ಗ್ರಾಮೀಣ ಬ್ಯಾಂಕಿನ ಹಲವಾರು ನೌಕರರು ಕೊರೊನಾದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದು, ನಮ್ಮ ರಕ್ಷಣೆಗಾಗಿ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಜಿ.ಗಾಂಧಿ, ಪದಾಧಿಕಾರಿಗಳಾದ ಶಿವಾಜಿ ಇನಾಮದಾರ, ಸಿ.ಎ. ಗಂಟೆಪ್ಪಗೋಳ, ಸುನೀಲ ನಾಯ್ಕ ಹಾಗೂ ಬಸವರಾಜ ಸರಬಡಗಿ ಅವರು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.