ್ದಾರೆ. ಬಾಗಿನ ಅರ್ಪಣೆ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>