<p><strong>ಇಂಡಿ:</strong> ತಾಲ್ಲೂಕಿನ ಭೀಮಾ ನದಿ ತೀರದ 30ಕ್ಕಿಂತಲೂ ಹೆಚ್ಚು ಹೊಳೆದಂಡೆಯ ಹಳ್ಳಿಗಾಡಿನ ಜನರು ತಮ್ಮ ದೈನಂದಿನ ಅವಶ್ಯಕತೆಗಳಿಗಾಗಿ ಜಿಲ್ಲಾ ಕೇಂದ್ರವಾದ ವಿಜಯಪುರಕ್ಕಿಂತ ನದಿ ಆಚೆಗಿನ ಸೋಲಾಪುರ ನಗರದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ.</p>.<p>ಇಂಡಿ ಕ್ಷೇತ್ರ ಸೇರಿದಂತೆ ಜಿಲ್ಲೆಯ ನಾನಾ ಭಾಗದ ಜನರು ಮೈದುಂಬಿ ಹರಿಯುವ ಭೀಮಾ ನದಿ ದಾಟಲು ಸೂಕ್ತ ಸೇತುವೆ ಇಲ್ಲದಿರುವನ್ನು ಮನಗಂಡು ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಹೊಸದೊಂದು ಸೇತುವೆ ನಿರ್ಮಾಣಕ್ಕೆ ಶ್ರಮಿಸಿದ್ದಾರೆ.</p>.<p>ಇಂಡಿ ತಾಲ್ಲೂಕಿನ ಪಡನೂರ ಹಾಗೂ ಸೋಲಾಪುರ ಜಿಲ್ಲೆಯ ಅಕ್ಕಲಕೋಟ ತಾಲ್ಲೂಕಿನ ಅಂಕಲಗಿ ಗ್ರಾಮಗಳ ಮಧ್ಯೆ ಭೀಮಾ ನದಿಗೆ ಅಡ್ಡಲಾಗಿ ₹ 65 ಕೋಟಿ ವೆಚ್ಚದಲ್ಲಿ ಸೇತುವೆಯೊಂದನ್ನು ನಿರ್ಮಿಸಲು ಶಾಸಕರು ಮುಹೂರ್ತ ನಿಗದಿಗೊಳಿಸಿದ್ದಾರೆ.</p>.<p>ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಐತಿಹಾಸಿಕ ಭೀಮಾ ಸೇತುವೆಗೆ ಜುಲೈ 14 ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.</p>.<p>ಭೀಮಾತೀರದಲ್ಲಿ ಗಡಿ, ನುಡಿಯನ್ನು ಮೀರಿ ಕರ್ನಾಟಕ–ಮಹಾರಾಷ್ಟ್ರ ನಡುವೆ ಹೊಸ ಬಾಂಧವ್ಯಕ್ಕೆ ಈ ಸೇತುವೆ ಅಕ್ಷರಶಃ ಸೇತುವೆಯಾಗಲಿದೆ. ಕನ್ನಡಿಗರ ಹಾಗೂ ಮರಾಠಿಗರ ನಡುವಿನ ಸಂಪರ್ಕದ ಕೊಂಡಿಯಾಗಲಿದೆ. </p>.<p>ಈ ಭಾಗದ ಅಭಿವೃದ್ಧಿಗೆ ಹೊಸ ಶೆಕೆ ಬರೆಯಲಿದೆ ಎನ್ನುತ್ತಾರೆ ನೆರೆಯ ಅಕ್ಕಲಕೋಟ ತಾಲ್ಲೂಕಿನ ತಡವಾಳ ಗ್ರಾಮದ ನಿವಾಸಿ ಹಾಗೂ ಅಲ್ಲಿನ ಸ್ಥಳೀಯ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಿವಾನಂದ ಮಾನಶೆಟ್ಟಿ.</p>.<p>ಪಡನೂರ ನದಿಗೆ ಅಡ್ಡಲಾಗಿ ಕಟ್ಟಲಾಗುತ್ತಿರುವ ಈ ಸೇತುವೆಯಿಂದ ಮಳೆಗಾಲದಲ್ಲಿ ಭೀಮಾ ನದಿ ದಾಟುವುದೇ ಖುಷಿಯ ವಿಷಯ ಎನ್ನುತ್ತಾರೆ ಪಡನೂರಿನ ನಿವಾಸಿ, ಇಂಡಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪಂಚು ಅರವತ್ತು.</p>.<div><blockquote>ಭೀಮಾ ನದಿಗೆ ಸೇತುವೆ ನಿರ್ಮಾಣದಿಂದ ಈ ಭಾಗದಲ್ಲಿ ಉದ್ಯೋಗ ಉದ್ಯಮ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಪುಷ್ಟಿ ಸಿಗಲಿದೆ. ಎರಡು ರಾಜ್ಯವನ್ನು ಪರಸ್ಪರ ಬೆಸೆಯುವ ಈ ಸೇತುವೆ ಹೊಳೆದಂಡೆಯ ಜನರ ಬದುಕಿನ ಸೇತುವೆಯಾಗಲಿದೆ </blockquote><span class="attribution">ಯಶವಂತರಾಯಗೌಡ ಪಾಟೀಲ ಶಾಸಕ ಇಂಡಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇಂಡಿ:</strong> ತಾಲ್ಲೂಕಿನ ಭೀಮಾ ನದಿ ತೀರದ 30ಕ್ಕಿಂತಲೂ ಹೆಚ್ಚು ಹೊಳೆದಂಡೆಯ ಹಳ್ಳಿಗಾಡಿನ ಜನರು ತಮ್ಮ ದೈನಂದಿನ ಅವಶ್ಯಕತೆಗಳಿಗಾಗಿ ಜಿಲ್ಲಾ ಕೇಂದ್ರವಾದ ವಿಜಯಪುರಕ್ಕಿಂತ ನದಿ ಆಚೆಗಿನ ಸೋಲಾಪುರ ನಗರದ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ.</p>.<p>ಇಂಡಿ ಕ್ಷೇತ್ರ ಸೇರಿದಂತೆ ಜಿಲ್ಲೆಯ ನಾನಾ ಭಾಗದ ಜನರು ಮೈದುಂಬಿ ಹರಿಯುವ ಭೀಮಾ ನದಿ ದಾಟಲು ಸೂಕ್ತ ಸೇತುವೆ ಇಲ್ಲದಿರುವನ್ನು ಮನಗಂಡು ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಹೊಸದೊಂದು ಸೇತುವೆ ನಿರ್ಮಾಣಕ್ಕೆ ಶ್ರಮಿಸಿದ್ದಾರೆ.</p>.<p>ಇಂಡಿ ತಾಲ್ಲೂಕಿನ ಪಡನೂರ ಹಾಗೂ ಸೋಲಾಪುರ ಜಿಲ್ಲೆಯ ಅಕ್ಕಲಕೋಟ ತಾಲ್ಲೂಕಿನ ಅಂಕಲಗಿ ಗ್ರಾಮಗಳ ಮಧ್ಯೆ ಭೀಮಾ ನದಿಗೆ ಅಡ್ಡಲಾಗಿ ₹ 65 ಕೋಟಿ ವೆಚ್ಚದಲ್ಲಿ ಸೇತುವೆಯೊಂದನ್ನು ನಿರ್ಮಿಸಲು ಶಾಸಕರು ಮುಹೂರ್ತ ನಿಗದಿಗೊಳಿಸಿದ್ದಾರೆ.</p>.<p>ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಐತಿಹಾಸಿಕ ಭೀಮಾ ಸೇತುವೆಗೆ ಜುಲೈ 14 ರಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.</p>.<p>ಭೀಮಾತೀರದಲ್ಲಿ ಗಡಿ, ನುಡಿಯನ್ನು ಮೀರಿ ಕರ್ನಾಟಕ–ಮಹಾರಾಷ್ಟ್ರ ನಡುವೆ ಹೊಸ ಬಾಂಧವ್ಯಕ್ಕೆ ಈ ಸೇತುವೆ ಅಕ್ಷರಶಃ ಸೇತುವೆಯಾಗಲಿದೆ. ಕನ್ನಡಿಗರ ಹಾಗೂ ಮರಾಠಿಗರ ನಡುವಿನ ಸಂಪರ್ಕದ ಕೊಂಡಿಯಾಗಲಿದೆ. </p>.<p>ಈ ಭಾಗದ ಅಭಿವೃದ್ಧಿಗೆ ಹೊಸ ಶೆಕೆ ಬರೆಯಲಿದೆ ಎನ್ನುತ್ತಾರೆ ನೆರೆಯ ಅಕ್ಕಲಕೋಟ ತಾಲ್ಲೂಕಿನ ತಡವಾಳ ಗ್ರಾಮದ ನಿವಾಸಿ ಹಾಗೂ ಅಲ್ಲಿನ ಸ್ಥಳೀಯ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಿವಾನಂದ ಮಾನಶೆಟ್ಟಿ.</p>.<p>ಪಡನೂರ ನದಿಗೆ ಅಡ್ಡಲಾಗಿ ಕಟ್ಟಲಾಗುತ್ತಿರುವ ಈ ಸೇತುವೆಯಿಂದ ಮಳೆಗಾಲದಲ್ಲಿ ಭೀಮಾ ನದಿ ದಾಟುವುದೇ ಖುಷಿಯ ವಿಷಯ ಎನ್ನುತ್ತಾರೆ ಪಡನೂರಿನ ನಿವಾಸಿ, ಇಂಡಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಪಂಚು ಅರವತ್ತು.</p>.<div><blockquote>ಭೀಮಾ ನದಿಗೆ ಸೇತುವೆ ನಿರ್ಮಾಣದಿಂದ ಈ ಭಾಗದಲ್ಲಿ ಉದ್ಯೋಗ ಉದ್ಯಮ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಪುಷ್ಟಿ ಸಿಗಲಿದೆ. ಎರಡು ರಾಜ್ಯವನ್ನು ಪರಸ್ಪರ ಬೆಸೆಯುವ ಈ ಸೇತುವೆ ಹೊಳೆದಂಡೆಯ ಜನರ ಬದುಕಿನ ಸೇತುವೆಯಾಗಲಿದೆ </blockquote><span class="attribution">ಯಶವಂತರಾಯಗೌಡ ಪಾಟೀಲ ಶಾಸಕ ಇಂಡಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>